ಆ್ಯಪ್ನಗರ

ಮುಖ್ಯಮಂತ್ರಿಯನ್ನು ಮುಗಿಸುತ್ತೇನೆ: ಚಾಕುವಿನೊಂದಿಗೆ ಕೇರಳ ಭವನಕ್ಕೆ ನುಗ್ಗಿದ ಭೂಪ

ಶನಿವಾರ ಮುಂಜಾನೆ ರಾಷ್ಟ್ರ ರಾಜಧಾನಿಯಲ್ಲಿರುವ ಕೇರಳ ಭವನದಲ್ಲಿ ಕೆಲಕಾಲ ಡೈ ಡ್ರಾಮಾ ಸೃಷ್ಟಿಯಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಇರಿಯುತ್ತೇನೆ ಎನ್ನುತ್ತ ದುಷ್ಕರ್ಮಿಯೊಬ್ಬ ಚಾಕು ಮತ್ತು ಕೆಲ ಪೇಪರ್‌ಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಭವನದ ಆವರಣಕ್ಕೆ ನುಗ್ಗಿದ್ದಾನೆ.

TIMESOFINDIA.COM 4 Aug 2018, 3:37 pm
ಹೊಸದಿಲ್ಲಿ: ಶನಿವಾರ ಮುಂಜಾನೆ ರಾಷ್ಟ್ರ ರಾಜಧಾನಿಯಲ್ಲಿರುವ ಕೇರಳ ಭವನದಲ್ಲಿ ಕೆಲಕಾಲ ಡೈ ಡ್ರಾಮಾ ಸೃಷ್ಟಿಯಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಇರಿಯುತ್ತೇನೆ ಎನ್ನುತ್ತ ದುಷ್ಕರ್ಮಿಯೊಬ್ಬ ಚಾಕು ಮತ್ತು ಕೆಲ ಪೇಪರ್‌ಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಭವನದ ಆವರಣಕ್ಕೆ ನುಗ್ಗಿದ್ದಾನೆ.
Vijaya Karnataka Web Man in delhi Kerala Bhavan


ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಹೊರಕ್ಕೆಳೆದೊಯ್ದರು. ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳ ವಿಚಾರಣೆಯಲ್ಲಿ ಆ ವ್ಯಕ್ತಿ ಮಾನಸಿಕ ಅಸ್ವಸ್ಥನೆಂಬುದು ಬೆಳಕಿಗೆ ಬಂತು.

ಆತನನ್ನು ವಿಮಲ್ ರಾಜ್(46) ಎಂದು ಗುರುತಿಸಲಾಗಿದ್ದು, ಆತ ಕರಿಪ್ಪುಳದ ಕಡವೂರಿನ ನಿವಾಸಿಯಾಗಿದ್ದಾನೆ.

ಆತನ ಕೈಯ್ಯಲ್ಲಿದ್ದ ವೈದ್ಯಕೀಯ ದಾಖಲೆಗಳ ಪ್ರಕಾರ ಆತ 80% ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ, ಆತನನ್ನು ಬಂಧಿಸಿ ಎಫ್ಐಆರ್ ದಾಖಲಿಸಲಾಗಿದೆ, ಎಂದು ಡಿಸಿಪಿ (ನವದೆಹಲಿ) ಮಧುರ್ ವರ್ಮಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ