ಆ್ಯಪ್ನಗರ

ಕಾರು ಅಪಘಾತದಲ್ಲಿ ಮೃತಪಟ್ಟ ಪಾಲ್ಘರ್ ಸಾಧುಗಳ ಹತ್ಯೆ ಪ್ರಕರಣದ ವಕೀಲ: ತಂದೆ ಹೇಳಿದ್ದೇನು?

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ ಪ್ರಕರಣದಲ್ಲಿ ಮೃತ ಸಾಧುಗಳ ಪರ ವಕೀಲ ರಸ್ತೆ ಅಪಘಾತದಲ್ಲಿ ಮೃತಟ್ಟಿದ್ದಾರೆ. ಕಿರಿಯ ವಕೀಲ ದಿಗ್ವಿಜಯ್ ತ್ರಿವೇದಿ ಕಾರು ಅಪಘಾತದಲ್ಲಿ ಮೃತಪಟ್ಟಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

Vijaya Karnataka Web 15 May 2020, 5:37 pm
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ ಪ್ರಕರಣದಲ್ಲಿ ಮೃತ ಸಾಧುಗಳ ಪರ ವಕೀಲ ರಸ್ತೆ ಅಪಘಾತದಲ್ಲಿ ಮೃತಟ್ಟಿದ್ದಾರೆ. ಕಿರಿಯ ವಕೀಲ ದಿಗ್ವಿಜಯ್ ತ್ರಿವೇದಿ ಕಾರು ಅಪಘಾತದಲ್ಲಿ ಮೃತಪಟ್ಟಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ವಕೀಲ ದಿಗ್ವಿಜಯ್ ತ್ರಿವೇದಿ ಹಾಗೂ ಅವರ ಸಹಾಯಕಿ ಪ್ರೀತಿ ತ್ರಿವೇದಿ ದಹನು ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ, ದಿಗ್ವಿಜಯ್ ಅವರು ಚಲಾಯಿಸುತ್ತಿದ್ದ ಕಾರು ಮುಂಬೈ-ಅಹಮದಾಬಾದ್ ಹೆದ್ದಾರಿ ಬಳಿಯ ಚರೋಟಿ ನಾಕಾ ಬಳಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಧುಗಳ ಹತ್ಯೆ ಪ್ರಕರಣ: 115ಕ್ಕೇರಿದ ಬಂಧಿತರ ಸಂಖ್ಯೆ, ಸಂಪೂರ್ಣ ವರದಿ ಕೇಳಿದ ಸುಪ್ರೀಂ

ಮೃತ ಸಾಧುಗಳ ಪರ ವಾದ ಮಂಡಿಸಲು ವಿಶ್ವ ಹಿಂದೂ ಪರಿಷತ್ ದಿಗ್ವಿಜಯ್ ತ್ರಿವೇದಿ ಹಾಗೂ ಪ್ರೀತಿ ತ್ರಿವೇದಿ ಅವರನ್ನು ನೇಮಕ ಮಾಡಿಕೊಂಡಿತ್ತು. ಪ್ರಕರಣದ ವಿಚಾರಣೆಗಾಗಿಯೇ ದಹುನಾ ನ್ಯಾಯಾಲಯಕ್ಕೆ ತೆರಳುತ್ತಿರುವ ವೇಳೆ ಕಾರು ಪಲ್ಟಿಯಾಗಿ ದಿಗ್ವಿಜಯ್ ತ್ರಿವೇದಿ ಸ್ಥಳದಲ್ಲೇ ಮೃತಪಟ್ಟಿದ್ಧಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕಾಸಾ ಪೊಲೀಸ್ ಠಾಣೆಯ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಸಿದ್ಧವಾ ಜೇಬಯಿ, ಅತಿ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

ಮಕ್ಕಳ ಕಳ್ಳರೆಂದು ಸಾಧುಗಳನ್ನು ಹೊಡೆದು ಕೊಂದ ದುರುಳರು: ಭೀಕರ ಘಟನೆಗೆ ಭುಗಿಲೆದ್ದ ಆಕ್ರೋಶ!

ಆದರೆ ತಮ್ಮ ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ದಿಗ್ವಿಜಯ್ ತ್ರಿವೇದಿ ತಂದೆ ಓಂಪ್ರಕಾಶ್ ತ್ರಿವೇದಿ, ಕಳೆದ ಐದು ವರ್ಷಗಳಿಂದ ಕಾರು ಚಲಾಯಿಸುತ್ತಿದ್ದ ದಿಗ್ವಿಜಯ್ ಹೀಗೆ ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡುತ್ತಾನೆ ಎಂದರೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ