ಆ್ಯಪ್ನಗರ

ಮಕ್ಕಳ ರಕ್ಷಣೆಗೆ ಹೊಸ ಪ್ಲಾನ್

* ಮಕ್ಕಳಿಗೆ ಸೀಕ್ರೆಟ್‌ ಕೋಡ್‌ ನೀಡುವ ಪೋಷಕರು * ಕೋಡ್‌ ಹೇಳದಿದ್ದರೆ ವ್ಯವಹರಿಸದಂತೆ ಸೂಚನೆ * ಇಂದಿರಾಪುರದಲ್ಲಿ ಬಾಲಕಿ ಅಪಹರಣ ಯತ್ನ ವಿಫಲ

Navbharat Times 1 May 2018, 6:41 pm
ಗಾಜಿಯಾಬಾದ್: ಮಕ್ಕಳ ಅಪಹರಣಗಳ ತಡೆಗೆ ಪೋಷಕರು ಹೊಸ ದಾರಿ ಕಂಡು ಕೊಂಡಿದ್ದಾರೆ. ಅಷ್ಟು ಮಾತ್ರ ಅಲ್ಲ ಈ ಹೊಸ ಉಪಾಯದಿಂದ ಮಗುವೊಂದು ಅಪಹರಣಕಾರರಿಂದ ಬಚಾವಾಗಿದೆ.
Vijaya Karnataka Web kidnap


ಇಂದಿರಾಪುರದ ಪಾರ್ಶ್ವನಾಥ್ ಮೆಜೆಸ್ಟಿಕ್‌ ಸೊಸೈಟಿಯ ಬಳಿ ನಿಂತಿದ್ದ ಸಣ್ಣ ಹುಡುಗಿಯನ್ನು ಅಪಹರಣ ಮಾಡಲು ಯುವಕನೋರ್ವ ಮುಂದಾಗಿದ್ದು, ಹುಡುಗಿಯ ಬಳಿ ತೆರಳಿ ತಂದೆಗೆ ಅಫಘಾತವಾಗಿದ್ದು, ಕೂಡಲೇ ತನ್ನ ಜತೆ ಬರುವಂತೆ ತಿಳಿಸಿದ್ದಾನೆ. ಒಂದು ಕ್ಷಣ ಆಲೋಚನೆ ಮಾಡಿದ ಹುಡುಗಿ, ಆತನಿಗೆ ತನ್ನ ತಂದೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾಳೆ. ಅಷ್ಟು ಮಾತ್ರ ಅಲ್ಲ ತನ್ನ ತಂದೆಯ ವಿಶೇಷ ಕೋಡ್‌ ಏನು ಎಂದೂ ಪ್ರಶ್ನಿಸಿದ್ದಾಳೆ. ಇಷ್ಟು ಕೇಳಿದ ಅಪಹರಣಕಾರ ಕಕ್ಕಾಬಿಕ್ಕಿಯಾಗಿ ಪರಾರಿಯಾಗಿದ್ದಾನೆ.

ಹೆಚ್ಚುತ್ತಿರುವ ಮಕ್ಕಳ ಅಪಹರಣ ಪ್ರಕರಣಗಳಿಂದ ಪಾರಾಗಲು ಪೋಷಕರು ಮಕ್ಕಳೊಂದಿಗೆ ಸೀಕ್ರೆಟ್‌ ಕೋಡ್‌ ಹಂಚಿಕೊಳ್ಳುತ್ತಿದ್ದಾರೆ. ಅಪರಿಚಿತರು ತನ್ನ ಕುಟುಂಬದ ಬಗ್ಗೆ ಮಾತನಾಡಿದರೆ, ಈ ಸೀಕ್ರೆಟ್‌ ಕೋಡ್‌ ಹೇಳಬೇಕು. ಇಲ್ಲವಾದಲ್ಲಿ ಅವರೊಂದಿಗೆ ವ್ಯವಹರಿಸದಂತೆ ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹೊಸ ಉಪಾಯ ಈಗ ವರ್ಕೌಟ್‌ ಆಗಿದೆ.

ಬಾಲಕಿಯ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಸಹಾಯದಿಂದ ಆರೋಪಿಯ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಮೂಲ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ