ಆ್ಯಪ್ನಗರ

ಇನ್ಮುಂದೆ ಶಾಲಾ, ಕಾಲೇಜುಗಳಲ್ಲಿ ಸ್ಟ್ರೈಕ್‌ ನಡೆಸುವಂತಿಲ್ಲ, ಪ್ರತಿಭಟನೆಗೆ ನಿಷೇಧ ಹೇರಿದ ಕೇರಳ ಹೈಕೋರ್ಟ್‌

ಇನ್ಮುಂದೆ ಶಾಲಾ, ಕಾಲೇಜುಗಳಲ್ಲಿ ಪ್ರತಿಭಟನೆ ನಡೆಸುವ ಮುನ್ನ ಯೋಚಿಸಬೇಕಾಗಿದೆ. ಕೇರಳ ಹೈಕೋರ್ಟ್‌ ಕ್ಯಾಂಪಸ್‌ ಸ್ಟ್ರೈಕ್‌ಗೆ ನಿಷೇಧ ಹೇರಿದ್ದು, ಪ್ರತಿಭಟನೆಗಳು ಕ್ಯಾಂಪಸ್‌ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಾರದು ಎಂದು ಅಭಿಪ್ರಾಯಪಟ್ಟಿದೆ.

Vijaya Karnataka Web 26 Feb 2020, 6:03 pm
ತಿರುವನಂತಪುರಂ: ಕೇರಳದ ಶಾಲಾ, ಕಾಲೇಜುಗಳಲ್ಲಿ ನಡೆಯುವ ಪ್ರತಿಭಟನೆ ಮೇಲೆ ಕೇರಳ ಹೈಕೋರ್ಟ್‌ ನಿಷೇಧ ಹೇರಿದೆ. ಶಾಲಾ, ಕಾಲೇಜುಗಳ ಕ್ಯಾಂಪಸ್‌ಗಳ ಕಾರ್ಯನಿರ್ವಹಣೆ ಮೇಲೆ ಪ್ರತಿಭಟನೆಗಳು ಪರಿಣಾಮ ಬೀರಬಾರದು ಎಂದಿರುವ ಹೈಕೋರ್ಟ್‌ ಪ್ರತಿಭಟನೆ ನಡೆಸದಂತೆ ಬುಧವಾರ ಆದೇಶ ನೀಡಿದೆ.
Vijaya Karnataka Web kerala high court


ಪ್ರತಿಭಟನೆಗಳಿಂದ ಕ್ಯಾಂಪಸ್‌ಗಳ ಕಾರ್ಯಚಟುವಟಿಕೆಗೆ ಅಡ್ಡಿ ಉಂಟಾಗಬಾರದು. ಶಾಲಾ, ಕಾಲೇಜುಗಳು ಇರುವುದು ವಿದ್ಯಾಭ್ಯಾಸಕ್ಕಾಗಿಯೇ ಹೊರತು ಪ್ರತಿಭಟನೆ ಮಾಡುವುದಕ್ಕಲ್ಲ ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್‌ ಕುಮಾರ್‌ ಅವರ ನ್ಯಾಯಪೀಠ ಹೇಳಿದೆ.

ಕ್ಯಾಂಪಸ್‌ಗಳಲ್ಲಿ ಯಾವುದೇ ಮೆರವಣಿಗೆ ಅಥವಾ ಘೇರಾವ್‌ ಇರಬಾರದು. ಮುಷ್ಕರಕ್ಕೆ ಯಾರನ್ನು ಪ್ರಚೋದಿಸಬೇಡಿ ಎಂದು ಕೇರಳ ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ಇಸ್ರೋ ಮಾಜಿ ವಿಜ್ಞಾನಿಗೆ ಕೇರಳದಿಂದ 1.30 ಕೋಟಿ ರೂ. ಪರಿಹಾರ ಘೋಷಣೆ

ಈ ಆದೇಶ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಅನ್ವಯಿಸುತ್ತದೆ. ಇತರರ ಹಕ್ಕುಗಳಿಗೆ ಹಾನಿ ಮಾಡಬೇಡಿ. ಕಾಲೇಜುಗಳು ಶಾಂತಿಯುತ ಚರ್ಚೆಗಳು ಅಥವಾ ಆಲೋಚನೆಗಳಿಗೆ ವೇದಿಕೆಯಾಗಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಶಾಲೆಗಳಿಗೆ ಮತ್ತೆ ಮಲೆಯಾಳಿ ಶಿಕ್ಷಕರ ನೇಮಕ! ಕಾಸರಗೋಡಿನಲ್ಲಿ ಕೇರಳ ಸರ್ಕಾರದ ಕಿರಿಕ್

ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಒಂದು ವೇಳೆ ಕಾಲೇಜುಗಳಲ್ಲಿ ಪ್ರತಿಭಟನೆಗೆ ಮುಂದಾದರೆ, ಕಾಲೇಜು ಆಡಳಿತ ಮಂಡಳಿಯವರು ಕ್ರಮ ತೆಗೆದುಕೊಳ್ಳಬಹುದು. ಪೊಲೀಸರಿಗೆ ಮಾಹಿತಿ ನೀಡಿ ಶಾಂತಿಯನ್ನು ಮರುಸ್ಥಾಪಿಸಬಹುದು ಎಂದು ಆದೇಶ ತಿಳಿಸುತ್ತದೆ.

ಕ್ಯಾಂಪಸ್‌ ರಾಜಕೀಯದ ವಿರುದ್ಧ 20 ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ಕೇರಳ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ