ಆ್ಯಪ್ನಗರ

ಬುಲಂದ್‌ಶಹರ್ ಹಿಂಸಾಚಾರ: ಪುತ್ರನ ಜತೆ ಸುಬೋಧ್ ಸಿಂಗ್ ಕೊನೆಯ ಮಾತು

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಇನ್ಸ್‌ಪೆಕ್ಟರ್ ಸುಬೋಧ್‌ ಸಿಂಗ್‌ರ ಅಂತಿಮ ಕ್ಷಣಗಳ ಬಗ್ಗೆ ಪುತ್ರ ಅಭಿಷೇಕ್ ಮಾತನಾಡಿದ್ದಾನೆ. ಕೊನೆಯ ಬಾರಿಗೆ ತನ್ನ ತಂದೆಯ ಜತೆಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ ಬಗ್ಗೆ ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ರ ಕಿರಿಯ ಪುತ್ರ ಅಭಿಷೇಕ್‌ ಹೇಳಿಕೊಂಡಿದ್ದಾನೆ. ಸಂಜೆ ಬರುತ್ತಿದ್ದೇನೆಂದು ಹೇಳಿದ್ದ ಅಪ್ಪನಿಗೆ ಗುಂಡೇಟು ತಗುಲಿದೆ ಎಂಬ ಸುದ್ದಿ ಕೇಳಿ ಮನೆಯಲ್ಲಿ ಯಾರೂ ನಿದ್ದೆ ಮಾಡಿಲ್ಲ ಎಂದು ಅಭಿಷೇಕ್ ಹೇಳಿದ್ದಾನೆ.

Navbharat Times 6 Dec 2018, 4:48 pm
[This story originally published in Navbharat Times on Dec 06, 2018]
Vijaya Karnataka Web subodh singh and son

ಬುಲಂದ್‌ಶಹರ್:
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಇನ್ಸ್‌ಪೆಕ್ಟರ್ ಸುಬೋಧ್‌ ಸಿಂಗ್‌ರ ಅಂತಿಮ ಕ್ಷಣಗಳ ಬಗ್ಗೆ ಪುತ್ರ ಅಭಿಷೇಕ್ ಮಾತನಾಡಿದ್ದಾನೆ. ಸಂಜೆ ತನ್ನ ಪತ್ನಿ ಹಾಗೂ ಪುತ್ರ ಇರುವ ಜಾಗಕ್ಕೆ ಬರಬೇಕಿದ್ದ ಇನ್ಸ್‌ಪೆಕ್ಟರ್ ಬುಲಂದ್‌ಶಹರ್ ಡಿಸೆಂಬರ್ 3 ರಂದು ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದರು.

ಕೊನೆಯ ಬಾರಿಗೆ ತನ್ನ ತಂದೆಯ ಜತೆಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ ಬಗ್ಗೆ ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ರ ಕಿರಿಯ ಪುತ್ರ ಅಭಿಷೇಕ್‌ ವಿಜಯ ಕರ್ನಾಟಕ ಸೋದರ ಪತ್ರಿಕೆ ನವಭಾರತ್‌ ಟೈಮ್ಸ್ ಜತೆ ನೆನಪಿಸಿಕೊಂಡಿದ್ದಾನೆ. ''ನನ್ನ ಓದಿನ ಬಗ್ಗೆ ತಂದೆ ವಿಚಾರಿಸಿದರು. ನನಗೆ ಡಿಸೆಂಬರ್ 3ರಂದು ಎಕನಾಮಿಕ್ಸ್ ಪರೀಕ್ಷೆಯಿತ್ತು. ಹೀಗಾಗಿ, ತಾನು ಓದಿ ಮುಗಿಸಿದ ಬಳಿಕ ಮಲಗುವುದಾಗಿ ತಂದೆಗೆ ಹೇಳಿದ್ದೆ. ಬಳಿಕ, ತನ್ನ ತಾಯಿಯ ಜತೆಗೆ ( ಹತ್ಯೆಗೀಡಾದ ಇನ್ಸ್‌ಪೆಕ್ಟರ್‌ ಪತ್ನಿ) ಮಾತನಾಡಿದ ಅವರು, ಡಿಸೆಂಬರ್‌ 4 ರಂದು ಗೆಳೆಯರ ಪುತ್ರನ ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗಬೇಕಾಗಿದೆ. ಹೀಗಾಗಿ, ಸಂಜೆ ಬರುತ್ತಿದ್ದೇನೆಂದು ಹೇಳಿದ್ದರು'' ಎಂದು ಅಭಿಷೇಕ್ ಮಾಹಿತಿ ನೀಡಿದ್ದಾನೆ.

ಪತ್ನಿಯ ಜತೆಗೆ ಸುಬೋಧ್‌ ಸಿಂಗ್


ಅಲ್ಲದೆ, ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ ಪದೇ ಪದೇ ವರ್ಗಾವಣೆಯಾಗುತ್ತಿದ್ದ ಕಾರಣ ಅವರು ಸಿಯಾನಾದಲ್ಲಿ ತಂಗಿದ್ದರು. ಜತೆಗೆ, ಅವರಿಗೆ ವಯಸ್ಸಾಗಿದ್ದ ಕಾರಣ ನಿತ್ಯವೂ ಪ್ರಯಾಣಿಸುವುದು ಕಷ್ಟವಿತ್ತು. ತಮ್ಮ ಸಾಕು ನಾಯಿ ಸಹ ಅವರ ಜತೆಗೇ ಇತ್ತು. ಅಪ್ಪ ಅದನ್ನೂ ಕರೆದುಕೊಂಡು ಬರಬೇಕಿತ್ತು. ಸಾಕು ನಾಯಿ ತನ್ನನ್ನು ಹೇಗೆ ಪ್ರೀತಿ ಮಾಡುತ್ತದೆ ಎಂಬುದನ್ನು ಸಹ ಅವರು ಕೊನೆಯ ವೀಡಿಯೋ ಕಾಲ್‌ನಲ್ಲಿ ಹೇಳಿಕೊಂಡಿದ್ದರು'' ಎಂದು ಅಭಿಷೇಕ್ ಹೇಳಿಕೊಂಡಿದ್ದಾನೆ.

ಅಲ್ಲದೆ, ''ತನ್ನ ತಾಯಿ ತಂದೆಗೆ ಫೋನ್‌ ಮಾಡುವ ಮೂಲಕವೇ ತನ್ನ ದಿನವನ್ನು ಆರಂಭಿಸುತ್ತಿದ್ದರು. ಡಿಸೆಂಬರ್ 3 ರಂದು ಬೆಳಗ್ಗೆ 9 ಗಂಟೆಗೆ ಕರೆ ಮಾಡಿದ್ದ ತಾಯಿ, 9:30ರ ವರೆಗೆ ಮಾತನಾಡಿದ್ದರು'' ಎಂದೂ ಹತ್ಯೆಗೀಡಾದ ಇನ್ಸ್‌ಪೆಕ್ಟರ್‌ ಪುತ್ರ ತಿಳಿಸಿದ್ದಾನೆ. ಜತೆಗೆ, ''ಆ ದಿನ ತಾನು ಮಧ್ಯಾಹ್ನ 1.30ಕ್ಕೆ ಮನೆಗೆ ಬಂದ ಬಳಿಕ, ತನ್ನ ತಂದೆಗೆ ಪೆಟ್ಟಾಗಿದೆ. ಹೀಗಾಗಿ, ನೀವು ಬನ್ನಿ ಎಂದು ಯಾರೋ ಕರೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಕೇಳಿದ್ದಕ್ಕೆ, ತನ್ನ ತಂದೆಗೆ ಗುಂಡು ಹಾರಿಸಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು'' ಎಂಬ ಬಗ್ಗೆ ಅಭಿಷೇಕ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ.

ಪತ್ನಿಯ ಜತೆಗೆ ಸಾಂಪ್ರದಾಯಿಕ ಉಡುಪಿನಲ್ಲಿ ಸುಬೋಧ್‌ ಸಿಂಗ್


ಇನ್ನು, ''ತಂದೆಗೆ ಗುಂಡೇಟು ಬಿದ್ದಿದೆ ಎಂಬ ಸುದ್ದಿ ಬಂದ ಬಳಿಕ, ತಾನು 3 ದಿನಗಳಾದರೂ ಶಾಲೆಯ ಯೂನಿಫಾರ್ಮ್ ಅನ್ನೇ ಬದಲಿಸಿಲ್ಲ. ಮನೆಯಲ್ಲಿ ಯಾರೂ ಕಳೆದ 3 ದಿನಗಳಿಂದ ನಿದ್ದೆ ಮಾಡಿಲ್ಲ'' ಎಂದು ಅಭಿಷೇಕ್‌ ಇನ್ಸ್‌ಪೆಕ್ಟರ್ ಸುಬೋಧ್‌ ಸಿಂಗ್ ಕುಟುಂಬ ಬೇಸರದಲ್ಲಿರುವ ಬಗ್ಗೆ ನೊಂದು ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ