ಆ್ಯಪ್ನಗರ

ಕ್ಲಾಸ್‌ ಬಂಕ್‌ ಮಾಡಿದ್ದೇ ಆಕೆಯ ಜೀವ ಉಳಿಸಿತು

ಶಾಬಾಸ್‌ ಟಿ.ಎಸ್‌ ಎಂಬ 23 ವರ್ಷದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ 2 ವರ್ಷದ ಹಿಂದೆ ಕಾಲೇಜ್‌ ತರಗತಿ ತಪ್ಪಿಸುವ ನೆಪದಲ್ಲಿ ಕಾಂಡಕೋಶ ದಾನದ ನೋಂದಣಿ ಶಿಬಿರಕ್ಕೆ ಹಾಜರಾಗಿದ್ದರು.

ಟೈಮ್ಸ್ ಆಫ್ ಇಂಡಿಯಾ 11 Aug 2017, 1:47 pm
ಕೊಚ್ಚಿ: ಶಾಬಾಸ್‌ ಟಿ.ಎಸ್‌ ಎಂಬ 23 ವರ್ಷದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ 2 ವರ್ಷದ ಹಿಂದೆ ಕಾಲೇಜ್‌ ತರಗತಿ ತಪ್ಪಿಸುವ ನೆಪದಲ್ಲಿ ಕಾಂಡಕೋಶ ದಾನದ ನೋಂದಣಿ ಶಿಬಿರಕ್ಕೆ ಹಾಜರಾಗಿದ್ದರು. ಆಗ ಕ್ಲಾಸ್‌ ಬಂಕ್‌ ಮಾಡಿದ್ದೇ ಆತನ ಜೀವನಕ್ಕೆ ಒಂದು ಮಹತ್ತರ ತಿರುವು ತಂದುಕೊಟ್ಟಿದ್ದು ಸುಳ್ಳಲ್ಲ.
Vijaya Karnataka Web kerala he bunked class to save her life
ಕ್ಲಾಸ್‌ ಬಂಕ್‌ ಮಾಡಿದ್ದೇ ಆಕೆಯ ಜೀವ ಉಳಿಸಿತು


5 ತಿಂಗಳ ಮಗುವಾಗಿದ್ದಾಗಲೇ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕಿ ಮನಸ್ವಿಗೆ ಪುನರ್ಜನ್ಮ ನೀಡಿ ಸಾರ್ಥಕತೆ ಮೆರೆದಿದ್ದಾರೆ ಶಾಬಾಸ್‌. ಹೈದರಾಬಾದ್‌ ಮೂಲದ ಮನಸ್ವಿ ಕರಮ್ಚೆಡು ಥಲಸ್ಸೆಮಿಯಾ ಮೇಜರ್ ಎಂಬ ರಕ್ತ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇವರಿಬ್ಬರ ಮಧ್ಯೆ ಸೇತುವೆಯಾಗಿ ನಿಂತಿದ್ದು ಡಿಎಟಿಆರ್‌ಐ (DATRI)ಎಂಬ ಸಂಸ್ಥೆ.

ಭಾರತದ ಅತಿದೊಡ್ಡ ಬ್ಲಡ್‌ ಸ್ಟೆಮ್‌ ಸೆಲ್ಸ್‌ ದಾನಿಗಳ ನೋಂದಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಎಟಿಆರ್‌ಐ, ಕಾಯಿಲೆಯಿಂದ ಬಳಲುತ್ತಿದ್ದ ಮಾನಸ್ವಿಗೆ ಶಾಬಾಸ್‌ರ ಕಾಂಡಕೋಶ ನೆರವಾಗುತ್ತದೆ ಎಂಬ ಖಚಿತ ಮಾಹಿತಿಯೊಂದಿಗೆ ಅವರನ್ನು ಸಂಪರ್ಕಿಸಿದೆ. ಸಂಸ್ಥೆಯ ಕರೆಗೆ ಒಪ್ಪಿದ ಶಾಬಾಸ್‌, ಮಾನಸ್ವಿ ಹಾಗೂ ಅವರ ಕುಟುಂಬಕ್ಕೆ ಭರವಸೆಯ ಬೆಳಕಾದರು.

ಡಿಎಟಿಆರ್‌ಐ ಸಂಸ್ಥೆ ಗುರುವಾರ ಕೊಚಿನ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸಭೆಯೊಂದನ್ನು ಆಯೋಜಿಸಿತ್ತು. ತನ್ನ ಸ್ಟೆಮ್‌ ಸೆಲ್ಸ್‌ನಿಂದ ಸಂಪೂರ್ಣ ಗುಣಮುಖಳಾದ ಮಾನಸ್ವಿಯನ್ನು ಭೇಟಿ ಮಾಡಿದ ಶಾಬಾಸ್‌ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನು ಮಾನಸ್ವಿ ತಂದೆಯ ಕಣ್ಣಲ್ಲಿ ಆನಂದ ಬಾಷ್ಪ.

'ನನ್ನ ಈ ಸಂತಸವನ್ನು ಹೇಗೆ ವ್ಯಕ್ತಪಡಿಸಲಿ ಎಂದು ತಿಳಿಯುತ್ತಿಲ್ಲ. ನನ್ನ ದೇಹದ ಒಂದು ಚಿಕ್ಕ ಕೋಶ ಬೇರೊಬ್ಬರ ಜೀವವನ್ನು ಉಳಿಸಿದೆ ಎಂದರೆ ತುಂಬ ಹೆಮ್ಮೆಯಾಗುತ್ತಿದೆ' ಎಂದರು ಶಾಬಾಸ್‌. ಇದೇ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಮಾನಸ್ವಿ ತಂದೆ, 'ಶಾಬಾಸ್‌ ಮತ್ತು ಡಿಎಟಿಆರ್‌ಐ ಸಂಸ್ಥೆ ನನ್ನ ಮಗಳಿಗೆ ಹೊಸ ಬದುಕನ್ನು ಉಡುಗೊರೆಯಾಗಿ ನೀಡಿದ್ದಾರೆ' ಎಂದು ನುಡಿದರು.

Kerala: He bunked class to save her life

Shabas T S, a 23-year-old electrical engineer from Kochi, did not know that a stem cell donor registration camp he attended two years ago just to bunk class would become a turning point in his life.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ