ಆ್ಯಪ್ನಗರ

ಮಂಗಳೂರಿಗೆ ಕೋಸ್ಟ್‌ಗಾರ್ಡ್‌ ಅಕಾಡೆಮಿ: ಕೇರಳದಲ್ಲಿ ಸ್ಥಾಪಿಸಲು ಪಿಣರಾಯಿ ಒತ್ತಡ

ಕೇಂದ್ರ ಸರಕಾರವು ಉದ್ದೇಶಿತ ಕೋಸ್ಟ್‌ಗಾರ್ಡ್‌ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಿರುವುದನ್ನು ಕೇರಳ ಸಿಎಂ ವಿರೋಧಿಸಿದ್ದಾರೆ. ಕೇರಳದ ಕಣ್ಣೂರಿನಲ್ಲೇ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

Vijaya Karnataka Web 4 Dec 2019, 7:34 am
ತಿರುವನಂತಪುರಂ: ಕೇಂದ್ರ ಸರಕಾರವು ಉದ್ದೇಶಿತ ಕೋಸ್ಟ್‌ಗಾರ್ಡ್‌ ಅಕಾಡೆಮಿಯನ್ನು ಕೇರಳದ ಕಣ್ಣೂರಿನ ಬದಲು ಕರ್ನಾಟಕದ ಮಂಗಳೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಿರುವುದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಖಂಡಿಸಿದ್ದಾರೆ.
Vijaya Karnataka Web Pinarayi Vijayan


''ಈ ಯೋಜನೆಗೆ ಕೇಂದ್ರ ಸರಕಾರ 2009ರಲ್ಲಿಅನುಮತಿ ನೀಡಿತ್ತು. ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ ಅವರು 2011ರ ಮೇ ತಿಂಗಳಲ್ಲಿಶಂಕುಸ್ಥಾಪನೆ ನೆರವೇರಿ ದ್ದರು. ಅಕಾಡೆಮಿಗಾಗಿ 164 ಎಕರೆ ಭೂಮಿಯನ್ನೂ ರಾಜ್ಯ ಸರಕಾರ ಹಸ್ತಾಂತರಿಸಿತ್ತು. ಆದಾಗ್ಯೂ ಕೇಂದ್ರ ಸರಕಾರವು ಇಲ್ಲ ಸಲ್ಲದ ನೆಪ ಹೇಳಿ ಅಕಾಡೆಮಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿರುವುದು ಸರಿಯಲ್ಲ,'' ಎಂದು ಪಿಣರಾಯಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ಆದಷ್ಟು ಶೀಘ್ರ ಅಕಾಡೆಮಿ ಸ್ಥಾಪಿಸುವಂತೆ ಮನವಿ ಮಾಡಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ರಾಜ್ಯ ಸರಕಾರ ಗುರುತಿಸಿದ್ದ ಪ್ರದೇಶದಲ್ಲಿಅಕಾಡೆಮಿ ಕಾರ್ಯಾರಂಭಕ್ಕೆ ಪರಿಸರ ಇಲಾಖೆ ಅನುಮೋದನೆ ಅಗತ್ಯ ಎಂದು ಕೇರಳ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ತಿಳಿಸಿತ್ತು. ಪರಿಸರ ಇಲಾಖೆ ಅನುಮತಿ ನೀಡಿರಲಿಲ್ಲ.

ಕೋಸ್ಟ್‌ಗಾರ್ಡ್‌ಗೆ ಸ್ವಂತ ಕಟ್ಟಡ

ರಾಜ್ಯ ಸರಕಾರ ಪರ್ಯಾಯ ಭೂಮಿ ನೀಡಲು ವಿಫಲವಾದ್ದರಿಂದ ಯೋಜನೆಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸುವುದಾಗಿ ಕೇಂದ್ರ ಸಚಿವ ವಿ.ಮುರಳೀಧರನ್‌ ಘೋಷಿಸಿದ್ದಾರೆ. ''ಪರಿಸರ ಇಲಾಖೆ ಅನುಮತಿ ಹೆಸರಿನಲ್ಲಿ ಯೋಜನೆಯನ್ನು ರಾಜ್ಯದಿಂದಲೇ ಸ್ಥಳಾಂತರ ಮಾಡಿರುವುದು ದುರದೃಷ್ಟಕರ. ಕೇರಳಕ್ಕೆ ಅನ್ಯಾಯ ಮಾಡುವ ಈ ತೀರ್ಮಾ ನವನ್ನು ಕೈ ಬಿಟ್ಟು ಮಂಗಳೂರಿನ ಬದಲು ರಾಜ್ಯದಲ್ಲಿಯೇ ಕೋಸ್ಟ್‌ ಗಾರ್ಡ್‌ ಅಕಾಡೆಮಿ ಆರಂಭಿಸಬೇಕು,'' ಎಂದು ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ