ಆ್ಯಪ್ನಗರ

ಬಿಜೆಪಿಯ ಮೂವರು ಕಾರ್ಯಕರ್ತರ ಕೊಲೆಯ ಹಿಂದೆ ಲಷ್ಕರೆ-ಎ-ತೊಯ್ಬಾ ಕೈವಾಡ: ಕಾಶ್ಮೀರ ಪೊಲೀಸ್‌

ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಹಿಂದೆ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ನ ಕೈವಾಡ ಇದೆ ಎಂದು ಖಚಿತಪಡಿಸಿದ್ದಾರೆ ಜಮ್ಮು-ಕಾಶ್ಮೀರ ಐಜಿ ವಿಜಯ್‌ ಕುಮಾರ್ ಖಚಿತಪಡಿಸಿದ್ದಾರೆ. ಕಳೆದ ಜೂನ್‌ನಿಂದ ಎಂಟು ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.

Vijaya Karnataka Web 30 Oct 2020, 3:23 pm
ಕುಲ್ಗಾಮ್: ಕುಲ್ಗಾಮ್ ಜಿಲ್ಲೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದು ಲಷ್ಕರೆ-ಎ-ತೊಯ್ಬಾ ಸಂಘಟನೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಐಜಿ ವಿಜಯ್‌ ಕುಮಾರ್‌, ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಹಿಂದೆ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ನ ಕೈವಾಡ ಇದೆ ಎಂದು ಖಚಿತಪಡಿಸಿದ್ದಾರೆ.
Vijaya Karnataka Web kulgam


ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ಲಷ್ಕರೆ-ಎ-ತೊಯ್ಬಾ ಸಂಘಟನೆಯ ನೆರಳಾಗಿ ಕೆಲಸ ಮಾಡುವ ತಂಡ ಎಂದು ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ರೆಸಿಸ್ಟೆನ್ಸ್ ಫ್ರಂಟ್ ಜಮ್ಮ-ಕಾಶ್ಮೀರದಲ್ಲಿ ನೆಲಯೂರಲು ಮುಂದಾಗುತ್ತಿದೆ ಎಂದು ಕೂಡ ವಿಜಯ್‌ ಕುಮಾರ್‌ ತಿಳಿಸಿದ್ದಾರೆ. ಉಗ್ರ ಸಂಘಟನೆಗಳು ತಾವು ನೆಲೆಯೂರ ಬೇಕಾದ ಪ್ರದೇಶಗಳಲ್ಲಿ ರೆಸಿಸ್ಟೆನ್ಸ್ ಫ್ರಂಟ್ ತಂಡ ರಚಿಸಿ ಉಗ್ರ ಕೃತ್ಯ ನಡೆಸಿ ಭಯಭೀತಗೊಳಿಸಲು ಮುಂದಾಗುತ್ತದೆ.

ಗುರುವಾರ ವೈಕೆ ಪೊರಾ ಬಳಿ ಕಾರಿನಲ್ಲಿ ಬರುತ್ತಿದ್ದ ಬಿಜೆಪಿ ನಾಯಕರಾದ ಫಿದಾ ಹುಸೇನ್ ಯಾಟೂ, ಉಮರ್ ರಷಿದ್ ಹಾಗೂ ರಮ್ಜಾನ್ ಹಜಮ್ ಎಂಬುವವರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದರು.ಕಾರಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಮೂವರೂ ನಾಯಕರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಣಿವೆಯಲ್ಲಿ ಉಗ್ರರ ಗುಂಡಿಗೆ ಮೂವರು ಬಿಜೆಪಿ ನಾಯಕರು ಬಲಿ: ಕುಲ್ಗಾಮ್ ಸ್ತಬ್ಧ!

ಕಳೆದ ಜೂನ್‌ನಿಂದ 8 ಮಂದಿ ಬಿಜೆಪಿ ಕಾರ್ಯಕರ್ತರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಅಂಗರಕ್ಷಕರನ್ನು ನಿಯೋಜಿಸುತ್ತಿರುವ ಸಂದರ್ಭದಲ್ಲೆ ಇಂತಹ ಘಟನೆಗಳು ಮರುಕಳಿಸುತ್ತಿದೆ. ಇದು ಬಿಜೆಪಿ ಸೇರುತ್ತಿರುವ ಕಣಿವೆ ರಾಜ್ಯದ ಜನರನ್ನು ಭಯಭೀತಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ