ಆ್ಯಪ್ನಗರ

ವಿಡಿಯೋ: ಗುಜರಾತ್‌ನ ಗ್ರಾಮಕ್ಕೆ ನುಗ್ಗಿದ ಸಿಂಹ ಸೆರೆ

ಭೇಟೆಯಾಡಲು ಕಾಡಿನಿಂದ ನಾಡಿಗೆ ಬಂದು ಕಡೆಗೆ ಅರಣ್ಯಾಧಿಕಾರಿಗಳ ಬಲೆಗೆ ಬಿದ್ದ ಸಿಂಹವೊಂದರ ಕಥೆ ಇದು. ಗುಜರಾತ್‌ನ ಅಮರೇಲಿ ಜಿಲ್ಲೆಯ ಖಾಂಭಾ ಬಳಿಯ ಭಾದ್ ಎಂಬ ಗ್ರಾಮಕ್ಕೆ ನುಗ್ಗಿದ ಸಿಂಹ ಮನೆಯೊಂದರ ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಒಳಕ್ಕೆ ಜಂಪ್ ಮಾಡಿದೆ. ಅಲ್ಲಿ ಕಟ್ಟಿಹಾಕಿದ್ದ 5 ಹಸು ಹಾಗೂ 3 ಕರುಗಳ ಮೇಲೆ ದಾಳಿ ಮಾಡಿದ್ದು, ಎಲ್ಲಾ ಕರುಗಳನ್ನೂ ತನ್ನ ಪಂಜಾ ಬೀಸಿ ಕೊಂದುಹಾಕಿದೆ.

ವಿಕ ಸುದ್ದಿಲೋಕ 22 Jun 2017, 8:35 pm
ರಾಜ್‌ಕೋಟ್: ಭೇಟೆಯಾಡಲು ಕಾಡಿನಿಂದ ನಾಡಿಗೆ ಬಂದು ಕಡೆಗೆ ಅರಣ್ಯಾಧಿಕಾರಿಗಳ ಬಲೆಗೆ ಬಿದ್ದ ಸಿಂಹವೊಂದರ ಕಥೆ ಇದು. ಗುಜರಾತ್‌ನ ಅಮರೇಲಿ ಜಿಲ್ಲೆಯ ಖಾಂಭಾ ಬಳಿಯ ಭಾದ್ ಎಂಬ ಗ್ರಾಮಕ್ಕೆ ನುಗ್ಗಿದ ಸಿಂಹ ಮನೆಯೊಂದರ ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಒಳಕ್ಕೆ ಜಂಪ್ ಮಾಡಿದೆ. ಅಲ್ಲಿ ಕಟ್ಟಿಹಾಕಿದ್ದ 5 ಹಸು ಹಾಗೂ 3 ಕರುಗಳ ಮೇಲೆ ದಾಳಿ ಮಾಡಿದ್ದು, ಎಲ್ಲಾ ಕರುಗಳನ್ನೂ ತನ್ನ ಪಂಜಾ ಬೀಸಿ ಕೊಂದುಹಾಕಿದೆ. ಈ ಸಂದರ್ಭದಲ್ಲಿ ಸಿಂಹಕ್ಕೆ ಹಸುವೊಂದು ಬಲವಾಗಿ ಜಾಡಿಸಿದ ಕಾರಣ ಅದು ಚೇತರಿಸಿಕೊಳ್ಳಲು ಅರ್ಧ ಗಂಟೆ ಹಿಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Vijaya Karnataka Web lion that entered villagers house near khambha caged
ವಿಡಿಯೋ: ಗುಜರಾತ್‌ನ ಗ್ರಾಮಕ್ಕೆ ನುಗ್ಗಿದ ಸಿಂಹ ಸೆರೆ


ಬಳಿಕ ಎಚ್ಚೆತ್ತುಕೊಂಡು ಅಲ್ಲೇ ಕರುವನ್ನು ತಿನ್ನುತ್ತಿರುವ ವಿಡಿಯೋವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ರಾತ್ರಿಯಾಗಿದ್ದ ಕಾರಣ ಆ ಮನೆಯ ಮಾಲೀಕ 5 ಹಸುಗಳು ಹಾಗೂ 3 ಕರುಗಳನ್ನು ತನ್ನ ಮನೆಯ ಆವರಣದಲ್ಲಿ ಕಟ್ಟಿಹಾಕಿದ್ದ. ಹಾಗಾಗಿ ಆ ಕರುಗಳು ಸಿಂಹದ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆದರೆ ಹಸುಗಳ ಆಕ್ರಂದನಕ್ಕೆ ಎಚ್ಚೆತ್ತುಕೊಂಡ ಮನೆ ಮಾಲೀಕ ಬಬ್ಲೂ ಬರ್ವಾದ್ ಬಂದು ನೋಡಿದ್ದಾರಾದರೂ ಕರುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೃಗರಾಜನಿಗೆ ಭಯಬಿದ್ದು ಅಸಹಾಯಕನಾಗಿ ನೋಡುತ್ತಾ ಅಲ್ಲೇ ನಿಂತಿದ್ದಾನೆ. ಕಣ್ಣ ಮುಂದೆಯೇ ತನ್ನ ಮರಿಗಳನ್ನು ಸಾಯಿಸಿ ತಿನ್ನುತ್ತಿದ್ದರೆ ಆ ಹಸುಗಳೂ ರೊಚ್ಚಿಗೆದ್ದಿದ್ದವು.

ಕಟ್ಟಿದ್ದ ಹಗ್ಗವನ್ನು ಹರಿದುಕೊಂಡು ಸಿಂಹದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೂ ಅವುಗಳ ಪ್ರಯತ್ನ ಫಲಿಸಿಲ್ಲ. ಕರುವನ್ನು ತಿನ್ನುತ್ತಾ ನಡುವೆ ಹಸುವೊಂದರ ಸಮೀಪಕ್ಕೆ ಹೋದಾಗ...ಆ ಹಸು ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಬಲವಾಗಿ ಸಿಂಹವನ್ನು ಒದ್ದಿದೆ. ಈ ಹಾಠಾತ್ ದಾಳಿಯಿಂದ ನಾಲ್ಕು ಅಡಿ ದೂರಕ್ಕೆ ಹೋಗಿ ಬಿದ್ದ ಸಿಂಹ..ಚೇತರಿಸಿಕೊಳ್ಳಲು ಅರ್ಧ ಗಂಟೆ ಬೇಕಾಯಿತು ಎಂದಿದ್ದಾರೆ ಈ ದೃಶ್ಯವನ್ನು ಕಣ್ಣಾರೆ ಕಂಡಿರುವ ಬಬ್ಲೂ.

ಸರಕಾರದ ಬಿಗಿ ನಿಯಮಗಳಿಂದ ಗುಜರಾತ್‌ನ ಗೀರ್ ಮತ್ತಿತರೆ ಕಾಡುಗಳಲ್ಲಿ ಸಿಂಹಗಳ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ. ಮೃಗರಾಜನ ದಾಳಿಯಿಂದ ಆ ಗ್ರಾಮಸ್ಥರು ರಾತ್ರಿಯಲ್ಲಾ ಜೀವ ಅಂಗೈಯಲ್ಲಿ ಹಿಡಿದು ಓಡಾಡಬೇಕಾಗಿತ್ತು. ಹಸುಗಳ ಮೇಲೆ ದಾಳಿ ಮಾಡಿ ಕರುವನ್ನು ಸಾಯಿಸಿ ತಿನ್ನುತ್ತಿರುವ ದೃಶ್ಯವನ್ನು ಕೆಲವು ಗ್ರಾಮಸ್ಥರು ವಿಡಿಯೋ ಮಾಡಿರುವುದು ಈಗ ಎಲ್ಲೆಡೆ ಹರಿದಾಡುತ್ತಿದೆ.

ಕಡೆಗೂ ಬಲೆಗೆ ಬಿತ್ತು 'ಸಿಂಹ'

ಇದೇ ಸಿಂಹ ಮಿತ್ಯಾಲ ಅಭಯಾರಣ್ಯದಲ್ಲಿ ಗುರುವಾರ ಸೆರೆಸಿಕ್ಕಿದೆ. ಈ ಸಿಂಹಕ್ಕೆ 8-9 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದು ದುರ್ಬಲವಾಗಿತ್ತು ಎಂದು ಮೂಲಗಳು ತಿಳಿಸಿವೆ. ಹಸು ಬಲವಾಗಿ ಒದ್ದಿದ್ದ ಕಾರಣ ಗಂಭೀರವಾಗಿ ಗಾಯಗೊಂಡಿದ್ದು ಬುಧವಾರ ರಾತ್ರಿಯೂ ಅದೇ ಗ್ರಾಮಕ್ಕೆ ಪ್ರವೇಶಿಸಿತ್ತು. ಗ್ರಾಮದ ರಸ್ತೆಯಲ್ಲಿ ಮಲಗಿದ್ದ ಸಿಂಹವನ್ನು ನೋಡಿ ಗ್ರಾಮಸ್ಥರು ಗದ್ದಲ ಮಾಡಿದ್ದರು. ಹಾಗಾಗಿ ಮತ್ತೆ ಕಾಡು ಸೇರಿಕೊಂಡಿತ್ತು. ಕಡೆಗೆ ಅರಣ್ಯಾಧಿಕಾರಿಗಳು ಈ ಸಿಂಹವನ್ನು ಬೋನಿಗೆ ಕೆಡವಿದ್ದಾರೆ. ಅನಾರೋಗ್ಯದಿಂದ ತೀವ್ರ ಬಳಲಿರುವ ಸಿಂಹಕ್ಕೆ ಜಸಧರ್ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ