ಪಿತ್ರೊಗಢ (ಉತ್ತರಾಖಂಡ): ''ಉತ್ತರಾಖಂಡ ರಾಜ್ಯದ ಗಡಿ ಗ್ರಾಮಗಳಾದ ಕಾಲಾಪಾನಿ ಮತ್ತು ಲಿಪುಲೇಖ್ ಅನ್ನು ತನ್ನ ಭೂಪ್ರದೇಶಕ್ಕೆ ಸೇರಿಸಿ ನೇಪಾಳ ಹೊರಡಿಸಿರುವ ಹೊಸ ನಕ್ಷೆಯ ಹಿಂದೆ ಭಾರಿ ಪಿತೂರಿ ಅಡಗಿದೆ. ಭೂ ದಾಖಲೆಗಳ ಪ್ರಕಾರ ಈ ಗ್ರಾಮಗಳು ಸ್ಪಷ್ಟವಾಗಿ ಭಾರತದ ಭಾಗ. ಆದರೆ ಬಾಹ್ಯ ಒತ್ತಡಕ್ಕೆ ಮಣಿದು ವಿವಾದ ಸೃಷ್ಟಿಸಲೆಂದೇ ನೆರೆ ರಾಷ್ಟ್ರವು ಇವನ್ನು ತನ್ನವೆಂದು ಪ್ರತಿಪಾದಿಸಿ, ಅಶಾಂತಿ ಹುಟ್ಟುಹಾಕಲು ಹೊರಟಿದೆ'' ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವಿವಾದಗ್ರಸ್ತ ಹೊಸ ನಕ್ಷೆಗೆ ನೇಪಾಳ ಸಂಸತ್ತಿನ ಕೆಳಮನೆ ಶನಿವಾರ ಅಂಗೀಕಾರದ ಮುದ್ರೆ ಒತ್ತಿದೆ. ಇದಕ್ಕೆ ಭಾರತ ಖಾರವಾದ ಪ್ರತಿಕ್ರಿಯೆ ನೀಡಿದೆ. ಒಟ್ಟು ಮೂರು ಪ್ರದೇಶಗಳ ಪೈಕಿ ಲಿಪುಲೇಖ್ ಮತ್ತು ಕಾಲಾಪಾನಿ ಮೇಲೆ ಹಕ್ಕು ಪ್ರತಿಪಾದಿಸಲು ಮುಂದಾಗಿರುವ ನೇಪಾಳದ ಧೋರಣೆ ಹಾಸ್ಯಾಸ್ಪದವಾಗಿದೆ. ಯಾಕೆಂದರೆ ಈ ಎರಡು ಪ್ರದೇಶಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಬಲವಾದ ಭೂ ದಾಖಲೆಗಳು ಭಾರತದ ಬಳಿ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
''ಲಿಪುಲೇಖ್, ಕಾಲಾಪಾನಿ ಮತ್ತು ನಭಿಧಂಗ್ ಭೂ ಪ್ರದೇಶಗಳು ಭಾರತ-ನೇಪಾಳ ಗಡಿ ತಾಣದ ಆಕರ್ಷಕ ನೆಲೆಗಳು. ಇವು ಭಾರತದ ಗರ್ಬಿಯಾಂಗ್ ಮತ್ತು ಗುಂಜಿ ಗ್ರಾಮಗಳ ನಿವಾಸಿಗರಿಗೆ ಸೇರಿದ ಭೂ ಪ್ರದೇಶಗಳು ಅನ್ನುವುದಕ್ಕೆ ಸ್ಪಷ್ಟವಾದ ಸ್ಥಳೀಯ ದಾಖಲೆಗಳಿವೆ'' ಎಂದು ಪಿತ್ರೊಗಢ ಜಿಲ್ಲೆಯ ಧರ್ಚುಲಾ ಉಪ ವಿಭಾಗಾಧಿಕಾರಿ ಎ.ಕೆ.ಶುಕ್ಲಾ ಹೇಳಿದ್ದಾರೆ.
ಕಾಲಾಪಾನಿ ಮತ್ತು ನಭಿಧಂಗ್ನ 190 ಎಕರೆ ಭೂಮಿಯು ಗರ್ಬಿಯಾಂಗ್ ಗ್ರಾಮಸ್ಥರ ಹೆಸರಿನಲ್ಲಿ ನೋಂದಣಿಯಾಗಿದೆ. ಅದೇ ರೀತಿ ಲಿಪುಲೇಖ್ ಪಾಸ್ನ ನೂರಾರು ಎಕರೆ ಭೂಮಿ ಗುಂಜಿ ಗ್ರಾಮಸ್ಥರ ಹೆಸರಿನಲ್ಲಿದೆ. 1962ರ ಭಾರತ-ಚೀನಾ ಯುದ್ಧಕ್ಕಿಂತ ಮುಂಚಿನಿಂದಲೂ ಈ ಭೂ ಪ್ರದೇಶಗಳನ್ನು ಈ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಭಾರತದ ಬಳಿ ಇವೆ. ಲಿಪುಲೇಖ್ ಪಾಸ್ ಮೂಲಕ ಭಾರತ-ಚೀನಾ ಗಡಿ ವ್ಯಾಪಾರ ನಡೆಯುತ್ತಿತ್ತು.
ಸಮಂಜಸವೂ ಅಲ್ಲ, ಒಪ್ಪುವುದೂ ಇಲ್ಲ: ನೇಪಾಳ ಗಡಿ ನಕ್ಷೆ ಅನುಮೋದನೆಗೆ ಭಾರತ ಗರಂ!
ಯುದ್ಧದ ಬಳಿಕ ಕಾಲಾಪಾನಿ ಕೃಷಿಗೆ ತಡೆ ಬಿತ್ತು. ಹಳೆಯ ದಸ್ತಾವೇಜುಗಳ ಪ್ರಕಾರ, ಕಾಲಾಪಾನಿಯ ಮೌಂಟ್ ಅಪಿವರೆಗಿನ ಭೂಮಿ ಭಾರತೀಯ ಆದಿವಾಸಿ ಸಮುದಾಯಗಳ ಕೃಷಿಕರು ಉಳುಮೆ ಮಾಡುತ್ತಿದ್ದರು. ಆದರೆ ನೇಪಾಳ ಮತ್ತು ಈಸ್ಟ್ ಇಂಡಿಯಾ ಕಂಪನಿ ಸರಕಾರದ ನಡುವೆ 1816ರಲ್ಲಿ ಸುಗೌಲಿ ಒಪ್ಪಂದ ಆದ ಬಳಿಕ ಈ ಭೂಭಾಗದಲ್ಲಿ ಪ್ರಮುಖವಾದವು ಭಾರತದ ಕೈಬಿಟ್ಟು ಹೋದವು.
ನೇಪಾಳದ ವಿವಾದಾತ್ಮಕ ಭೂಪಟಕ್ಕೆ ಜೂ.13ರಂದು ಸಿಗಲಿದೆ ಅನುಮೋದನೆ!
ಹಿಂದೆ ಕಾಳಿ ನದಿಯೇ ನೇಪಾಳ-ಭಾರತದ ಗಡಿ ರೇಖೆಯಾಗಿ ಪರಿಗಣಿತವಾಗಿತ್ತು. ಕಾಲಕ್ರಮದಲ್ಲಿ ನೇಪಾಳ ಒಳಗಿನ ಭೂ ಪ್ರದೇಶಗಳನ್ನು ತ್ಯಾಗ ಮಾಡಿದ್ದಕ್ಕೆ ಪ್ರತಿಯಾಗಿ ಭಾರತೀಯರಿಗೆ ಕಾಲಾಪಾನಿ ಪ್ರದೇಶವನ್ನು ಸಂಪೂರ್ಣ ಬಿಟ್ಟುಕೊಡುವ ಒಡಂಬಡಿಕೆಯಾಗಿತ್ತು. ಇಷ್ಟೆಲ್ಲ ಇದ್ದಾಗ್ಯೂ ನೇಪಾಳ ಈಗ ಚೀನಾದ ಕುಮ್ಮಕ್ಕಿನಿಂದ ಭಾರತದ ಜತೆಗಿನ ಸ್ನೇಹ ಕೆಡಿಸಿಕೊಳ್ಳುವ ತಾಪತ್ರಯಕ್ಕೆ ಕೈಹಾಕಿದೆ ಎಂದು ಶುಕ್ಲಾ ವಿವರಿಸಿದ್ದಾರೆ.
ನೇಪಾಳದಿಂದ ವಿವಾದಿತ ನಕಾಶೆ ಮಸೂದೆ ಮಂಡನೆ; ಚೀನಾ ಕುಮ್ಮಕ್ಕಿನಿಂದ ಭಾರತ ವಿರೋಧಿ ನಡೆ
''ಲಿಪುಲೇಖ್, ಕಾಲಾಪಾನಿ ಮತ್ತು ನಭಿಧಂಗ್ ಭೂ ಪ್ರದೇಶಗಳು ಭಾರತ-ನೇಪಾಳ ಗಡಿ ತಾಣದ ಆಕರ್ಷಕ ನೆಲೆಗಳು. ಇವು ಭಾರತದ ಗರ್ಬಿಯಾಂಗ್ ಮತ್ತು ಗುಂಜಿ ಗ್ರಾಮಗಳ ನಿವಾಸಿಗರಿಗೆ ಸೇರಿದ ಭೂ ಪ್ರದೇಶಗಳು ಅನ್ನುವುದಕ್ಕೆ ಸ್ಪಷ್ಟವಾದ ಸ್ಥಳೀಯ ದಾಖಲೆಗಳಿವೆ'' ಎಂದು ಪಿತ್ರೊಗಢ ಜಿಲ್ಲೆಯ ಧರ್ಚುಲಾ ಉಪ ವಿಭಾಗಾಧಿಕಾರಿ ಎ.ಕೆ.ಶುಕ್ಲಾ ಹೇಳಿದ್ದಾರೆ.
ಕಾಲಾಪಾನಿ ಮತ್ತು ನಭಿಧಂಗ್ನ 190 ಎಕರೆ ಭೂಮಿಯು ಗರ್ಬಿಯಾಂಗ್ ಗ್ರಾಮಸ್ಥರ ಹೆಸರಿನಲ್ಲಿ ನೋಂದಣಿಯಾಗಿದೆ. ಅದೇ ರೀತಿ ಲಿಪುಲೇಖ್ ಪಾಸ್ನ ನೂರಾರು ಎಕರೆ ಭೂಮಿ ಗುಂಜಿ ಗ್ರಾಮಸ್ಥರ ಹೆಸರಿನಲ್ಲಿದೆ. 1962ರ ಭಾರತ-ಚೀನಾ ಯುದ್ಧಕ್ಕಿಂತ ಮುಂಚಿನಿಂದಲೂ ಈ ಭೂ ಪ್ರದೇಶಗಳನ್ನು ಈ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಭಾರತದ ಬಳಿ ಇವೆ. ಲಿಪುಲೇಖ್ ಪಾಸ್ ಮೂಲಕ ಭಾರತ-ಚೀನಾ ಗಡಿ ವ್ಯಾಪಾರ ನಡೆಯುತ್ತಿತ್ತು.
ಸಮಂಜಸವೂ ಅಲ್ಲ, ಒಪ್ಪುವುದೂ ಇಲ್ಲ: ನೇಪಾಳ ಗಡಿ ನಕ್ಷೆ ಅನುಮೋದನೆಗೆ ಭಾರತ ಗರಂ!
ಯುದ್ಧದ ಬಳಿಕ ಕಾಲಾಪಾನಿ ಕೃಷಿಗೆ ತಡೆ ಬಿತ್ತು. ಹಳೆಯ ದಸ್ತಾವೇಜುಗಳ ಪ್ರಕಾರ, ಕಾಲಾಪಾನಿಯ ಮೌಂಟ್ ಅಪಿವರೆಗಿನ ಭೂಮಿ ಭಾರತೀಯ ಆದಿವಾಸಿ ಸಮುದಾಯಗಳ ಕೃಷಿಕರು ಉಳುಮೆ ಮಾಡುತ್ತಿದ್ದರು. ಆದರೆ ನೇಪಾಳ ಮತ್ತು ಈಸ್ಟ್ ಇಂಡಿಯಾ ಕಂಪನಿ ಸರಕಾರದ ನಡುವೆ 1816ರಲ್ಲಿ ಸುಗೌಲಿ ಒಪ್ಪಂದ ಆದ ಬಳಿಕ ಈ ಭೂಭಾಗದಲ್ಲಿ ಪ್ರಮುಖವಾದವು ಭಾರತದ ಕೈಬಿಟ್ಟು ಹೋದವು.
ನೇಪಾಳದ ವಿವಾದಾತ್ಮಕ ಭೂಪಟಕ್ಕೆ ಜೂ.13ರಂದು ಸಿಗಲಿದೆ ಅನುಮೋದನೆ!
ಹಿಂದೆ ಕಾಳಿ ನದಿಯೇ ನೇಪಾಳ-ಭಾರತದ ಗಡಿ ರೇಖೆಯಾಗಿ ಪರಿಗಣಿತವಾಗಿತ್ತು. ಕಾಲಕ್ರಮದಲ್ಲಿ ನೇಪಾಳ ಒಳಗಿನ ಭೂ ಪ್ರದೇಶಗಳನ್ನು ತ್ಯಾಗ ಮಾಡಿದ್ದಕ್ಕೆ ಪ್ರತಿಯಾಗಿ ಭಾರತೀಯರಿಗೆ ಕಾಲಾಪಾನಿ ಪ್ರದೇಶವನ್ನು ಸಂಪೂರ್ಣ ಬಿಟ್ಟುಕೊಡುವ ಒಡಂಬಡಿಕೆಯಾಗಿತ್ತು. ಇಷ್ಟೆಲ್ಲ ಇದ್ದಾಗ್ಯೂ ನೇಪಾಳ ಈಗ ಚೀನಾದ ಕುಮ್ಮಕ್ಕಿನಿಂದ ಭಾರತದ ಜತೆಗಿನ ಸ್ನೇಹ ಕೆಡಿಸಿಕೊಳ್ಳುವ ತಾಪತ್ರಯಕ್ಕೆ ಕೈಹಾಕಿದೆ ಎಂದು ಶುಕ್ಲಾ ವಿವರಿಸಿದ್ದಾರೆ.
ನೇಪಾಳದಿಂದ ವಿವಾದಿತ ನಕಾಶೆ ಮಸೂದೆ ಮಂಡನೆ; ಚೀನಾ ಕುಮ್ಮಕ್ಕಿನಿಂದ ಭಾರತ ವಿರೋಧಿ ನಡೆ