ಆ್ಯಪ್ನಗರ

ಮಾಜಿ ಆಪ್‌ ಮುಖಂಡನಿಂದ ಶ್ರೀಕೃಷ್ಣನ ಅವಹೇಳನ

ಆ್ಯಂಟಿ ರೋಮಿಯೋ ಪಡೆಗೆ ಕೆಣಕಲು ಹೋಗಿ ಆಪ್‌ನ ಮಾಜಿ ನಾಯಕ ನ್ಯಾಯವಾದಿ ಪ್ರಶಾಂತ್ ಭೂಷಣ್ ಶ್ರೀಕೃಷ್ಣನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 2 Apr 2017, 4:19 pm
ಹೊಸದಿಲ್ಲಿ: ಹೆಣ್ಣು ಮಕ್ಕಳ ರಕ್ಷಣೆಗೆ ಪ್ರಾರಂಭಿಸಿರುವ ಆ್ಯಂಟಿ ರೋಮಿಯೋ ಪಡೆಗೆ ಕೆಣಕಲು ಹೋಗಿ ಆಪ್‌ನ ಮಾಜಿ ನಾಯಕ ನ್ಯಾಯವಾದಿ ಪ್ರಶಾಂತ್ ಭೂಷಣ್ ಶ್ರೀಕೃಷ್ಣನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Vijaya Karnataka Web krishna was legendary eve teaser prashant bhushan in reference to anti romeo squads in up
ಮಾಜಿ ಆಪ್‌ ಮುಖಂಡನಿಂದ ಶ್ರೀಕೃಷ್ಣನ ಅವಹೇಳನ


ಶ್ರೀಕೃಷ್ಣನಿಗೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಪ್ರಶಾಂತ್, ರೋಡ್‌ ರೋಮಿಯೋಗಳು ಕೇವಲ ಒಬ್ಬರನ್ನು ಇಷ್ಟ ಪಡುತ್ತಿದ್ದರು. ಆದರೆ ಶ್ರೀಕೃಷ್ಣ ಮಹಿಳೆಯರನ್ನು ಚುಡಾಯಿಸುತ್ತಿದ್ದ, ಅದಕ್ಕಾಗಿಯೇ ಪ್ರಸಿದ್ಧಿಯನ್ನೂಗಳಿಸಿದ್ದ. ಸಿಎಂ ಆದಿತ್ಯನಾಥ್ ತಾವು ರಚಿಸಿರುವ ದಳವನ್ನು ಆ್ಯಂಟಿ ಕೃಷ್ಣ ದಳ ಎಂದು ಹೆಸರಿಸುವ ಧೈರ್ಯ ತೋರುತ್ತಾರೆಯೇ? ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ.

ಇವರಿಗೆ ಸಾಥ್ ನೀಡಿದ ಸ್ವರಾಜ್ ಇಂಡಿಯಾದ ವಕ್ತಾರ ಅನುಪಮ್, ಉ.ಪ್ರದೇಶದ ಆ್ಯಂಟಿ ರೋಮಿಯೋ ದಳ ಷೇಕ್ಸ್ ಪಿಯರ್‌ಗೆ ನೀಡಿರುವ ಗೌರವವಾಗಿದೆ. ಒಂದು ವೇಳೆ ಇಂಗ್ಲೆಂಡ್‌ನಲ್ಲಿ ಮಹಿಳೆಯರ ಚುಡಾಯಿಸುವವರನ್ನು ತಡೆಗಟ್ಟಲು ಆ್ಯಂಟಿ ಕೃಷ್ಣ ದಳವನ್ನು ಪ್ರಾರಂಭಿಸಿದರೆ ಅಚ್ಚರಿ ಪಡಬೇಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಇದೀಗ ಇಬ್ಬರ ಟ್ವೀಟ್‌ಗೆ ನೆಟ್‌ ಬಳಕೆದಾರರು ರಿಯಾಕ್ಟ್‌ ಮಾಡಲು ಪ್ರಾರಂಭಿಸಿದ್ದು, ಭೂಷಣ್‌ ಟ್ವೀಟ್‌ಗೆ ಖಾರ ಪ್ರಕ್ರಿಯೆಗಳು ವ್ಯಕ್ತವಾಗಿದೆ. ಇದೇ ವೇಳೆ, ಕೃಷ್ಣನ ಕುರಿತು ಅವಹೇಳನಕಾರಿ ಮಾತನಾಡಿರುವ ಭೂಷಣ್‌ ವಿರುದ್ಧ ದೂರು ಸಲ್ಲಿಸುವುದಾಗಿ ದಿಲ್ಲಿಯ ಬಿಜೆಪಿ ವಕ್ತಾರ ತಜಿಂದರ್‌ ಪಾಲ್‌ ಎಸ್‌ ಬಗ್ಗಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ