ಆ್ಯಪ್ನಗರ

ಶಾಕಿಂಗ್..! ಕೊರೊನಾ ಸೋಂಕಿತ ವೃದ್ಧೆಯನ್ನು ಮಂಚಕ್ಕೆ ಕಟ್ಟಿಹಾಕಿ ದೌರ್ಜನ್ಯ..!

ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ತಡ, ಸಾಮಾನ್ಯ ಜನರಷ್ಟೇ ಅಲ್ಲ, ಜನಪ್ರತಿನಿಧಿಗಳೂ ಸಿಟ್ಟಿಗೆದ್ದಿದ್ದಾರೆ. ಕೇರಳದ ಕಾಂಗ್ರೆಸ್ ಸಂಸದ ಟಿ ಎನ್ ಪ್ರತಾಪನ್ ಅವರು ಈ ಕುರಿತಂತೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Mirror Now 25 Oct 2020, 2:15 pm

ಹೈಲೈಟ್ಸ್‌:

  • ವೃದ್ಧ ಮಹಿಳೆಯನ್ನು ಕಟ್ಟಿ ಹಾಕಿದ್ದ ಆಸ್ಪತ್ರೆ ಸಿಬ್ಬಂದಿ
  • ಮಂಚದಿಂದ ಕೆಳಗೆ ಬಿದ್ದರೂ ಎತ್ತುವವರು ಇಲ್ಲ
  • ಸರ್ಕಾರಿ ಆಸ್ಪತ್ರೆಯ ದೌರ್ಜನ್ಯಕ್ಕೆ ಆಕ್ರೋಶ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ತ್ರಿಶ್ಯೂರ್ (ಕೇರಳ): ದೇವರ ನಾಡು ಎಂದೇ ಜನಪ್ರಿಯವಾದ ಕೇರಳದ ತ್ರಿಶ್ಯೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕೋವಿಡ್ 19 ವಾರ್ಡ್‌ನಲ್ಲಿ ಘೋರ ಕೃತ್ಯವೊಂದು ನಡೆದಿದೆ.
ಕೊರೊನಾ ಸೋಂಕಿತ ವೃದ್ಧ ಮಹಿಳೆಯನ್ನು ಹಗ್ಗದಿಂದ ಕಟ್ಟಿಹಾಕಿರುವ ದೃಶ್ಯ ಭಾರೀ ವೈರಲ್ ಆಗಿದೆ. 67 ವರ್ಷ ವಯಸ್ಸಿನ ಕುಂಜುಭೀವಿ ಎಂಬ ವೃದ್ಧೆಯನ್ನು ಮಂಚಕ್ಕೆ ಕಟ್ಟಿಹಾಕಲಾಗಿತ್ತು. ಈ ವೇಳೆ ಮಹಿಳೆ ಮಂಚದಿಂದ ಕೆಳಗೆ ಬಿದ್ದರೂ ಕೂಡಾ ಮೇಲೆತ್ತಲು ಯಾರೊಬ್ಬರೂ ಬರಲಿಲ್ಲ.

ರೋಗಿಗಳ ಸಂಬಂಧಿಗಳ ಗಲಾಟೆಯನ್ನು ತಪ್ಪಿಸಲು ಬೌನ್ಸರ್‌ಗಳ ಮೊರೆ ಹೋದ ಬೆಂಗಳೂರಿನ ಖಾಸಗಿ ಆಸ್ಪತ್ರೆ

ರೋಗಿಯೊಬ್ಬರು ಈ ಮಹಿಳೆಯ ದುಸ್ಥಿತಿಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ವೃದ್ಧ ಮಹಿಳೆಯ ಮೊಮ್ಮಗ ಫರ್ಷಾದಾ ಎಂಬುವರು ಈ ಕುರಿತಾಗಿ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೋವಿಡ್‌ ಆಸ್ಪತ್ರೆಗಿಂತ ಚಿಕಿತ್ಸೆಯೇ ಲೇಸು: ಹೋಮ್‌ ಐಸೋಲೇಷನ್‌ ಬೆಸ್ಟ್‌!

ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ತಡ, ಸಾಮಾನ್ಯ ಜನರಷ್ಟೇ ಅಲ್ಲ, ಜನಪ್ರತಿನಿಧಿಗಳೂ ಸಿಟ್ಟಿಗೆದ್ದಿದ್ದಾರೆ. ಕೇರಳದ ಕಾಂಗ್ರೆಸ್ ಸಂಸದ ಟಿ ಎನ್ ಪ್ರತಾಪನ್ ಅವರು ಈ ಕುರಿತಂತೆ ತನಿಖೆ ನಡೆಸುವಂತೆ ಆರೋಗ್ಯ ಸಚಿವೆ ಶೈಲಜಾ ಅವರಿಗೆ ಒತ್ತಾಯಿಸಿದ್ದಾರೆ.

ಕೋವಿಡ್ ಟೆಸ್ಟ್‌ ರಿಸಲ್ಟ್ ವಾರಗಟ್ಟಲೆ ಲೇಟ್..! ಆಸ್ಪತ್ರೆ, ಲ್ಯಾಬ್‌ಗೆ ಅಲೆದು ಸುಸ್ತಾದ ಜನ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ