ಆ್ಯಪ್ನಗರ

80 ರೂ. ವಾಪಾಸ್‌ ಕೊಟ್ಟು ಪ್ರಾಮಾಣಿಕತೆ ಮೆರೆದ ಪ್ರಯಾಣಿಕ, ಪೋಸ್ಟ್‌ ವೈರಲ್‌

'ನಾನು ಹಣವನ್ನು ಹಿಂತಿರುಗಿಸದೆ ಇದ್ದರೆ ಅವರಿಗೆ ನಷ್ಟವಾಗುತ್ತದೆ. ಅವರಿಗೆ ಹಣ ವಾಪಾಸ್‌ ಕೊಡಬೇಕು ಎಂದುಕೊಂಡು ಬಂದೆ. ಆದರೆ ಈ ಬಸ್‌ನಲ್ಲಿ ನೀವು ಸಿಕ್ಕಿದ್ದೀರಿ. ನಿನ್ನೆ ಹಣ ಕಳೆದುಕೊಂಡ ಆ ಲೇಡಿ ಕಂಡಕ್ಟರ್‌ ದಯವಿಟ್ಟು ಹಣ ಕೊಡಿ' ಎಂದು ಕೋರಿದ್ದಾರೆ.

Samayam Malayalam 4 May 2019, 3:39 pm
ಕೊಚ್ಚಿ: ಕೇರಳದ ಬಸ್‌ ಪ್ರಯಾಣಿಕರೊಬ್ಬರು ಕಂಡಕ್ಟರ್‌ ಕೈತಪ್ಪಿ ನೀಡಿದ್ದ 80 ರೂ.ಗಳನ್ನು ಮತ್ತೊಬ್ಬ ಕಂಡಕ್ಟರ್‌ಗೆ ವಾಪಾಸ್‌ ಕೊಟ್ಟು ಅವರಿಗೆ ತಲುಪಿಸುವಂತೆ ಕೋರುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
Vijaya Karnataka Web 59106177_2255963338002946_843899028566441984_n


ಈ ಬಗ್ಗೆ ಬಸ್‌ ಕಂಡಕ್ಟರ್‌ ರಶ್ಮಿ ಅಜಿತ್‌ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಪೋಸ್ಟ್‌ ವೈರಲ್‌ ಆಗಿದೆ. ಹೆಚ್ಚಿನ ನೆಟ್ಟಿಗರು ಪ್ರಯಾಣಿಕನ ಪ್ರಾಮಾಣಿಕತೆಯನ್ನು ಮೆಚ್ಚಿ ಲೈಕ್‌ಗಳ ಸುರಿಮಳೆಗರೆದಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುವ ವೇಳೆ 16 ರೂ.ಗಳ ಟಿಕೆಟ್‌ ಪಡೆದಿದ್ದಾರೆ. ಅದಕ್ಕಾಗಿ 20 ರೂ. ಕಂದಡಕ್ಟರ್‌ಗೆ ಕೊಟ್ಟಿದ್ದರು. ಕಂಡಕ್ಟರ್‌ ಗಡಿಬಿಡಿಯಲ್ಲಿ 100 ರೂ. ಕೊಟ್ಟಿರಬೇಕು ಎಂದು ಭಾವಿಸಿ 80 ರೂ. ಚಿಲ್ಲರೆ ಕೊಟ್ಟಿದ್ದಾರೆ. ಇದನ್ನು ಆ ಕ್ಷಣದಲ್ಲಿ ಪ್ರಯಾಣಿಕ ಗಮನಿಸದೆ ಜೇಬಿಗಿಳಿಸಿದ್ದಾರೆ. ಕೊನೆಗೆ ಕಂಡಕ್ಟರ್‌ 4 ರೂ. ಚಿಲ್ಲರೆಗೆ ಬದಲಾಗಿ 80 ರೂ. ಕೊಟ್ಟಿದ್ದಾರೆ ಎಂಬ ಅರಿವಾಗಿದೆ. ಕಂಡಕ್ಟರ್‌ಗೆ ಆದ ನಷ್ಟದ ಬಗ್ಗೆ ವ್ಯಥೆ ಪಟ್ಟ ಪ್ರಯಾಣಿಕ ಮರುದಿನ ಬಸ್‌ನಲ್ಲಿ ಸಿಕ್ಕಿದ ರಶ್ಮಿ ಅಜಿತ್‌ ಅವರ ಕೈಗೆ 80 ರೂ.ಗಳನ್ನು ಕೊಟ್ಟು ಅವರಿಗೆ ತಲುಪಿಸುವಂತೆ ಕೋರಿದ್ದಾರೆ.

'ನಾನು ಹಣವನ್ನು ಹಿಂತಿರುಗಿಸದೆ ಇದ್ದರೆ ಅವರಿಗೆ ನಷ್ಟವಾಗುತ್ತದೆ. ಅವರಿಗೆ ಹಣ ವಾಪಾಸ್‌ ಕೊಡಬೇಕು ಎಂದುಕೊಂಡು ಬಂದೆ. ಆದರೆ ಈ ಬಸ್‌ನಲ್ಲಿ ನೀವು ಸಿಕ್ಕಿದ್ದೀರಿ. ನಿನ್ನೆ ಹಣ ಕಳೆದುಕೊಂಡ ಆ ಲೇಡಿ ಕಂಡಕ್ಟರ್‌ ದಯವಿಟ್ಟು ಹಣ ಕೊಡಿ' ಎಂದು ಕೋರಿದ್ದಾರೆ.

ಪ್ರಾಮಾಣಿಕತೆ ಮೆರೆದ ಪ್ರಯಾಣಿಕರ ಫೋಟೋ ಕ್ಲಿಕ್ಕಿಸುವಲ್ಲಿ ರಶ್ಮಿ ಯಶಸ್ವಿಯಾಗಿದ್ದಾರೆ. ಆದರೆ ಅವರ ಹೆಸರು ಇತ್ಯಾದಿಯನ್ನು ವಿಚಾರಿಸಲು ಆಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ