ಆ್ಯಪ್ನಗರ

ದೇಶ ಇಬ್ಭಾಗ ಮಾಡುವ ತುಕ್ಡೆ, ತುಕ್ಡೆ ಗ್ಯಾಂಗ್‌ ಸೋಲಿಸುವ ಸಮಯ ಬಂದಿದೆ: ಅಮಿತ್‌ ಶಾ

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ ವೈಯಕ್ತಿಕ ಮಟ್ಟಕ್ಕೂ ಇಳಿಯುತ್ತಿದೆ. ರಾಜಕೀಯ ಪಕ್ಷಗಳ, ನಾಯಕರ ನಡುವೆ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ.

Vijaya Karnataka Web 26 Dec 2019, 7:41 pm
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿಷಯದಲ್ಲಿ ಪ್ರತಿಭಟನೆ, ಪ್ರತಿರೋಧ ಮತ್ತು ಹಿಂಸಾಚಾರದ ಅಬ್ಬರ ಈಗ ತಣ್ಣಗಾಗಿದೆ. ಆದರೆ ವಾದ-ಪ್ರತಿಪಾದ, ಏಟು-ಎದಿರೇಟಿನ ಭರಾಟೆ ಜೋರಾಗಿದೆ. ನೂತನ ಕಾಯಿದೆ ವಿಷಯದಲ್ಲಿಬಿಜೆಪಿ ಮತ್ತು ಪ್ರತಿಪಕ್ಷಗಳ ಮುಖಂಡರು ಗುರುವಾರ ತಮ್ಮದೇ ಧಾಟಿಯಲ್ಲಿ ಸಮರ್ಥನೆ ಮತ್ತು ದೂಷಣೆಯ ಜಂಗಿಕುಸ್ತಿ ನಡೆಸಿ ಗಮನ ಸೆಳೆದರು.
Vijaya Karnataka Web ಅಮಿತ್‌ ಶಾ
ಅಮಿತ್‌ ಶಾ


ಗೊಂದಲ ಸೃಷ್ಟಿಸುತ್ತಿದೆ ಕಾಂಗ್ರೆಸ್‌


ಪೌರತ್ವ ತಿದ್ದುಪಡಿ ಕಾಯಿದೆ ವಿಷಯದಲ್ಲಿಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಆ ಮೂಲಕ ಇಡೀ ದೇಶದ ನೆಮ್ಮದಿ ಕದಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದರು.

ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಪೌರತ್ವ ವಿಷಯದಲ್ಲಿ ಎಡ ಪಂಥೀಯ ಚಿಂತಕರು ತಳೆದ ನಿಲುವನ್ನು ಖಂಡಿಸಿದರು. ಅವರನ್ನು ‘ತುಕ್ಡೆ ತುಕ್ಡೆ ಗ್ಯಾಂಗ್‌’ ಎಂದು ಜರಿದರು.

‘‘ದಿಲ್ಲಿಸೇರಿದಂತೆ ದೇಶದೆಲ್ಲಡೆ ನೆಮ್ಮದಿ ಕದಡಲು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಕಾರಣ. ಸಿಎಎ ವಿಷಯದಲ್ಲಿಜನರನ್ನು ದಾರಿ ತಪ್ಪಿಸಿ ನೆಮ್ಮದಿ ಕದಡುವ ಕೆಲಸವನ್ನು ಈ ತುಕ್ಡೆ ತುಕ್ಡೆ ಗ್ಯಾಂಗ್‌ ಮಾಡುತ್ತಿದೆ. ಆದರೆ ದೇಶದ ಅಭಿವೃದ್ಧಿ ಮತ್ತು ಐಕ್ಯತೆ ನಮ್ಮ ಗುರಿ. ಇದನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ,’’ ಎಂದರು.

ದೇಶ ವಿಭಜಿಸಲು ಯತ್ನಿಸುವ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಹೊಸದಿಲ್ಲಿಯ ಜನರು ಪಾಠ ಕಲಿಸಲು ಅವಕಾಶ ಒದಗಿ ಬಂದಿದೆ ಎಂದು ಸಚಿವ ಅಮಿತ್‌ ಶಾ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ