ಆ್ಯಪ್ನಗರ

ತಾಪಮಾನದಲ್ಲಿ ಏರಿಕೆ: ಬೇಗನೆ ಕರಗುವ ಮಂಜಿನಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ಥ

ಮನಾಲಿ: ಲೇಹ್‌-ಮನಾಲಿ ಸೇರಿದಂತೆ ಹಿಮಾಚಲ ಪ್ರದೇಶದ ಅನೇಕ ಭಾಗಗಳಿಗೆ ಉಷ್ಣಾಂಶದ ಏರಿಕೆಯ ಬಿಸಿ ತಟ್ಟಿದೆ.

TIMESOFINDIA.COM 7 Jun 2018, 12:50 pm
ಮನಾಲಿ: ಲೇಹ್‌-ಮನಾಲಿ ಸೇರಿದಂತೆ ಹಿಮಾಚಲ ಪ್ರದೇಶದ ಅನೇಕ ಭಾಗಗಳಿಗೆ ಉಷ್ಣಾಂಶದ ಏರಿಕೆಯ ಬಿಸಿ ತಟ್ಟಿದೆ.
Vijaya Karnataka Web himachap pradesh


ಮನಾಲಿ, ಲಾಹೌಲ್‌, ಕೀಲಂಗ್‌ ಸೇರಿದಾಂತೆ ಇನ್ನಿತರ ಭಾಗಗಳಲ್ಲಿ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ ದಾಟಿರುವ ಪರಿಣಾಮವಾಗಿ ಹಿಮಕರಗಿ ಪ್ರವಾಹ ಭೀತಿ ಉಂಟಾಗಿದೆ. ಲೇಹ್‌ ಹಾಗೂ ಮನಾಲಿ ಹೆದ್ದಾರಿಯೂ ಪ್ರವಾಹದ ಪರಿಣಾಮದಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹೆದ್ದಾರಿಯಲ್ಲಿನ ಕೋಕ್ಸಾರ್‌ ಹಾಗೂ ಸಿಸ್ಸು ಗ್ರಾಮದ ಭಾಗಗಳಲ್ಲಿ ಮಂಗಳವಾರದಿಂದ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ದೊಡ್ಡದಾದ ಕಲ್ಲು ಬಂಡೆ, ಮರದ ದಿಮ್ಮಿ ಸೇರಿದಂತೆ ಇನ್ನಿತರ ಅವಶೇಷಗಳು ನೀರಿನೊಂದಿಗೆ ಬರುತ್ತಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಶೀತ ವಾತಾವರಣಕ್ಕೆ ಹೆಸರಾಗಿರುವ ಹಿಮಾಚಲ ಪ್ರದೇಶದ ಅನೇಕ ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ತಾಪಮಾನದಲ್ಲಿ ಏರಿಕೆಯಾಗಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಭಾಗಗಳಲ್ಲಿನ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗಿರುವುದರಿಂದ ಹಿಮಾಚಲ ಪ್ರದೇಶಗಳ ಭಾಗದಲ್ಲಿ ವೇಗವಾಗಿ ಹಿಮ ಕರಗಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ ಎನ್ನಲಾಗಿದೆ.

ಹೆದ್ದಾರಿ ಭಾಗದಲ್ಲಿ ಅನೇಕ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಭಾಗಗಳಲ್ಲಿ ಮಷೀನ್‌ ಹಾಗೂ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವಶೇಷಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಪಮಾನ ಹೆಚ್ಚಳ ಆಗುತ್ತಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು 70 ರೋಡ್‌ ಕನ್ಸ್‌ಸ್ಟ್ರಕ್ಷನ್‌ ಕಂಪನಿಯ ಕಮಾಂಡಿಂಗ್ ಆಫಿಸರ್‌ ಬಿಆರ್‌ಒ ಎಲ್‌ಟಿ ಕರ್ನಲ್‌ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ