ಆ್ಯಪ್ನಗರ

ಕೇರಳದಲ್ಲಿ ಲಂಕಾ ಪ್ರಜೆ ವಶಕ್ಕೆ

ಪ್ರಯಾಣದ ವೇಳೆ ತನ್ನ ಪಾಸ್‌ಪೋರ್ಟ್‌, ವೀಸಾ ಹಾಗೂ ಇತರೆ ಪ್ರಮುಖ ದಾಖಲೆಗಳನ್ನು ಹೊಂದಿದ್ದ ಬ್ಯಾಗ್‌ ಕಳವಾಗಿದೆ ಎಂದು ಡೈಯಾಸ್‌ ಪೊಲೀಸರಿಗೆ ತಿಳಿಸಿದ್ದಾರೆ.

Vijaya Karnataka 6 May 2019, 5:00 am
ತಿರುವನಂತಪುರಂ: ಸೂಕ್ತ ಪ್ರಯಾಣ ದಾಖಲೆಗಳನ್ನು ಹೊಂದಿರದ ಶ್ರೀಲಂಕಾ ಪ್ರಜೆಯನ್ನು ಕೇರಳ ಪೊಲೀಸರು ತಿರುವನಂತಪುರಂನಲ್ಲಿ ವಶಕ್ಕೆ ಪಡೆದಿದ್ದಾರೆ.
Vijaya Karnataka Web arrest

ವಶಕ್ಕೆ ಪಡೆದ ವ್ಯಕ್ತಿಯನ್ನು ಮಲೂಗೆ ಜೂತ್‌ ಸೆಲ್ಫಾನ್‌ ಡಿಯಾಸ್‌ ಎಂದು ಗುರುತಿಸಲಾಗಿದ್ದು, ನಗರದ ತಂಪಾನೂರ್‌ ಬಸ್‌ ನಿಲ್ದಾಣದಲ್ಲಿ ಶನಿವಾರ ರಾತ್ರಿ ಈತ ಸಿಕ್ಕಿದ್ದಾರೆ.
ಪ್ರಯಾಣದ ವೇಳೆ ತನ್ನ ಪಾಸ್‌ಪೋರ್ಟ್‌, ವೀಸಾ ಹಾಗೂ ಇತರೆ ಪ್ರಮುಖ ದಾಖಲೆಗಳನ್ನು ಹೊಂದಿದ್ದ ಬ್ಯಾಗ್‌ ಕಳವಾಗಿದೆ ಎಂದು ಡೈಯಾಸ್‌ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಕೇರಳಕ್ಕೆ ಹೇಗೆ ಪ್ರವೇಶಿಸಿದರು ಎಂಬ ಬಗ್ಗೆ ಆತ ಸರಿಯಾದ ಮಾಹಿತಿ ನೀಡದ ಕಾರಣ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಲಂಕಾದಲ್ಲಿ ಈಸ್ಟರ್‌ದಿನ ನಡೆದ ಸರಣಿ ಆತ್ಮಾಹುತಿ ಸ್ಫೋಟದ ದಾಳಿಕೋರರು ಕೇರಳ, ಬೆಂಗಳೂರು ಹಾಗೂ ಕಾಶ್ಮೀರಕ್ಕೆ ಬಂದು ಹೋಗಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಲಂಕಾ ಮೂಲದ ವ್ಯಕ್ತಿಯ ಸೆರೆ ಮಹತ್ವ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ