ತಿರುವನಂತಪುರಂ: ಕೇರಳದ ಕಾಂಗ್ರೆಸ್ ನಾಯಕ ಕೆ. ಸುಧಾಕರನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಮಹಿಳೆಯರಿಗೆ ಅಪಮಾನ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಬುಧವಾರ ಕಾಸರಗೋಡಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ''ವಿಜಯನ್ ಅವರು ಅಧಿಕಾರ ಸ್ವೀಕರಿಸುವಾಗ ಅವರೊಬ್ಬ ಗಂಡಸಿನ ಹಾಗೆ ಅಧಿಕಾರ ಮಾಡಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಈಗ ಹೆಂಗಸರಿಗಿಂತಲೂ ಕಡೆಯಾಗಿದ್ದಾರೆ,'' ಎಂದು ಹೇಳಿದ್ದರು. ಅವರ ಮಾತು ವಿವಾದಕ್ಕೆ ಗುರಿಯಾಗುತ್ತಿದ್ದಂತೆಯೇ ತಾವು ಹಾಗೆ ಹೇಳಿದ್ದಲ್ಲ, ಕೆಲವೇ ಶಬ್ದಗಳನ್ನು ಎತ್ತಿ ಹಿಡಿದು ಮಾತನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಜತೆಗೆ ಕ್ಷಮೆ ಯಾಚಿಸಿದ್ದಾರೆ. ಸುಧಾಕರನ್ ಅವರು ಕಣ್ಣೂರಿನ ಮಾಜಿ ಸಂಸದರು.
ಸಿಎಂಗೆ ಬಯ್ಯುವ ಭರದಲ್ಲಿ ಮಹಿಳೆಯರಿಗೆ ಅಪಮಾನ
ಕಾಸರಗೋಡಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ''ವಿಜಯನ್ ಅವರು ಅಧಿಕಾರ ಸ್ವೀಕರಿಸುವಾಗ ಅವರೊಬ್ಬ ಗಂಡಸಿನ ಹಾಗೆ ಅಧಿಕಾರ ಮಾಡಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಈಗ ಹೆಂಗಸರಿಗಿಂತಲೂ ಕಡೆಯಾಗಿದ್ದಾರೆ,'' ಎಂದು ಕೇರಳದ ಕಾಂಗ್ರೆಸ್ ನಾಯಕ ಕೆ. ಸುಧಾಕರನ್ ಹೇಳಿದ್ದರು.
Vijaya Karnataka 25 Jan 2019, 5:00 am