ಆ್ಯಪ್ನಗರ

ತಾಯಿ ಮಡಿಲಲ್ಲಿದ್ದ 3 ವರ್ಷದ ಮಗು ಹೊತ್ತೊಯ್ದ ಚಿರತೆ

ಏಕಾಏಕಿ ತೋಟಕ್ಕೆ ನುಗ್ಗಿದ ಚಿರತೆ ತಾಯಿ ಪೂಜಾ ಮಡಿಲಿನಲ್ಲಿದ್ದ ಪುತ್ರಿ ಪ್ರಣಿತಾ ಓರಾನ್‌ಳನ್ನು ಹೊತ್ತೊಯ್ದು ಕೊಂದು ಹಾಕಿದೆ.

TIMESOFINDIA.COM 17 Jan 2019, 3:26 pm
ಅಲಿಪುರ್ದುವಾರ್: ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯ ಚಹಾ ತೊಟವೊಂದರಲ್ಲಿ ಚಿರತೆಯೊಂದು ತಾಯಿಯ ಮಡಿಲಿನಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ಹೊತೊಯ್ದು ಕೊಂದು ಹಾಕಿದ ಆಘಾತಕಾರಿ ಘಟನೆಯೊಂದು ನಡೆದಿದೆ.
Vijaya Karnataka Web l


ಗಾರ್ಗಂದ ಚಹಾ ತೋಟದಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಪೂಜಾ ಓರಾನ್ ಎಂಬವರು ತೋಟದಲ್ಲಿರುವ ತನ್ನ ಮನೆಯ ಹೊರ ಭಾಗದಲ್ಲಿ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ತೋಟಕ್ಕೆ ನುಗ್ಗಿದ ಚಿರತೆ ತಾಯಿ ಪೂಜಾ ಮಡಿಲಿನಲ್ಲಿದ್ದ ಪುತ್ರಿ ಪ್ರಣಿತಾ ಓರಾನ್‌ಳನ್ನು ಹೊತ್ತೊಯ್ದು ಕೊಂದು ಹಾಕಿದೆ.

ಅಲಿಪುರ್ದುವಾರ್‌ನ ಬಿರ್ಪಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜಾ ಅವರ ನಿವಾಸದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ಪ್ರಣಿತಾಳ ಮೃತದೇಹ ಪತ್ತೆಯಾಗಿದೆ.

'ಪುತ್ರಿಯನ್ನು ರಕ್ಷಿಸಲು ಚಿರತೆ ಜತೆ ಕಾದಾಡಲು ಯತ್ನಿಸಿದೆ. ಆದರೆ, ನನ್ನ ಪ್ರಯತ್ನ ವಿಫಲವಾಯ್ತು' ಎಂದು ತಾಯಿ ಓರಾನ್ ಅಳಲು ತೊಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ