ಆ್ಯಪ್ನಗರ

ಹಗರಣ ತನಿಖೆಗೆ ಅಸಹಕಾರ: ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಸಿಬಿಐ ನೋಟಿಸ್

ಬಹುಕೋಟಿ ಮೊತ್ತದ ಶಾರದಾ ಮತ್ತು ರೋಸ್ ವ್ಯಾಲಿ ಪೊಂಝಿ ಹಗರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಅದರ ಬಗ್ಗೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಳಂಬ ಅನುಸರಿಸುತ್ತಿದ್ದಾರೆ, ಅಲ್ಲದೆ ತನಿಖೆಗೆ ಸಹಕರಿಸುತ್ತಿಲ್ಲ.

Vijaya Karnataka Web 3 Feb 2019, 12:45 pm
ಹೊಸದಿಲ್ಲಿ: ಬಹುಕೋಟಿ ಹಗರಣದ ತನಿಖೆಗೆ ಅಸಹಕಾರ ಮತ್ತು ವಿಳಂಬ ಅನುಸರಿಸುತ್ತಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತರ ನಡೆಯನ್ನು ಪ್ರಶ್ನಿಸಿರುವ ಸಿಬಿಐ, ನೋಟಿಸ್ ಜಾರಿ ಮಾಡಿದೆ.
Vijaya Karnataka Web Rajeev


ಬಹುಕೋಟಿ ಮೊತ್ತದ ಶಾರದಾ ಮತ್ತು ರೋಸ್ ವ್ಯಾಲಿ ಪೊಂಝಿ ಹಗರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಅದರ ಬಗ್ಗೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಳಂಬ ಅನುಸರಿಸುತ್ತಿದ್ದಾರೆ, ಅಲ್ಲದೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಆರೋಪಿಸಿದೆ. ಜತೆಗೆ ನೋಟಿಸ್‌ಗೆ ಉತ್ತರಿಸದೆ ತಲೆಮರೆಸಿಕೊಂಡಿರುವ ಆಯುಕ್ತರ ನಡೆ ಕುರಿತು ಸಿಬಿಐ ಗರಂ ಆಗಿದೆ.

ಅಷ್ಟೇ ಅಲ್ಲದೆ ಚುನಾವಣಾ ಆಯೋಗದ ಸಭೆಗೂ ರಾಜೀವ್ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಸರಕಾರದಿಂದ ವರದಿ ಕೇಳಿದೆ. ಅದಕ್ಕೂ ಆಯುಕ್ತರ ಸ್ಪಷ್ಟನೆ ದೊರೆತಿಲ್ಲ. ಆದರೆ ಆಯುಕ್ತರು ರಜೆಯಲ್ಲಿ ತೆರಳಿದ್ದಾರೆ, ತಲೆಮರೆಸಿಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸ್ ಆಯುಕ್ತರು ಉತ್ತರಿಸದೆ ತೆರಳಿರುವ ಕುರಿತು ಮತ್ತು ಹಗರಣದ ತನಿಖೆ ನಡೆಸದೇ ಇರುವ ಬಗ್ಗೆ ಸಿಬಿಐ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪೊಲೀಸ್ ಆಯುಕ್ತರು ರಜೆಯಲ್ಲಿದ್ದಾರೆ. ಅದು ಸಣ್ಣ ವಿಚಾರ, ಆಯೋಗಕ್ಕೆ ಈ ಬಗ್ಗೆ ನಾವು ಕ್ಷಮೆಯಾಚಿಸುತ್ತೇವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ