ಆ್ಯಪ್ನಗರ

ಎರಡನೇ ಶಾಹಿ ಸ್ನಾನ ಇಂದು: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ

ಸಂಕ್ರಾಂತಿ ನಂತರ ಪುಷ್ಯ ಪೂರ್ಣಿಮೆಯಂದು (ಜ.21) ಎರಡನೇ ಶಾಹಿ ಸ್ನಾನ ಮಾಡಲಾಗುತ್ತದೆ. ಸುಮಾರು 12 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಬಾರಿಯ ಕುಂಭಮೇಳದಲ್ಲಿ ಒಟ್ಟು 12 ಕೋಟಿ ಯಾತ್ರಿಕರು ಪಾಲ್ಗೊಳ್ಳಲಿದ್ದಾರೆಂಬ ಅಂದಾಜಿದೆ.

Vijaya Karnataka 21 Jan 2019, 5:30 am
ಪ್ರಯಾಗ್‌ರಾಜ್‌: ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭಮೇಳದಲ್ಲಿ ಪುಷ್ಯ ಪೂರ್ಣಿಮೆಯ ದಿನವಾದ ಸೋಮವಾರ (ಜ.21) ಎರಡನೇ ಶಾಹಿ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರ ಆಗಮನವಾಗುತ್ತಿದೆ. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಪ್ರಯಾಗ್‌ರಾಜ್‌ನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸಕಲ ಭದ್ರತೆ ಕೈಗೊಳ್ಳಲಾಗಿದೆ. ಸ್ವಯಂ ಸೇವಕರು, ಮುಳುಗು ತಜ್ಞರು, ಪೊಲೀಸರು, ಅಗ್ನಿ ಶಾಮಕ ದಳ ಹಾಗೂ ಅರೆಸೇನಾಪಡೆ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
Vijaya Karnataka Web ಕುಂಭಮೇಳ
ಕುಂಭಮೇಳ


ಸೂರ್ಯ ತನ್ನ ಪಥವನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಿಸಿದ ಮಕರ ಸಂಕ್ರಾಂತಿಯಂದು (ಜ.15) ಆರಂಭವಾದ ಕುಂಭಮೇಳದಲ್ಲಿ ಮೊದಲ ದಿನ ಸುಮಾರು 2 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಂಡಿದ್ದರು. 50 ದಿನಗಳ ಈ ಮಹಾ ಉತ್ಸವದಲ್ಲಿ ಒಟ್ಟು ಆರು ಪುಣ್ಯ ಘಳಿಗೆಯಲ್ಲಿ ಶಾಹಿ ಸ್ನಾನ ಕೈಗೊಳ್ಳಲಾಗುತ್ತದೆ. ಸಂಕ್ರಾಂತಿ ನಂತರ ಪುಷ್ಯ ಪೂರ್ಣಿಮೆಯಂದು (ಜ.21) ಎರಡನೇ ಶಾಹಿ ಸ್ನಾನ ಮಾಡಲಾಗುತ್ತದೆ. ಸುಮಾರು 12 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಬಾರಿಯ ಕುಂಭಮೇಳದಲ್ಲಿ ಒಟ್ಟು 12 ಕೋಟಿ ಯಾತ್ರಿಕರು ಪಾಲ್ಗೊಳ್ಳಲಿದ್ದಾರೆಂಬ ಅಂದಾಜಿದೆ.ಪುಷ್ಯ ಪೂರ್ಣಿಮೆ ಬಳಿಕ, ಮೌನಿ ಅಮಾವಾಸ್ಯೆ (ಫೆ.4), ಬಸಂತ ಪಂಚಮಿ (ಫೆ.10), ಮಾಘ ಪೂರ್ಣಿಮೆ (ಫೆ.19) ಹಾಗೂ ಮಹಾ ಶಿವರಾತ್ರಿಯಂದು (ಮಾ.4) ಪುಣ್ಯ ಸ್ನಾನ ಕೈಗೊಳ್ಳುವ ಮೂಲಕ ಕುಂಭಮೇಳಕ್ಕೆ ತೆರೆಬೀಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ