ಆ್ಯಪ್ನಗರ

ದೀಪಗಳನ್ನು ಮಾತ್ರ ಆರಿಸಿ, ಎಸಿ, ಫ್ರಿಡ್ಜ್‌ ಆಫ್‌ ಬೇಡ: ಕೇಂದ್ರ ಸರಕಾರ ಸ್ಪಷ್ಟನೆ

ಒಂದು ಬಾರಿಗೆ ಎಲ್ಲವನ್ನು ಆಫ್‌ ಮಾಡಿದರೆ ಪವರ್‌ ಗ್ರಿಡ್‌ನಲ್ಲಿ ವಿದ್ಯುತ್ ಪೂರೈಕೆಯಾಗುವುದು ಒಮ್ಮೆಲೇ ಕಡಿಮೆಯಾಗುತ್ತದೆ. 9 ನಿಮಿಷದ ನಂತರ ಅದು ಮತ್ತೆ ರೀ ಚಾರ್ಜ್‌ ಆಗುವುದು ಕಷ್ಟವಾಗಬಹುದು. ಇದು ತೊಂದರೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka Web 4 Apr 2020, 7:28 pm
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೊದಿ ಅವರು ಏಪ್ರಿಲ್‌ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಗಳನ್ನು ಆರಿಸಿ ದೀಪ ಬೆಳಗಲು ಕರೆ ಕೊಟ್ಟಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಆದರೆ ಈ ಬಗ್ಗೆ ಇರುವ ಗೊಂದಲಗಳನ್ನು ಈಗ ಕೇಂದ್ರ ಇಂಧನ ಸಚಿವಾಲಯ ಸ್ಪಷ್ಟನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು ವಿದ್ಯುತ್‌ ದೀಪಗಳನ್ನು ಆರಿಸಲು ಮಾತ್ರ. ಆದರೆ ಯಾವುದೇ ಕಾರಣಕ್ಕೂ ಮನೆಯ ಎಸಿ, ಫ್ರಿಡ್ಜ್‌ ಆಫ್‌ ಮಾಡಬಾರದು ಎಂದು ಕೇಂದ್ರ ಇಂಧನ ಸಚಿವಾಲಯ ತಿಳಸಿದೆ.

ಉಳಿದವನ್ನು ಏಕೆ ಆಫ್‌ ಮಾಡಬಾರದು ಎಂದು ತಿಳಿಸಲಾಗಿದೆ.

ಒಂದು ಬಾರಿಗೆ ಎಲ್ಲವನ್ನು ಆಫ್‌ ಮಾಡಿದರೆ ಪವರ್‌ ಗ್ರಿಡ್‌ನಲ್ಲಿ ವಿದ್ಯುತ್ ಪೂರೈಕೆಯಾಗುವುದು ಒಮ್ಮೆಲೇ ಕಡಿಮೆಯಾಗುತ್ತದೆ. 9 ನಿಮಿಷದ ನಂತರ ಅದು ಮತ್ತೆ ರೀ ಚಾರ್ಜ್‌ ಆಗುವುದು ಕಷ್ಟವಾಗಬಹುದು. ಇದು ತೊಂದರೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ಮನೆಯ ದೀಪಗಳನ್ನು ಆರಿಸಿ, ಬೀದಿ ದೀಪಗಳು, ಕಂಪ್ಯೂಟರ್, ಟಿವಿ, ಫ್ಯಾನ್, ರೆಫ್ರಿಜಿರೇಟರ್, ಮನೆಯಲ್ಲಿನ ಎಸಿಗಳನ್ನು ಆರಿಸಬಾರದೆಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಒಂದು ದಿನದ ವಿದ್ಯುತ್‌ ಬಳಕೆ ಅಂದಾಜು 160 ಗಿಗಾ ವ್ಯಾಟ್‌ನಷ್ಟಿದೆ. ಒಮ್ಮೆಲೆ ಪವರ್‌ ಗ್ರಿಡ್‌ನಲ್ಲಿ ಆಫ್‌ ಆದರೆ ಅದು ಮತ್ತೆ ಮಾಮಾಲಿ ಸ್ಥಿತಿಗೆ ಬರುವುದು ದುಸ್ತರವಾಗಬಹುದು. ಕೆಲವೊಮ್ಮೆ ಗ್ರಿಡ್‌ನಲ್ಲಿ ಟ್ರಿಪ್‌ ಆಗುವ ಸಾಧ್ಯತೆ ಇರುತ್ತದೆ.

ಕಳೆದ ಕೆಲವು ದಿನಗಳಿಂದ ಇಂಧನ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದು, ಭಾನುವಾರದಂದು ಲೋಡ್‌ ಶೆಡ್ಡಿಂಗ್‌ ಮಾಡುವ ಮೂಲಕ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.

ಆಸ್ಪತ್ರೆಗಳು, ಸಾರ್ವಜನಿಕ ಉಪಯೋಗದಂತಹ ಇನ್ನಿತರ ಅತ್ಯಾವಶ್ಯಕ ಸೇವೆಗಳು, ಮುನ್ಸಿಪಲ್ ಸೇವೆಗಳು, ಕಚೇರಿಗಳು, ಪೊಲೀಸ್ ಠಾಣೆಗಳು, ಉತ್ಪಾದನಾ ಸೌಲಭ್ಯಗಳು ಮತ್ತಿತರ ಕಡೆಗಳಲ್ಲಿ ದೀಪಗಳನ್ನು ಆರಿಸದಂತೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮನೆಗಳಲ್ಲಿನ ದೀಪಗಳನ್ನು ಮಾತ್ರ ಆರಿಸುವಂತೆ ಕರೆ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೀದಿ ದೀಪಗಳನ್ನು ಆರಿಸದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.

ಕೊರೋನಾವೈರಸ್ ವಿರುದ್ಧದ ಹೋರಾಟಕ್ಕಾಗಿ ದೇಶವಾಸಿಗಳು ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಮನೆಯ ದೀಪಗಳನ್ನು ಆರಿಸಿ, ಮನೆಯ ಮುಂದೆ 9 ನಿಮಿಷದವರೆಗೆ ದೀಪಗಳನ್ನು ಬೆಳಗಿಸುವಂತೆ ಕರೆ ಮೋದಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ