ಆ್ಯಪ್ನಗರ

ಕೇರಳ ತಿರುಓಣಂ ಲಾಟರಿ ಫಲಿತಾಂಶ ಪ್ರಕಟ, ಮೊದಲ ಬಹುಮಾನ ಜಸ್ಟ್‌ 12 ಕೋಟಿ ರೂ.!

ಮೊದಲ ಬಹುಮಾನ ಮೊತ್ತ 12 ಕೋಟಿ ರೂ. ಇದ್ದರೆ, ಎರಡನೇ ಬಹುಮಾನ 50 ಲಕ್ಷ ರೂ. ಹಾಗೂ ಮೂರನೇ ಬಹುಮಾನ 10 ಲಕ್ಷ ರೂಪಾಯಿಯಾಗಿದೆ. ಸಮಾಧಾನಕರ ಬಹುಮಾನವಾಗಿ 5 ಲಕ್ಷ ರೂಪಾಯಿ ನೀಡಲಾಗುತ್ತಿದೆ.

TIMESOFINDIA.COM 19 Sep 2019, 5:43 pm
ತಿರುವನಂತಪುರಂ: ದೇವರ ಸ್ವಂತ ನಾಡು ಕೇರಳದಲ್ಲಿ ಇಳಿದ ತಕ್ಷಣ ಮೊದಲು ನಿಮ್ಮನ್ನು ಸ್ವಾಗತಿಸುವುದು ಲಾಟರಿ ಮಾರಾಟಗಾರರು. ಬೇರೆಲ್ಲೂ ಇಲ್ಲದಷ್ಟು ಲಾಟರಿಯ ಮೋಹವನ್ನು ನೀವಿಲ್ಲಿ ಕಾಣಬಹುದು.
Vijaya Karnataka Web Kerala Lottery


ಇದೇ ಕೇರಳದಲ್ಲೀಗ 'ತಿರುಓಣಂ ಬಂಪರ್‌ ಬಿಆರ್‌ 69 ಮತ್ತು ಕಾರುಣ್ಯ ಪ್ಲಸ್‌ ಕೆಎನ್‌ 282' ಲಾಟರಿಯ ಫಲಿತಾಂಶ ಪ್ರಕಟವಾಗಿದ್ದು ವಿಜೇತರು ಯಾರು ಎಂಬ ಚರ್ಚೆ ರಾಜ್ಯದಾದ್ಯಂತ ಶುರುವಾಗಿದೆ. ಕಾರಣ ಇದರ ಬಹುಮಾನ ಮೊತ್ತ. ಮೊದಲ ಬಹುಮಾನ ಬರೋಬ್ಬರಿ 12 ಕೋಟಿ ರೂಪಾಯಿ ಆಗಿದ್ದು, ಯಾರು ಈ ಬಹುಮಾನ ಗೆದ್ದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಈ ಲಾಟರಿಯ ಫಲಿತಾಂಶ ಕೇರಳ ಲಾಟರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. 3 ಗಂಟೆಯಿಂದ ಇದರ ಫಲಿತಾಂಶಗಳು ಲಭ್ಯವಿದ್ದು, ವಿಜೇತರ ಪೂರ್ಣ ಪಟ್ಟಿ 4 ಗಂಟೆಯ ನಂತರ ಸಿಗಲಿದೆ.

ಮೊದಲ ಬಹುಮಾನ ಮೊತ್ತ 12 ಕೋಟಿ ರೂ. ಇದ್ದರೆ, ಎರಡನೇ ಬಹುಮಾನ ಮೊತ್ತ 50 ಲಕ್ಷ ರೂ. ಹಾಗೂ ನಾಲ್ಕನೇ ಬಹುಮಾನ ಮೊತ್ತ 10 ಲಕ್ಷ ರೂಪಾಯಿಯಾಗಿದೆ. ಸಮಾಧಾನಕರ ಬಹುಮಾನವಾಗಿ 5 ಲಕ್ಷ ರೂಪಾಯಿ ಇದೆ.

ಗೋರ್ಕಿ ಭವನ್‌ ಅಡಿಟೋರಿಯಂನಲ್ಲಿ ಕೇರಳ ಲಾಟರಿ ಇಲಾಖೆ ಡ್ರಾ ಎತ್ತಿದ್ದು ಮೊದಲ ಬಹುಮಾನವನ್ನು ಆರು ಜನರು ಗೆದ್ದಿದ್ದಾರೆ. ಇವರಿಗೆ ತಲಾ ಎರಡು ಕೋಟಿ ರೂಪಾಯಿ ಸಿಗಲಿದೆ. ಕರುಣಗಪ್ಪಲ್ಲಿ ಚುಂಗತ್‌ ಜ್ಯುವೆಲ್ಲರಿಯ ಉದ್ಯೋಗಿಗಳಾದ ರೋನಿ, ವಿವೇಕ್‌, ರತೀಶ್‌, ಶುಬಿನ್‌, ರಮ್ಜಿ ಮತ್ತು ರಾಜೀವನ್‌ ಬಹುಮಾನ ಗೆದ್ದ ಅದೃಷ್ಟಶಾಲಿಗಳಾಗಿದ್ದಾರೆ.

ಬಹುಮಾನ ಮೊತ್ತ ಗೆದ್ದವರು ಕೇರಳ ಲಾಟರಿ ಗೆಜೆಟ್‌ನಲ್ಲಿ ತಮ್ಮ ಸಂಖ್ಯೆಯನ್ನು ಪರಿಶೀಲನೆ ನಡೆಸಲು ಸರಕಾರ ಸಲಹೆ ನೀಡಿದ್ದು. 30 ದಿನಗಳ ಒಳಗೆ ಟಿಕೆಟ್‌ನ್ನು ಒಪ್ಪಿಸಲು ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ