ತಿರುವನಂತಪುರಂ: ಕರ್ನಾಟಕದ ಗಡಿ ರಸ್ತೆಗಳನ್ನು ಮುಚ್ಚಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ವರೆಗೂ ಹೋಗಿದ್ದ ಕೇರಳ ಈಗ ತಮಿಳುನಾಡು ಜತೆಗಿನ ಗಡಿ ಮುಚ್ಚಲು ಮುಂದಾಗುರವ ಮೂಲಕ ದ್ವಿಮುಖ ಧೋರಣೆ ಪ್ರದರ್ಶಿಸಿದೆ.
ಕೇರಳ ಮತ್ತು ತಮಿಳುನಾಡು ನಡುವಿನ ಸಣ್ಣ ರಸ್ತೆ, ಹಾಗೂ ಹೆದ್ದಾರಿಗಳನ್ನು ಮುಚ್ಚುವಂತೆ ಕೇರಳ ಸರಕಾರ ನಿರ್ಧಾರ ಮಾಡಿದೆ.
ಕೊರೊನಾ ವೈರಸ್ ಈಗ ಉಭಯ ರಾಜ್ಯಗಳಲ್ಲೂ ಹೆಚ್ಚಾಗಿದೆ.
ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಮೊದಲಿಗೆ ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು ಕೇರಳದಲ್ಲಿ. ಇದು ಗೊತ್ತಾಗುತ್ತಿದ್ದಂತೆ ಕರ್ನಾಟಕ ಮಾಡಿದ ಕೆಲಸ ಎಂದರೆ ಕೇರಳ ಗಡಿಯನ್ನು ಬಂದ್ ಮಾಡಿದೆ. ಇದರ ಬೆನ್ನಲ್ಲೇ ಕೇರಳ ಕೈಗೊಂಡ ಕೆಲವು ಪರಿಣಾಮಕಾರಿ ಕ್ರಮಗಳಿಂದಾಗಿ ಕೊರೊನಾ ವೈರಸ್ ಪ್ರಕರಣ ಇಳಿಮುಖವಾಗುತ್ತಿದೆ.
ಆದರೆ ಹೊಸದಿಲ್ಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯ ನಂತರ ಈಗ ತಮಿಳುನಾಡಿನಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ.
ಇದರಿಂದ ಎಚ್ಚೆತ್ತುಕೊಂಡಿರುವ ಕೇರಳ ಸರಕಾರ ಈಗ ತಮಿಳುನಾಡಿಗೆ ಹೊಂದಿ ಕೊಂಡಿರುವ ಗಡಿ ಮುಚ್ಚಲು ನಿರ್ಧರಿಸಿದೆ.
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಣಗೊಳಿಸಲು ಕರ್ನಾಟಕ ಸರಕಾರ ಕೇರಳದ ಗಡಿಗಳನ್ನು ಮುಚ್ಚಿತ್ತು. ಆದರೆ, ಈಗ ಕೇರಳ ಹೈಕೋರ್ಟ್ ಎರಡು ರಾಜ್ಯಗಳ ನಡುವಿನ ಗಡಿಗಳ ಬಂದ್ ತೆರವುಗೊಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮೊದಲು ಕೊರೊನಾ ವೈರಸ್ ಕಾಲಿಟ್ಟಿದ್ದು ಕೇರಳಕ್ಕೆ. ಮೊದ ಮೊದಲು ತಹಬದಿಯಲ್ಲಿದ್ದ ಕೊರೊನಾ ಈಗ ದೇವರನಾಡಿನಲ್ಲಿ ರುದ್ರ ನರ್ತನ ನಡೆಸುತ್ತಿದೆ. ಅದರಲ್ಲೂ, ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ ಕಾಸರಗೋಡು ಹಾಗೂ ಕಣ್ಣೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕರ್ನಾಟಕವನ್ನು ಮೀರಿಸಿದೆ. ಕಾಸರಗೋಡಿನ ಜನತೆ ಕೇರಳಕ್ಕಿಂತ ಕರ್ನಾಟಕದ ಜೊತೆ ಹೆಚ್ಚು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಏನೇ ತೊಂದರೆಯಿದ್ದರೂ ಅವರಿಗೆ ನೆನಪಾಗುವುದು ಮಂಗಳೂರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿತ್ತು.
ಕೇರಳ ಮತ್ತು ತಮಿಳುನಾಡು ನಡುವಿನ ಸಣ್ಣ ರಸ್ತೆ, ಹಾಗೂ ಹೆದ್ದಾರಿಗಳನ್ನು ಮುಚ್ಚುವಂತೆ ಕೇರಳ ಸರಕಾರ ನಿರ್ಧಾರ ಮಾಡಿದೆ.
ಕೊರೊನಾ ವೈರಸ್ ಈಗ ಉಭಯ ರಾಜ್ಯಗಳಲ್ಲೂ ಹೆಚ್ಚಾಗಿದೆ.
ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಮೊದಲಿಗೆ ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು ಕೇರಳದಲ್ಲಿ. ಇದು ಗೊತ್ತಾಗುತ್ತಿದ್ದಂತೆ ಕರ್ನಾಟಕ ಮಾಡಿದ ಕೆಲಸ ಎಂದರೆ ಕೇರಳ ಗಡಿಯನ್ನು ಬಂದ್ ಮಾಡಿದೆ. ಇದರ ಬೆನ್ನಲ್ಲೇ ಕೇರಳ ಕೈಗೊಂಡ ಕೆಲವು ಪರಿಣಾಮಕಾರಿ ಕ್ರಮಗಳಿಂದಾಗಿ ಕೊರೊನಾ ವೈರಸ್ ಪ್ರಕರಣ ಇಳಿಮುಖವಾಗುತ್ತಿದೆ.
ಆದರೆ ಹೊಸದಿಲ್ಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯ ನಂತರ ಈಗ ತಮಿಳುನಾಡಿನಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ.
ಇದರಿಂದ ಎಚ್ಚೆತ್ತುಕೊಂಡಿರುವ ಕೇರಳ ಸರಕಾರ ಈಗ ತಮಿಳುನಾಡಿಗೆ ಹೊಂದಿ ಕೊಂಡಿರುವ ಗಡಿ ಮುಚ್ಚಲು ನಿರ್ಧರಿಸಿದೆ.
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಣಗೊಳಿಸಲು ಕರ್ನಾಟಕ ಸರಕಾರ ಕೇರಳದ ಗಡಿಗಳನ್ನು ಮುಚ್ಚಿತ್ತು. ಆದರೆ, ಈಗ ಕೇರಳ ಹೈಕೋರ್ಟ್ ಎರಡು ರಾಜ್ಯಗಳ ನಡುವಿನ ಗಡಿಗಳ ಬಂದ್ ತೆರವುಗೊಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮೊದಲು ಕೊರೊನಾ ವೈರಸ್ ಕಾಲಿಟ್ಟಿದ್ದು ಕೇರಳಕ್ಕೆ. ಮೊದ ಮೊದಲು ತಹಬದಿಯಲ್ಲಿದ್ದ ಕೊರೊನಾ ಈಗ ದೇವರನಾಡಿನಲ್ಲಿ ರುದ್ರ ನರ್ತನ ನಡೆಸುತ್ತಿದೆ. ಅದರಲ್ಲೂ, ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ ಕಾಸರಗೋಡು ಹಾಗೂ ಕಣ್ಣೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕರ್ನಾಟಕವನ್ನು ಮೀರಿಸಿದೆ. ಕಾಸರಗೋಡಿನ ಜನತೆ ಕೇರಳಕ್ಕಿಂತ ಕರ್ನಾಟಕದ ಜೊತೆ ಹೆಚ್ಚು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಏನೇ ತೊಂದರೆಯಿದ್ದರೂ ಅವರಿಗೆ ನೆನಪಾಗುವುದು ಮಂಗಳೂರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿತ್ತು.