ಆ್ಯಪ್ನಗರ

ಪ್ರಧಾನಿ ಮೋದಿ ವಿರುದ್ಧ ಗರಂ ಆದ ಎಲ್‌ಜೆಪಿ: ಬೆಂಬಲ ಹಿಂಪಡೆಯುವ ಚಿಂತನೆ

ಕೇಂದ್ರ ಸರಕಾರ ದಲಿತರ ವಿರುದ್ಧದ ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಲೋಕ ಜನಶಕ್ತಿ ಪಾರ್ಟಿ, ಪ್ರಧಾನಿ ಮೋದಿ ಸ್ಪಂದಿಸದಿದ್ದರೆ ಬೆಂಬಲ ಹಿಂಪಡೆಯುವ ಕುರಿತು ಚಿಂತನೆ ನಡೆಸಲಿದೆ ಎಂದಿದೆ.

Vijaya Karnataka Web 27 Jul 2018, 8:57 pm
ಹೊಸದಿಲ್ಲಿ: ಕೇಂದ್ರ ಸರಕಾರ ದಲಿತರ ವಿರುದ್ಧದ ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಲೋಕ ಜನಶಕ್ತಿ ಪಾರ್ಟಿ, ಪ್ರಧಾನಿ ಮೋದಿ ಸ್ಪಂದಿಸದಿದ್ದರೆ ಬೆಂಬಲ ಹಿಂಪಡೆಯುವ ಕುರಿತು ಚಿಂತನೆ ನಡೆಸಲಿದೆ ಎಂದಿದೆ.
Vijaya Karnataka Web LJP


2014ರಲ್ಲಿ ಎಲ್‌ಜೆಪಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ದಲಿತರು ಮತ್ತು ಬುಡಕಟ್ಟು ಜನರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಬೇಕು ಹಾಗು ಅವರ ವಿರುದ್ಧದ ಅನ್ಯಾಯ ತಡೆಗೆ ಕಠಿಣ ಕ್ರಮ ಜಾರಿಮಾಡಬೇಕು ಎಂದು ಬೇಡಿಕೆ ವ್ಯಕ್ತಪಡಿಸಿತ್ತು.

ಆದರೆ ದಲಿತರ ಪರ ನಿರೀಕ್ಷಿತ ರೀತಿಯಲ್ಲಿ ಕೇಂದ್ರ ಸರಕಾರ ಕೆಲಸ ಮಾಡುತ್ತಿಲ್ಲ ಎಂದು ಎಲ್‌ಜೆಪಿ ಆರೋಪಿಸಿದೆ. ದಲಿತರ ವಿರುದ್ಧದ ದೌರ್ಜನ್ಯ ತಡೆಗೆ ಸೂಕ್ತ ಕಾಯ್ದೆ ಜಾರಿ ಮತ್ತು ರಾಷ್ಟ್ರೀಯ ಹಸಿರು ಪೀಠದ ಚೇರ್ಮನ್ ಎ. ಕೆ. ಗೋಯಲ್ ಅವರನ್ನು ಆಗಸ್ಟ್‌ 9ರೊಳಗಾಗಿ ಪದಚ್ಯುತಿಗೊಳಿಸಬೇಕು ಎಂದು ಎಲ್‌ಜೆಪಿ ಬೇಡಿಕೆ ವ್ಯಕ್ತಪಡಿಸಿದೆ.

ಬಿಜೆಪಿಗೆ ಬೆಂಬಲ ಹಿಂತೆಗೆತ ಬಗ್ಗೆ ನೇರವಾಗಿ ಎಲ್‌ಜೆಪಿ ಹೇಳಿಕೆ ನೀಡಿಲ್ಲವಾದರೂ, ಪರೋಕ್ಷವಾಗಿ ಮೋದಿಯನ್ನು ಒತ್ತಾಯಿಸಿ ಬೆಂಬಲ ಹಿಂತೆಗೆತ ಕುರಿತು ಪ್ರಸ್ತಾಪಿಸಿದೆ. ಮೋದಿಯವರು ನಮ್ಮ ಬೇಡಿಕೆಯನ್ನು ಈಡೇರಿಸುವ ಕುರಿತು ವಿಶ್ವಾಸವಿದೆ. ಆದರೆ ಅವರು ಅದಕ್ಕೆ ತಪ್ಪಿದಲ್ಲಿ, ಮುಂದಿನ ಹಾದಿಯ ಕುರಿತು ಚಿಂತಿಸುವುದಾಗಿ ಎಲ್‌ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ