ಆ್ಯಪ್ನಗರ

ಕಲ್ಲು ತೂರಾಟದಲ್ಲಿ ಸಿಲುಕಿದ್ದ ಕೇರಳ ಪ್ರವಾಸಿಗರು

ಪಾಕ್ ಪರ ಘೋಷಣೆ ಕೂಗುತ್ತಿದ್ದ ಜನರು ಏಕಾಏಕಿ ಗುಂಪಾಗಿ ಬಂದು ಬಸ್‌ಗೆ ಕಲ್ಲು ತೂರುತ್ತಿದ್ದರು ಎಂದ ಅಂಬುರಾಜ್

Samayam Malayalam 8 May 2018, 9:16 pm
ಕೊಚ್ಚಿ: ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಕೇರಳದ 47 ಮಂದಿ ಪ್ರವಾಸಿಗರ ತಂಡವೊಂದು ಕಲ್ಲು ತೂರಾಟದಲ್ಲಿ ಸಿಲುಕಿ ತೊಂದರೆ ಅನುಭವಿಸಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಏ. 30ರಂದು ಕಾಶ್ಮೀರದ ಅನಂತ್‌ನಾಗ್‌ಗೆ ತೆರಳಿದ್ದ ತಂಡದಲ್ಲಿದ್ದ ಕಾಸರಗೋಡಿನ ಸಿ. ಅಂಬುರಾಜ್ ಎಂಬವರು ಇದ್ದ ಬಸ್‌ಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ್ದರು ಎಂಬ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
Vijaya Karnataka Web kerala tourists


ಪಾಲಗಮ್‌ನ ಬೇತಾಬ್‌ ಕಣಿವೆಗೆ ತೆರಳಿ ಅಲ್ಲಿಂದ ಶ್ರೀನಗರದಲ್ಲಿನ ಹೋಟೆಲ್ ಕೊಠಡಿಗೆ ರಾತ್ರಿ ಸುಮಾರು 8 ಗಂಟೆಗೆ ವಾಪಸಾಗುತ್ತಿದ್ದಾಗ ಉಧಂಪುರ್‌ನಲ್ಲಿ ಜನರು ಪ್ರವಾಸಿಗರಿದ್ದ ಬಸ್‌ ಅನ್ನು ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದರು ಎಂದು ಅಂಬುರಾಜ್ ಹೇಳಿದ್ದಾರೆ.

ಪಾಕ್ ಪರ ಘೋಷಣೆ ಕೂಗುತ್ತಿದ್ದ ಜನರು ಏಕಾಏಕಿ ಗುಂಪಾಗಿ ಬಂದು ಬಸ್‌ಗೆ ಕಲ್ಲು ತೂರುತ್ತಿದ್ದರು. ಆದರೆ ಬಸ್ ಚಾಲಕನ ಸಮಯಪ್ರಜ್ಞೆ ಮತ್ತು ಸ್ಥಳೀಯ ಪೊಲೀಸರು, ಭದ್ರತಾ ಪಡೆಯ ಸಹಕಾರದಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಸುಮಾರು 4 ಕಿ.ಮೀ. ವರೆಗೆ ವೇಗವಾಗಿ ಬಸ್‌ ಓಡಿಸಿಕೊಂಡು ಬರಬೇಕಾಯಿತು.

ನಂತರ ಸ್ಥಳೀಯ ಪೊಲೀಸರು, ಜಿಲ್ಲಾಧಿಕಾರಿ, ಭಾರತೀಯ ಸೇನೆಯ ಯೋಧರು ಬಂದು ಧೈರ್ಯ ತುಂಬಿದರು. ಅಲ್ಲದೆ 7 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ನೆರವಾದರು ಎಂದು ಅಂಬುರಾಜ್ ನೆನಪಿಸಿಕೊಂಡಿದ್ದಾರೆ. ಅಲ್ಲದೆ ಕಾಶ್ಮೀರದಲ್ಲಿನ ಕಲ್ಲು ತೂರಾಟ ಮತ್ತು ನಮ್ಮ ಮೇಲಿನ ದಾಳಿ ಕಂಡು ಜೀವಂತವಾಗಿ ಕೇರಳಕ್ಕೆ ಮರಳುವ ಬಗ್ಗೆ ಸಂಶಯ ಉಂಟಾಗಿತ್ತು. ಸಕಾಲದಲ್ಲಿ ನೆರವು ದೊರೆತಿದ್ದರಿಂದ ಸುರಕ್ಷಿತವಾಗಿ ವಾಪಸ್ ಬರುವಂತಾಯಿತು ಎಂದು ಅಂಬುರಾಜ್ ತಿಳಿಸಿದ್ದಾರೆ.

ಮೂಲ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ