ಆ್ಯಪ್ನಗರ

ನಕ್ಸಲರ ಜತೆ ವಿದ್ಯಾರ್ಥಿಗಳ ಸಂಪರ್ಕ, ಕೇರಳದಲ್ಲಿ ಎನ್‌ಐಎ ತೀವ್ರ ಶೋಧ

ಮಾವೋವಾದಿ ಸಂಘಟನೆ ಜತೆ ವಿದ್ಯಾರ್ಥಿಗಳ ನಿಕಟ ಸಂಪರ್ಕ ಹಿನ್ನೆಲೆ ಕೊಯಿಕ್ಕೋಡ್‌ ಮತ್ತು ಮಲಪ್ಪುರಂನಲ್ಲಿ ರಾಷ್ಟ್ರೀಯ ತನಿಖಾ ದಳ ಶುಕ್ರವಾರ ತೀವ್ರ ಶೋಧಕಾರ್ಯ ನಡೆಸಿದೆ.

Vijaya Karnataka 2 May 2020, 10:48 am
ಮಲಪ್ಪುರಂ: ಕೇರಳದ ಕೊಯಿಕ್ಕೋಡ್‌ ಮತ್ತು ಮಲಪ್ಪುರಂನಲ್ಲಿ ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತೀವ್ರ ಶೋಧಕಾರ್ಯ ನಡೆಸಿದೆ. ಸಿಪಿಐ (ಮಾವೋವಾದಿ) ಸಂಘಟನೆ ಜತೆಗೆ ನಿಕಟ ಸಂಪರ್ಕ ಸಾಧಿಸಿರುವ ಮೂವರು ವಿದ್ಯಾರ್ಥಿಗಳ ಬಗ್ಗೆ ಈ ವೇಳೆ ಎನ್‌ಐಎ ಮಾಹಿತಿ ಕಲೆಹಾಕಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.
Vijaya Karnataka Web nia


ಇದಲ್ಲದೇ, ಕಳೆದ ವರ್ಷ ವಯನಾಡ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮಾವೋವಾದಿ ಜಲೀಲ್‌ ಎಂಬಾತನ ನಿವಾಸದ ಮೇಲೆಯೂ ಎನ್‌ಐಎ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಎರ್ನಾಕುಲಂ ವಿಶೇಷ ನ್ಯಾಯಾಲಯದಲ್ಲಿ ಏ.27 ರಂದು ಶಂಕಿತ ಮಾವೋವಾದಿಗಳಾದ ವಿದ್ಯಾರ್ಥಿ ಅಲ್ಲನ್‌ ಶುಯೇಬ್‌(20) ಹಾಗೂ ಮತ್ತೊಬ್ಬ ವಿದ್ಯಾರ್ಥಿ ಥಾವಾ ಫಸಲ್‌ (24) ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ. ಇನ್ನೊಬ್ಬ ಶಂಕಿತ ಮಾವೋವಾದಿ ಉಸ್ಮಾನ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಪತ್ರಿಕೋದ್ಯಮ, ಕಾನೂನು ವ್ಯಾಸಂಗ ಮಾಡುತ್ತಿರುವ ಅಲ್ಲನ್‌ ಮತ್ತು ಫಸಲ್‌ನನ್ನು ಎನ್‌ಐಎ ಕಳೆದ ವರ್ಷ ಬಂಧಿಸಿತ್ತು. ಇವರು ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಸಿಪಿಐ ಘಟಕದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಆರೋಪ ಹೊರಿಸಲಾಗಿದೆ.

ವೈರಸ್ ಭೀತಿಯಲ್ಲೂ ಬಂದೂಕು ಬಿಡದ ನಕ್ಸಲರು: ಗುಂಡಿನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ