ಆ್ಯಪ್ನಗರ

ಕೇರಳ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ರಕ್ಷಣೆ ಕೋರಿ ಮುಖ್ಯಮಂತ್ರಿಗೆ ಪತ್ರ

ಆರೋಪಿ ಬಿಷಪ್‌ ಫ್ರಾಂಕೊ ಮುಳಕ್ಕಲ್‌ ಮತ್ತು ಅವರ ಬೆಂಬಲಿಗರಿಂದ ಸಂತ್ರಸ್ತೆ ಹಾಗೂ ಆಕೆಯನ್ನು ಬೆಂಬಲಿಸಿದ ಐವರು ಸನ್ಯಾಸಿನಿಯರಿಗೆ ಪ್ರಾಣಾಪಾಯವಿದೆ. ಈಗಾಗಲೇ ಐವರು ಸನ್ಯಾಸಿನಿಯರ ವರ್ಗಾವಣೆ ಮೂಲಕ ಬೆಂಬಲಿಗರಿಂದ ಸಂತ್ರಸ್ತೆಯನ್ನು ಒಂಟಿಯಾಗಿಸುವ ಪ್ರಯತ್ನವೂ ನಡೆದಿದೆ. ಹೀಗಾಗಿ ಸರಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.

Vijaya Karnataka 28 Jan 2019, 5:00 am
ಕೊಚ್ಚಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇರಳ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ, ಸಂತ್ರಸ್ತೆ ಮತ್ತು ಸಾಕ್ಷಿಗಳಿಗೆ ರಕ್ಷಣೆ ನೀಡಬೇಕೆಂದು ಕೋರಿ 'ಸೇವ್‌ ಅವರ್‌ ಸಿಸ್ಟರ್ಸ್‌' ಸಂಸ್ಥೆಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿದೆ.
Vijaya Karnataka Web kerala nun rape case ngo sos writes to cm demands protection for victim and witnesses
ಕೇರಳ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ರಕ್ಷಣೆ ಕೋರಿ ಮುಖ್ಯಮಂತ್ರಿಗೆ ಪತ್ರ


ಆರೋಪಿ ಬಿಷಪ್‌ ಫ್ರಾಂಕೊ ಮುಳಕ್ಕಲ್‌ ಮತ್ತು ಅವರ ಬೆಂಬಲಿಗರಿಂದ ಸಂತ್ರಸ್ತೆ ಹಾಗೂ ಆಕೆಯನ್ನು ಬೆಂಬಲಿಸಿದ ಐವರು ಸನ್ಯಾಸಿನಿಯರಿಗೆ ಪ್ರಾಣಾಪಾಯವಿದೆ. ಈಗಾಗಲೇ ಐವರು ಸನ್ಯಾಸಿನಿಯರ ವರ್ಗಾವಣೆ ಮೂಲಕ ಬೆಂಬಲಿಗರಿಂದ ಸಂತ್ರಸ್ತೆಯನ್ನು ಒಂಟಿಯಾಗಿಸುವ ಪ್ರಯತ್ನವೂ ನಡೆದಿದೆ. ಹೀಗಾಗಿ ಸರಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.

ಬಿಷಪ್‌ ವಿರುದ್ಧ ಕೇಳಿಬಂದಿರುವ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ತನಿಖೆಯ ವೇಳೆ ಕಂಡುಬಂದ ಅಂಶಗಳನ್ನು ಆಧರಿಸಿ ಬಿಷಪ್‌ ಫ್ರಾಂಕೊ ಅವರನ್ನು ಬಂಧಿಸಿ ಮೂರು ವಾರಗಳ ಕಾಲ ಪಾಲಾ ಉಪ ಕಾರಾಗೃಹದಲ್ಲಿ ಇರಿಸಲಾಗಿತ್ತು. ಕೇರಳ ಹೈಕೋರ್ಟ್‌ನಿಂದ ಅವರು ಜಾಮೀನು ಪಡೆದು ಹೊರಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ