ಜಮ್ಮು: ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ ಅಬ್ದುಲ್ ರಶೀದ್ ಗಾಝಿ ಪುಲ್ವಾಮಾ ಹಾಗೂ ತ್ರಾಲ್ ನಡುವಿನ ಅರಣ್ಯ ಪ್ರದೇಶದಲ್ಲಿ ಇದ್ದಾನೆ ಎಂಬ ಸುಳಿವು ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ. ಪಾಕಿಸ್ತಾನದಿಂದ ಜೈಷೆ ಮೊಹಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನೊಂದಿಗೆ ನೇರ ಸಂಪರ್ಕದಲ್ಲಿರುವ ಈತ ಅರಣ್ಯ ಪ್ರದೇಶದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾನೆ. ಈತನನ್ನು ಸಜೀವವಾಗಿ ಸೆರೆ ಹಿಡಿಯಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಡೀ ದಾಳಿಯ ಯೋಜನೆ ರೂಪಿಸಿದವನು ಪಾಕಿಸ್ತಾನಿ ಪ್ರಜೆ ಕಮ್ರಾನ್. ಆತನಿಗೆ ರಶೀದ್ ನೆರವು ನೀಡಿದ್ದಾನೆ. ಕಮ್ರಾನ್ ದಕ್ಷಿಣ ಕಾಶ್ಮೀರದ ಪುಲ್ವಾಮಾ, ತ್ರಾಲ್ ಹಾಗೂ ಆವಂತಿಪೋರಾ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದಾನೆ ಎನ್ನುವುದನ್ನೂ ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ. ಒಂದು ತಿಂಗಳ ಹಿಂದಷ್ಟೇ, ಜೈಷೆ ಮೊಹಮದ್ ಉಗ್ರ ಸಂಘಟನೆಯು ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಭಾರಿ ದಾಳಿ ನಡೆಸಲಿವೆ ಎಂದು ಗುಪ್ತಚರ ವಿಭಾಗವು ಎಚ್ಚರಿಕೆ ನೀಡಿತ್ತು.
ಪಾಕ್ ಮಾಧ್ಯಮಗಳ ಪಾಲಿಗೆ ಪುಲ್ವಾಮಾ ದಾಳಿಕೋರ ‘ಸ್ವಾತಂತ್ರ್ಯ ಯೋಧ’
ಪುಲ್ವಾಮಾ ದಾಳಿ ನಡೆಸಿದ ಆತ್ಮಾಹುತಿ ದಾಳಿಕೋರನನ್ನು ಇಡೀ ಜಗತ್ತು ಉಗ್ರ, ಪಾಪಿ ಎಂದು ಜರಿಯುತ್ತಿದ್ದರೆ, ಪಾಕಿಸ್ತಾನ ಮಾಧ್ಯಮ ಮಾತ್ರ ಆತನನ್ನು 'ಸ್ವಾತಂತ್ರ್ಯ ಯೋಧ' ಎಂದು ಪ್ರಶಂಸಿಸುತ್ತಿದೆ. ಇದು ಪಾಪಿ ಪಾಕಿಸ್ತಾನದ ಮನಸ್ಥಿತಿಯನ್ನು ಎತ್ತಿ ತೋರುತ್ತದೆ.
ತಪ್ಪಿದ ಮತ್ತಷ್ಟು ಸಾವು
ಕೆಂಪು ಕಾರೊಂದು ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದನ್ನು ನತದೃಷ್ಟ ಬಸ್ನ ಹಿಂದೆ ಹಾಗೂ ಮುಂದೆ ಚಲಿಸುತ್ತಿದ್ದ ಬಸ್ಗಳಲ್ಲಿದ್ದ ಯೋಧರು ಕೊನೆ ಕ್ಷಣದಲ್ಲಿ ಗಮನಿಸಿದ್ದರಿಂದ ಭಾರಿ ಪ್ರಮಾಣದ ಸಾವು ತಪ್ಪಿದೆ. ದಾಳಿಗೆ ತುತ್ತಾದದ್ದು 3ನೇ ಕ್ರಮಾಂಕದ ಬಸ್. ಕೆಂಪು ಕಾರು ಚಾಲನೆ ಮಾಡಿಕೊಂಡು ಬಂದ ಆದಿಲ್, 2-3 ನಿಮಿಷ ಬಸ್ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ.
ಪದೇಪದೇ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದಾಗ, ನೇರವಾಗಿ ಸಾಗುವಂತೆ ಬಸ್ ಚಾಲಕ ಸನ್ನೆ ಮೂಲಕ ಸೂಚನೆ ಕೊಟ್ಟಿದ್ದಾರೆ. ಅದೇ ವೇಳೆ, 2 ಹಾಗೂ 4ನೇ ಕ್ರಮಾಂಕದ ಬಸ್ಗಳಲ್ಲಿದ್ದ ಯೋಧರು ಕಾರು ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಭಾವಿಸಿದ್ದಾರಲ್ಲದೇ, ತಮ್ಮ ಬಸ್ಗಳ ಚಾಲಕರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಎರಡೂ ಬಸ್ಗಳ ವೇಗ ತಗ್ಗಿ, ಅಂತರ ಸೃಷ್ಟಿಯಾಗಿದೆ. ಇಲ್ಲದೇ ಇದ್ದರೆ 3ನೇ ಕ್ರಮಾಂಕದ ಬಸ್ ಜತೆಗೇ ಇವೆರಡು ಬಸ್ಗಳೂ ಛಿದ್ರಗೊಳ್ಳುತ್ತಿದ್ದವು.
ಪಾಕ್ ಮಾಧ್ಯಮಗಳ ಪಾಲಿಗೆ ಪುಲ್ವಾಮಾ ದಾಳಿಕೋರ ‘ಸ್ವಾತಂತ್ರ್ಯ ಯೋಧ’
ಪುಲ್ವಾಮಾ ದಾಳಿ ನಡೆಸಿದ ಆತ್ಮಾಹುತಿ ದಾಳಿಕೋರನನ್ನು ಇಡೀ ಜಗತ್ತು ಉಗ್ರ, ಪಾಪಿ ಎಂದು ಜರಿಯುತ್ತಿದ್ದರೆ, ಪಾಕಿಸ್ತಾನ ಮಾಧ್ಯಮ ಮಾತ್ರ ಆತನನ್ನು 'ಸ್ವಾತಂತ್ರ್ಯ ಯೋಧ' ಎಂದು ಪ್ರಶಂಸಿಸುತ್ತಿದೆ. ಇದು ಪಾಪಿ ಪಾಕಿಸ್ತಾನದ ಮನಸ್ಥಿತಿಯನ್ನು ಎತ್ತಿ ತೋರುತ್ತದೆ.
ತಪ್ಪಿದ ಮತ್ತಷ್ಟು ಸಾವು
ಕೆಂಪು ಕಾರೊಂದು ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದನ್ನು ನತದೃಷ್ಟ ಬಸ್ನ ಹಿಂದೆ ಹಾಗೂ ಮುಂದೆ ಚಲಿಸುತ್ತಿದ್ದ ಬಸ್ಗಳಲ್ಲಿದ್ದ ಯೋಧರು ಕೊನೆ ಕ್ಷಣದಲ್ಲಿ ಗಮನಿಸಿದ್ದರಿಂದ ಭಾರಿ ಪ್ರಮಾಣದ ಸಾವು ತಪ್ಪಿದೆ. ದಾಳಿಗೆ ತುತ್ತಾದದ್ದು 3ನೇ ಕ್ರಮಾಂಕದ ಬಸ್. ಕೆಂಪು ಕಾರು ಚಾಲನೆ ಮಾಡಿಕೊಂಡು ಬಂದ ಆದಿಲ್, 2-3 ನಿಮಿಷ ಬಸ್ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ.
ಪದೇಪದೇ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದಾಗ, ನೇರವಾಗಿ ಸಾಗುವಂತೆ ಬಸ್ ಚಾಲಕ ಸನ್ನೆ ಮೂಲಕ ಸೂಚನೆ ಕೊಟ್ಟಿದ್ದಾರೆ. ಅದೇ ವೇಳೆ, 2 ಹಾಗೂ 4ನೇ ಕ್ರಮಾಂಕದ ಬಸ್ಗಳಲ್ಲಿದ್ದ ಯೋಧರು ಕಾರು ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಭಾವಿಸಿದ್ದಾರಲ್ಲದೇ, ತಮ್ಮ ಬಸ್ಗಳ ಚಾಲಕರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಎರಡೂ ಬಸ್ಗಳ ವೇಗ ತಗ್ಗಿ, ಅಂತರ ಸೃಷ್ಟಿಯಾಗಿದೆ. ಇಲ್ಲದೇ ಇದ್ದರೆ 3ನೇ ಕ್ರಮಾಂಕದ ಬಸ್ ಜತೆಗೇ ಇವೆರಡು ಬಸ್ಗಳೂ ಛಿದ್ರಗೊಳ್ಳುತ್ತಿದ್ದವು.