ಆ್ಯಪ್ನಗರ

'ಪೌರತ್ವ' ಕಾಯಿದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಮೊದಲ ರಾಜ್ಯ ಕೇರಳ

ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರವು ಕೇಂದ್ರ ಸರಕಾ ರ ಜಾರಿಗೆ ತಂದಿರುವ 'ಪೌರತ್ವ ತಿದ್ದುಪಡಿ ಕಾಯಿದೆ' ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇ ಮೂಲಕ ಸಿಎಎ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮೊದಲ ರಾಜ್ಯ ಎನಿಸಿದೆ.

Vijaya Karnataka Web 14 Jan 2020, 10:16 am
ಹೊಸದಿಲ್ಲಿ: ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರವು ಕೇಂದ್ರ ಸರಕಾ ರ ಜಾರಿಗೆ ತಂದಿರುವ 'ಪೌರತ್ವ ತಿದ್ದುಪಡಿ ಕಾಯಿದೆ' ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇ ಮೂಲಕ ಸಿಎಎ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮೊದಲ ರಾಜ್ಯ ಎನಿಸಿದೆ.
Vijaya Karnataka Web Pinarayi Vijayan


ಪೌರತ್ವ ತಿದ್ದುಪಡಿ ಕಾಯಿದೆಯು ಸಂವಿಧಾನದ ನೀಡಲಾಗಿರುವ ಮೂಲಬೂತ ಹಕ್ಕುಗಳಲ್ಲಿ ಒಂದಾದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಎಂದು ಅರ್ಜಿಯಲ್ಲಿ ತಿಳಿಸಿದೆ. ಅಲ್ಲದೆ ಶಾಸಕಾಂಗ ಸಭೆದಯಲ್ಲಿ ಪೌರತ್ವ ಕಾಯಿದೆ ವಿರುದ್ಧ ಗೊತ್ತುವಳಿ ಮಂಡನೆ ಮಾಡಿದ ಮೊದಲ ರಾಜ್ಯ ಕೂಡ ಕೇರಳವಾಗಿದೆ. ಹಲವಾರು ರಾಜ್ಯಗಳು ಪೌರತ್ವ ಕಾಯಿದೆ ವಿರುದ್ಧ ಆಕ್ಷೇಪಣೆ ಎತ್ತಿವೆ.

ಕೇರಳ ಸರಕಾರವು ಪೌರತ್ವ ಕಾಯಿದೆ ಜತೆಗೆ ಪಾಸ್‌ಪೋರ್ಟ್‌ ಕಾಯಿದೆ ಮತ್ತು ಫಾರಿನರ್ಸ್‌ ಕಾಯಿದೆ ವಿರುದ್ಧವೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ.

ಜೆಎನ್‌ಯು ಹಿಂಸಾಚಾರ ಪ್ರಕರಣ: ವಾಟ್ಸ್‌ಆ್ಯಪ್‌, ಆ್ಯಪಲ್‌, ಗೂಗಲ್‌ಗೆ ಕೋರ್ಟ್‌ ನೋಟಿಸ್‌

ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಹೊಸ ಪೌರತ್ವ ಕಾಯಿದೆಯು ಸಂವಿಧಾನದ ಮೂಲಭೂತ ಹಕ್ಕುಗಳಾದ 14, 21, 25ನೇ ವಿಧಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ