ಘಟನೆ ನಡೆದಿದ್ದು ಹೇಗೆ?
ಅರೋಪಿ ಆಲ್ಬಿನ್ ಒತ್ತಾಯಪಡಿಸಿದ ಹಿನ್ನೆಲೆ ಜು.31ರಂದು ಆತನ ತಾಯಿ ಬೆಸ್ಸಿ ಹಾಗೂ ಮೇರಿ ಐಸ್ಕ್ರೀಂ ತಯಾರಿಸಿ ಫ್ರಿಜ್ನಲ್ಲಿ ಇಟ್ಟಿದ್ದಾರೆ. ಅದೇ ದಿನ ರಾತ್ರಿ ಎಲ್ಲರೂ ತಿನ್ನುತ್ತಾರೆ. ಆದರೆ ಈ ಮಧ್ಯೆ ಆರೋಪಿ ಆಲ್ಬಿನ್ ಫ್ರಿಜ್ನಲ್ಲಿದ್ದ ಐಸ್ಕ್ರೀಂಗೆ ಇಲಿ ವಿಷವನ್ನ ಬೆರೆಸಿದ್ದಾನೆ. ಮರು ದಿನ ಬೆಳಗ್ಗೆ ತಂಗಿ ಮೇರಿಗೆ ವಾಂತಿ ಶುರುವಾಗಿದೆ. ಈ ವೇಳೆ ಮೇರಿಯನ್ನ ತಂದೆ ಬೆನ್ನಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮೇರಿಯ ಲೀವರ್ ಸಂಪೂರ್ಣವಾಗಿ ಘಾಸಿಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇನ್ನು ಮೇರಿ ಆಸ್ಪತ್ರೆಗೆ ದಾಖಲಾದ ಮರು ದಿನ ತಂದೆ ಬೆನ್ನಿಗೆ ಕೂಡ ಇದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಬ್ಬರಿಗೆ ಒಂದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸಂಶಯಗೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರೋಪಿ ಐಸ್ಕ್ರೀಂ ತಿನ್ನದೆ ಇದ್ದುದ್ದರಿಂದ ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಐಸ್ಕ್ರೀಂನ ರುಚಿಯಲ್ಲಿ ಬದಲಾಗಿದೆ ಅಂತ ತಾಯಿ ಕೂಡ ಸ್ವಲ್ಪವೇ ತಿಂದಿದ್ದರಿಂದ ಅವರಿಗೆ ಏನು ಆಗಿರಲಿಲ್ಲ. ಆದರೆ, ತಂದೆ ಹಾಗೂ ಮಗಳು ಸರಿಯಾಗಿ ಐಸ್ಕ್ರೀಂ ತಿಂದಿದ್ದಾರೆ. ಇದೀಗ ತಂದೆ ಬೆನ್ನಿಯ ಲೀವರ್ಗೂ ಸಮಸ್ಯೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಯಾಂಗ ನಿಂದನೆ ಕೇಸ್: ಖ್ಯಾತ ವಕೀಲ ಪ್ರಶಾಂತ್ ಭೂಷಣ್ 'ದೋಷಿ' ಎಂದ ಸುಪ್ರೀಂಕೋರ್ಟ್!
ಆಸ್ತಿಯೇ ಪ್ರಮುಖ ಕಾರಣ!
ಅಟೋಮೊಬೈಲ್ ಮೆಕಾನಿಕ್ ಕಲಿತು ಆಲ್ಬಿನ್ ಮನೆಯಲ್ಲೇ ಇದ್ದ. ಅಲ್ಲದೇ ಶೋಕಿ ಜೀವನ ನಡೆಸುತ್ತಿದ್ದ. ಮನೆಯಲ್ಲಿದ್ದ ಹಣವನ್ನ ತೆಗೆದುಕೊಂಡು ಹೋಗಿ ಖರ್ಚು ಮಾಡುತ್ತಿದ್ದ. ಇದು ಕುಟುಂಬ ಹಾಗೂ ಆಲ್ಬೀನ್ ನಡುವಿನ ಸಂಘರ್ಷಕ್ಕೆ ಕೊಂಚ ಮಟ್ಟದಲ್ಲಿ ಕಾರಣವಾಗಿತ್ತು. ನಂತರದ ದಿನಗಳಲ್ಲಿ ಶೋಕಿ ಜೀವನ ನಡೆಸಲು ಆತನ ಬಳಿ ದುಡ್ಡಿರಲಿಲ್ಲ, ಮನೆಯವರು ಕೂಡ ಆತನಿಗೆ ಹಣ ನೀಡುತ್ತಿರಲಿಲ್ಲ. ಹೀಗಾಗಿ ತಂದೆಯ ಹೆಸರಿನಲ್ಲಿ ನಾಲ್ಕು ಎಕರೆ ಜಾಗವನ್ನ ಮಾರಾಟ ಮಾಡಿ ಹಣ ಹೊಂದಿಸುವ ಪ್ಕಾನ್ ರೂಪಿಸಿದ್ದನಂತೆ. ಆದರೆ ಇದಕ್ಕೆ ಕುಟುಂಬದವರು ಅಡ್ಡಿಯಾಗಹುದು ಎಂದು ತಿಳಿದುಕೊಂಡ ಅವರಿಗೆ ವಿಷ ನೀಡಿ ಎಲ್ಲರನ್ನು ಕೊಲ್ಲುವ ಐಡಿಯಾ ರೂಪಿಸಿದ್ದಾನೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ ಬಿಎಸ್ಪಿ!
ಇಲಿ ವಿಷ ಬಳಕೆಗೆ ಯೂಟ್ಯೂಬ್ ಸಹಾಯ!
ಇನ್ನು ಈ ರೀತಿಯ ಕೊಲೆ ಪ್ರಯತ್ನ ನಡೆಸಿರುವುದು ಇದೇ ಮೊದಲಲ್ಲವಂತೆ. ಈ ಹಿಂದೆ ಕೂಡ ಮೀನು ಸಾರಿನಲ್ಲಿ ವಿಷ ಬೆರೆಸಿದ್ದ ಈ ಕ್ರೂರಿ ಮಗ. ಆದರೆ ಅದು ಎಷ್ಟು ಹಾಕಬೇಕು ಎಂದು ತಿಳಿಯದ ಕಾರಣ ಯಾರಿಗೂ ಏನು ಸಂಭವಿಸಿರಲಿಲ್ಲ. ಆದರೆ ಈ ಬಾರಿ ಕೊಲೆ ನಡೆಸಲು ಯೂಟ್ಯೂಬ್ನ ಮೊರೆ ಹೋಗಿದ್ದ ಆಲ್ಬೀನ್. ಇಲಿ ವಿಷದಿಂದ ಏನು ಸಂಭವಿಸುತ್ತೆ? ಎಷ್ಟು ವಿಷ ಬೆರೆಸಬೇಕು? ಎನ್ನುವುದನ್ನ ಕೂಡ ಆತ ಯುಟ್ಯೂಬ್ ಮೂಲಕ ಕಲಿತ್ತಿದ್ದನಂತೆ. ಈ ಮೂಲಕ ಕೊಲೆ ಮಾಡಲು ಪ್ಲಾನ್ ರೂಪಿಸಿದ್ದ ಎಂದು ಪೊಲೀಸರ ಬಳಿ ಆಲ್ಬೀನ್ ಕುಕೃತ್ಯದ ಬಗ್ಗೆ ವಿವರಿಸಿದ್ದಾನೆ. ಇನ್ನು ಕೊಲೆ ನಂತರ ಈ ಎಲ್ಲಾ ಸಾವನ್ನ ಆತ್ಮಹತ್ಯೆ ಎಂದು ಬಿಂಬಿಸಲು ಕೂಡ ಪ್ಲಾನ್ ರೂಪಿಸಿದ್ದ ಎನ್ನಲಾಗಿದೆ. ಆದರೆ ಇವೆಲ್ಲಾ ಫೈಲ್ ಆಗಿದೆ.