ಆ್ಯಪ್ನಗರ

ಕೇರಳ ವಿಮಾನ ಅವಘಡ: ಏನಿದು ಟೇಬಲ್‌ ಟಾಪ್‌ ರನ್‌ವೇ? ಇಲ್ಲಿದೆ ಮಾಹಿತಿ!

ದೇಶದಲ್ಲಿ ಮಂಗಳೂರು ಬಿಟ್ಟರೆ ಟೇಬಲ್‌ ಟಾಪ್‌ ರನ್‌ವೇಗಳಿರುವುದು ಕೇರಳದ ಕಲ್ಲಿಕೋಟೆ ಹಾಗೂ ಮಿಜೋರಾಂನಲ್ಲಿ ಮಾತ್ರ. ನಿಲ್ದಾಣದ ಎರಡೂ ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್‌ವೇ ಇದ್ದರೆ ಅದನ್ನು ಟೇಬಲ್‌ ಟಾಪ್‌ ರನ್‌ವೇ ಎಂದು ಕರೆಯಲಾಗುತ್ತದೆ.

Vijaya Karnataka Web 8 Aug 2020, 9:59 am
ಬೆಂಗಳೂರು: ಕೇರಳದ ಕರಿಪುರ್‌ನಲ್ಲಿ ನಡೆದ ವಿಮಾನ ಅವಘಡದ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದೆ. ಇಬ್ಬರು ಪೈಲೆಟ್‌ ಸೇರಿ ಘಟನೆಯಲ್ಲಿ ಹದಿನೆಂಟು ಮಂದಿ ಸಾವನಪ್ಪಿದ್ದಾರೆ. ಅದೃಷ್ಟವಶಾತ್‌ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ ಎನ್ನುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
Vijaya Karnataka Web Ee3MbV6VoAATN6h


ಈ ಮಧ್ಯೆ ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವ ವಿಚಾರ ಟೇಬಲ್‌ ಟಾಪ್‌ ರನ್‌ವೇ. ಹೌದು, ಟೇಬಲ್ ಟಾಪ್‌ ರನ್‌ವೇಯಲ್ಲಿ ಲ್ಯಾಂಡಿಗ್‌ ಮಾಡುವಾಗ ಸಮಸ್ಯೆ ಕಾಣಿಸಕೊಳ್ಳುತ್ತೆ ಎನ್ನುವ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಎಲ್ಲೆಲ್ಲಿ ಟೇಬಲ್‌ ಟಾಪ್‌ ರನ್‌ ವೇ ಇದೆ? ಇದರಿಂದ ಸಮಸ್ಯೆಯಾಗುತ್ತಾ? ಈ ಬಗ್ಗೆ ಕೊಂಚ ಮಾಹಿತಿ ಇಲ್ಲಿದೆ.


ವಿಕ ಮಾಹಿತಿ!
ದೇಶದಲ್ಲಿ ಮಂಗಳೂರು ಬಿಟ್ಟರೆ ಟೇಬಲ್‌ ಟಾಪ್‌ ರನ್‌ವೇಗಳಿರುವುದು ಕೇರಳದ ಕಲ್ಲಿಕೋಟೆ ಹಾಗೂ ಮಿಜೋರಾಂನಲ್ಲಿ ಮಾತ್ರ. ನಿಲ್ದಾಣದ ಎರಡೂ ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್‌ವೇ ಇದ್ದರೆ ಅದನ್ನು ಟೇಬಲ್‌ ಟಾಪ್‌ ರನ್‌ವೇ ಎಂದು ಕರೆಯಲಾಗುತ್ತದೆ.

ಕೇರಳ ವಿಮಾನ ಅವಘಡ: ಪೈಲಟ್‌ಗಳಿಬ್ಬರು ಸೇರಿ 18 ಮಂದಿ ಸಾವು, 127 ಮಂದಿಗೆ ಚಿಕಿತ್ಸೆ, ಲೇಟೆಸ್ಟ್ ಮಾಹಿತಿ ಓದಿ!

ಇಂತಹ ಕಡೆ ಸಾಮಾನ್ಯ ಹವಾಗುಣದಲ್ಲಿ ವಿಮಾನಗಳನ್ನು ಲ್ಯಾಂಡ್‌ ಮಾಡುವುದೇ ನುರಿತ ಪೈಲಟ್‌ಗೆ ಸವಾಲಿನ ಸಂಗತಿ ಎನಿಸುತ್ತದೆ. ಇನ್ನು ಪ್ರತಿಕೂಲ ಹವಾಮಾನದಲ್ಲಂತೂ ವಿಮಾನವನ್ನು ಲ್ಯಾಂಡ್‌ ಮಾಡಿಸುವುದು ಭಾರಿ ಕಷ್ಟದ ಕೆಲಸ. ಶುಕ್ರವಾರ ಕೂಡ ಪ್ರತಿಕೂಲ ಹವಾಮಾನ ಇದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ