ಆ್ಯಪ್ನಗರ

ಗಾಳಿಪಟದ ದಾರ ಕತ್ತು ಸೀಳಿ ಬೈಕ್‌ ಸವಾರ ಸಾವು

ಗಾಳಿ ಪಟದ ಹರಿತವಾದ ದಾರ ಬೈಕ್‌ ಸವಾರನ ಕುತ್ತಿಗೆಯನ್ನು ಸೀಳಿದೆ.

ಟೈಮ್ಸ್ ಆಫ್ ಇಂಡಿಯಾ 9 Jul 2016, 1:10 pm
ಘಾಜಿಯಾಬಾದ್‌: ಗಾಳಿಪಟದ ಹರಿತವಾದ ದಾರ ಘಾಜಿಯಾಬಾದ್‌ನ ಫ್ಲೈಓವರ್‌ ಮೇಲೆ ಸಾಗುತ್ತಿದ್ದ ಬೈಕ್‌ ಸವಾರನ ಕುತ್ತಿಗೆ ಸೀಳಿದ ಭೀಕರ ಘಟನೆ ಶುಕ್ರವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
Vijaya Karnataka Web kite string pierces bikers neck on flyover kills him
ಗಾಳಿಪಟದ ದಾರ ಕತ್ತು ಸೀಳಿ ಬೈಕ್‌ ಸವಾರ ಸಾವು


ಮೃತ ವ್ಯಕ್ತಿಯನ್ನು ಪ್ರಾರ್ಪಟಿ ಡೀಲರ್‌ ಯೋಗೀಶ್‌ ಶರ್ಮ (52)ಎಂದು ಗುರುತಿಸಲಾಗಿದೆ. ದಿಲ್ಲಿಯ ನಿವಾಸಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

'ಬೈಕ್‌ ಸವಾರ ಏಕಾಏಕಿ ಕೆಳಕ್ಕೆ ಉರುಳಿ, ಆತನ ಕುತ್ತಿಗೆ ಹಾಗೂ ಎದೆಯಿಂದ ರಕ್ತ ಚಿಮ್ಮಿತು. ಭಯಾನಕ ದೃಶ್ಯ ನೋಡಲಾಗಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಫ್ಲೈಓವರ್‌ ಸಮೀಪದ ಹಲವು ಮನೆಗಳ ಮೇಲೆ ನಿಂತು ಹುಡುಗುರು ಗಾಳಿ ಪಟ ಹಾರಿಸುತ್ತಾರೆ,' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.


'ಸಂಜೆ 5.45ರ ಸುಮಾರಿಗೆ ಠಾಕುರ್‌ದ್ವಾರ ಫ್ಲೈಓವರ್‌ ದಾಟುತ್ತಿದ್ದಾಗ, ಗಾಳಿ ಪಟದ ದಾರ ಅವರ ಕುತ್ತಿಗೆಗೆ ಬಿಗಿಯಿತು. ಕೆಲವೇ ಮೀಟರ್‌ ಮುಂದೆ ಸಾಗಿದ ನಂತರ ಬೈಕ್‌ ಸಮೇತ ಕೆಳಕ್ಕೆ ಉರುಳಿದರು,'ಎಂದು ನಗರದ ಎಸ್ಪಿ ಸಲ್ಮಾನ್‌ತಾಜ್‌ ಪಾಟೀಲ್‌ ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 304 (ದಂಡನೀಯ ನರಹತ್ಯೆ)ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಚೀನಾ ದಾರ:

'ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಚೀನಾ ದಾರದಿಂದ ಈ ಅವಘಢ ಸಂಭವಿಸಿರಬಹುದು. ಕರ್ಷಕ ಬಲದಿಂದ ಇವು ಭಾರಿ ಜನಪ್ರಿಯತೆ ಪಡೆದಿವೆ. ನಯ್ಲಾನ್‌ನಿಂದ ಮಾಡಿದ ದಾರಕ್ಕೆ ಗಾಜಿನ ಪುಡಿಯನ್ನು ಲೇಪಿಸಿರುತ್ತಾರೆ. ಹಾಗಾಗಿ ಅವು ರೇಜರ್‌ನಂತೆ ಹರಿತವಾಗಿರುತ್ತದೆ. ಪಕ್ಷಿಗಳು ಹಾಗೂ ಪಟ ಹಾರಿಸುವವರಿಗೂ ಈ ದಾರದಿಂದ ಅಪಾಯವಾಗಿದೆ,'ಎಂದು ಗಾಳಿ ಪಟದ ದಾರ ತಯಾರಿಸುವ ಘಟಕದ ವಿಶಾಲ್‌ ಗೋಯಲ್‌ ಹೇಳಿದ್ದಾರೆ.

'ಚೀನಾದ ದಾರ ಬಳಸುವುದನ್ನು ಕೆಲ ತಿಂಗಳ ಹಿಂದೆಯೇ ನಿಷೇಧಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇಂಥ ದಾರಗಳ ಬಳಕೆ ಹಾಗೂ ಉತ್ಪಾದನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು,'ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿಮಲ್‌ ಕುಮಾರ್‌ ಶರ್ಮ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ