ಆ್ಯಪ್ನಗರ

ಹಲವು ಜಿಲ್ಲೆಗಳಲ್ಲಿ ಮಳೆ ಸಿಡಿಲು ಬಡಿದು 7 ಜನ ಸಾವು

ಮುಂಗಾರು ಹಿಂದೆ ಸರಿಯುವ ಹೊತ್ತಿನಲ್ಲೇ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ

Vijaya Karnataka 15 Oct 2018, 10:06 pm
ಬೆಂಗಳೂರು: ಮುಂಗಾರು ಹಿಂದೆ ಸರಿಯುವ ಹೊತ್ತಿನಲ್ಲೇ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಈ ನಡುವೆ, ಸೋಮವಾರ ರಾಜ್ಯದ ಹಲವೆಡೆ ಸಿಡಿಲಾಘಾತದಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ತಾಯಿ-ಮಗಳು, ರೈತರು ಸೇರಿದ್ದಾರೆ.
Vijaya Karnataka Web ಸಿಡಿಲು
ಸಿಡಿಲು


ದಾವಣಗೆರೆ ಜಿಲ್ಲೆಯ ಚನ್ನಹಳ್ಳಿ ತಾಂಡಾದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳು ಸಿಡಿಲು ಬಡಿದು ಮೃತಪಟ್ಟರೆ, ಜಗಳೂರು ಬಳಿ ಹೊಲದಲ್ಲಿ ಜೋಳದ ತೆನೆ ಮುರಿಯುತ್ತಿದ್ದ ಮಹಿಳೆ ಕೂಡಾ ಮೃತಪಟ್ಟರು. ಕಲ್ಲೇನಹಳ್ಳಿಯಲ್ಲಿ ಮೆಕ್ಕೆಜೋಳ ತೆನೆಯನ್ನು ಟ್ರ್ಯಾಕ್ಟರ್‌ಗೆ ಲೋಡ್‌ ಮಾಡುತ್ತಿದ್ದಾಗ ರೈತರೊಬ್ಬರು ಸಿಡಿಲಿಗೆ ಬಲಿಯಾದರು. ಹಾವೇರಿ ಜಿಲ್ಲೆಯ ನರೇಗಲ್‌ನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ಹತ್ತಿ ಬಿಡಿಸಿ ಮನೆಗೆ ಮರಳುತ್ತಿದ್ದ ಕೃಷಿಕನನ್ನು ಸಿಡಿಲು ಬಲಿ ಪಡೆದಿದೆ. ಸಿರವಾರದ ಬ್ಯಾಗವಾಟದಲ್ಲಿ ಮರದಡಿ ನಿಂತಿದ್ದ ರೈತರೊಬ್ಬರು ಸಿಡಿಲಾಘಾತಕ್ಕೆ ಒಳಗಾಗಿದ್ದಾರೆ. ಚಿತ್ರದುರ್ಗದ ಪರಶುರಾಂಪುರದಲ್ಲಿ ಎರಡು ಎತ್ತುಗಳು ಸತ್ತಿವೆ.

18ವರೆಗೆ ಮಳೆ

ಕರಾವಳಿಯ ಎಲ್ಲ ಕಡೆ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅ.18 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ