ಆ್ಯಪ್ನಗರ

ಜ್ವರದ ನಡುವೆಯೇ ಆಡ್ವಾಣಿ ಧ್ವಜಾರೋಹಣ

ಆದರೆ ಬೆಳಗಿನ ಹೊತ್ತಿಗೆ ಜ್ವರ ಕಡಿಮೆಯಾಗಿ ಲವಲವಿಕೆ ಮರುಕಳಿಸಿದ್ದರಿಂದ ಹಳೆ ಸಂಪ್ರದಾಯ ಪಾಲಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡ ಪ್ರಧಾನ ಕಾರ್ಯಕ್ರಮಕ್ಕೆ ಮಾತ್ರ ಅವರಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

PTI 16 Aug 2019, 5:00 am
ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ಅವರು ಜ್ವರದ ನಡುವೆಯೂ ಗುರುವಾರ ತಮ್ಮ ನಿವಾಸದ ಆವರಣದಲ್ಲಿ ಪ್ರತಿವರ್ಷದಂತೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಈ ಪದ್ಧತಿಯನ್ನು ಅವರು ಹಲವು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದು, ಕೆಂಪು ಕೋಟೆಯ ಪ್ರಧಾನ ಸಮಾರಂಭಕ್ಕೆ ಹಾಜರಾಗುವ ಮತ್ತೊಂದು ಹಳೆಯ ರೂಢಿಯನ್ನು ಮಾತ್ರ ಈ ಬಾರಿ ಮುರಿದರು. ಬುಧವಾರ ಜ್ವರ ತೀವ್ರವಾಗಿದ್ದರಿಂದ ತಮ್ಮ ನಿವಾಸದಲ್ಲಿ ಧ್ವಜಾರೋಹಣವನ್ನು ಈ ಬಾರಿ ಅವರು ನೆರವೇರಿಸುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಬೆಳಗಿನ ಹೊತ್ತಿಗೆ ಜ್ವರ ಕಡಿಮೆಯಾಗಿ ಲವಲವಿಕೆ ಮರುಕಳಿಸಿದ್ದರಿಂದ ಹಳೆ ಸಂಪ್ರದಾಯ ಪಾಲಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡ ಪ್ರಧಾನ ಕಾರ್ಯಕ್ರಮಕ್ಕೆ ಮಾತ್ರ ಅವರಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.
Vijaya Karnataka Web advani

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ