ಆ್ಯಪ್ನಗರ

ಇದೇ ಮೊದಲು: 2400 ಮೀ ಎತ್ತರದ ಹಿಮಾಲಯದ ತಪ್ಪಲಲ್ಲಿ ಕಂಡುಬಂದಿದೆ ಕಾಳಿಂಗ ಸರ್ಪ

ಸಾಮಾನ್ಯವಾಗಿ ಸರೀಸೃಪಗಳು ಶೀತ ರಕ್ತವಾದವು. ಅವುಗಳಿಗೆ ಬಾಹ್ಯ ಉಷ್ಣ ಹೆಚ್ಚು ಅಗತ್ಯವಿರುತ್ತದೆ. ಆದರೆ ಈಗ ಉತ್ತರಾಖಂಡದ ನೈನಿತಾಲ್‌ ಪ್ರದೇಶದಲ್ಲಿ ಕಾಳಿಂಗ ಸರ್ಪ ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕಳೆದ ಒಂಬತ್ತು ತಿಂಗಳಿನಿಂದ ಈ ಸಂಬಂಧ ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

Vijaya Karnataka Web 3 Sep 2020, 2:05 pm
ನೈನಿತಾಲ್‌: ಮಲೆನಾಡು, ಕರಾವಳಿ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಳಿಂಗ ಸರ್ಪ ಇದೇ ಮೊದಲ ಬಾರಿಗೆ ಹಿಮಾಲಯ ತಪ್ಪಲಿನಲ್ಲೂ ಕಂಡುಬಂದಿದೆ.
Vijaya Karnataka Web ಕಾಳಿಂಗ ಸರ್ಪ
ಕಾಳಿಂಗ ಸರ್ಪ


ಇದೊಂದು ದಾಖಲೆಯೇ ಸರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉತ್ತರಾಖಂಡದ ಅರಣ್ಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.

ನೈನಿತಾಲ್‌ ಸಮೀಪದ ತೆರೈ ಪ್ರದೇಶದಲ್ಲಿ 2400 ಮೀಟರ್‌ ಎತ್ತರದಲ್ಲಿ ಕಾಳಿಂಗ ಸರ್ಪ ಕಂಡುಬಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿಯ ದುರ್ಗಮ ಪ್ರದೇಶದಲ್ಲಿ ಇದು ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ಸರೀಸೃಪಗಳು ಶೀತ ರಕ್ತವಾದವು. ಅವುಗಳಿಗೆ ಬಾಹ್ಯ ಉಷ್ಣ ಹೆಚ್ಚು ಅಗತ್ಯವಿರುತ್ತದೆ. ಆದರೆ ಈಗ ಉತ್ತರಾಖಂಡದ ನೈನಿತಾಲ್‌ ಪ್ರದೇಶದಲ್ಲಿ ಕಾಳಿಂಗ ಸರ್ಪ ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕಳೆದ ಒಂಬತ್ತು ತಿಂಗಳಿನಿಂದ ಈ ಸಂಬಂಧ ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ