ಆ್ಯಪ್ನಗರ

ರೈತರ ಸಾಲ ಮನ್ನಾದಿಂದ ಶೇ.30 ಅಭಿವೃದ್ಧಿ ಕುಂಠಿತ

ಸಾಲ ಪೀಡಿತ ಮಹಾರಾಷ್ಟ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಿಗದಿ ಪಡಿಸಿರುವ ಬಜೆಟ್‌ನಲ್ಲಿ10,000 ಕೋಟಿ ರೂ. ಕಡಿತವಾಗಲಿದೆ.

Mumbai Mirror 27 Jun 2017, 12:33 pm
ಮುಂಬಯಿ: ರೈತರ ಸಾಲ ಮನ್ನಾದಿಂದ ಮಹಾರಾಷ್ಟ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಿಗದಿ ಪಡಿಸಿರುವ ಹಣದಲ್ಲಿ 10,000 ಕೋಟಿ ರೂ. ಕಡಿತವಾಗಲಿದೆ.
Vijaya Karnataka Web loan waiver will cut development by 30
ರೈತರ ಸಾಲ ಮನ್ನಾದಿಂದ ಶೇ.30 ಅಭಿವೃದ್ಧಿ ಕುಂಠಿತ


ರೈತರ ಸಾಲ ಮನ್ನಾ ಘೋಷಿಸಿದ ದಿನದಿಂದಲೇ, ಬೊಕ್ಕಸಕ್ಕೆ ಇದರಿಂದ ಎಷ್ಟು ಹೊರೆ ಬೀಳುವುದೆಂಬ ಲೆಕ್ಕಚಾರ ನಡೆದಿದೆ. 34,000 ಕೋಟಿ ರೂ. ಮೊತ್ತ ಘೋಷಣೆ ಆದರೂ, ಬ್ಯಾಂಕ್‌ ಬಡ್ಡಿ ಹಾಗೂ ಕಂತಿನಲ್ಲಿ ಪಾವತಿಸುವುದರಿಂದ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಮೊತ್ತ 40,000 ಕೋಟಿ ರೂ. ದಾಟುವ ಅಂದಾಜಿದೆ.

ಇದರಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ಶೇ. 30 ರಷ್ಟು ಕಡಿತಗೊಳ್ಳಲಿದೆ ಎಂದು ರಾಜ್ಯ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2017-18 ಸಾಲಿನ ಒಟ್ಟು ಬಜೆಟ್‌ 2.83 ಲಕ್ಷ ಕೋಟಿ ರೂ. ಇದ್ದು, ಇದರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 35 ,504 ಕೋಟಿ ರೂ ನಿಗದಿಯಾಗಿತ್ತು. ಕಳೆದ ಬಜೆಟ್‌ಗೆ ಹೋಲಿಸಿದರೆ ಅಭಿವೃದ್ಧಿ ಕಾರ್ಯಗಳ ಬಜೆಟ್‌ನಲ್ಲಿ ಈ ಬಾರಿ ಶೇ.4.2ರಷ್ಟು ಕಡಿಮೆ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಈ ಬಾರಿ ನಿಗದಿಯಾಗಿರುವ ಹಣದಲ್ಲಿ ಶೇ.30 ರಷ್ಟು ಕಡಿತಗೊಳಿಸಿದರೆ ಉಳಿಯುವುದು ಕೇವಲ 25,000ಕೋಟಿ ರೂ. ಮಾತ್ರ.

89 ಲಕ್ಷ ರೈತರ ಸುಮಾರು 1.5 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಶನಿವಾರ ಆದೇಶ ಹೊರಡಿಸಿದರು. ಜತೆಗೆ, ಈಗಲೇ ಒಟ್ಟು ಹಣ ಪಾವತಿಸಲು ಸಾಧ್ಯವಿಲ್ಲದ ಕಾರಣ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಹಣ ಪಾವತಿಸುವ ಸಂಬಂಧ ಬ್ಯಾಂಕ್‌ಗಳ ಜತೆ ಚರ್ಚೆ ನಡೆಸುವುದಾಗಿಯೂ ಫಡ್ನವಿಸ್‌ ಘೋಷಿಸಿದ್ದರು.

ರಾಜ್ಯ ಈಗಾಲೇ ಸಾಲದ ಸುಳಿಗೆ ಸಿಲುಕಿದ್ದು, 4.13 ಲಕ್ಷ ಕೋಟಿ ಸಾಲಕ್ಕೆ 31,027 ಕೋಟಿ ಬಡ್ಡಿ ಪಾವತಿಸುತ್ತಿದೆ ಮತ್ತೆ ಈಗಿನ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಗೆ 6,000 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

'ಮನ್ನಾ ಮಾಡಿರುವ ಸಾಲದ ಮೊತ್ತವನ್ನು ಕಂತಿನಲ್ಲಿ ಪಾವತಿಸಲು ಬ್ಯಾಂಕ್‌ಗಳು ಒಪ್ಪಿದರೆ, ಅಭಿವೃದ್ಧಿ ಕಾರ್ಯಗಳಿಗೆ ಭಾರಿ ಹೊಡೆತ ಬೀಳುವುದಿಲ್ಲ. ಸಾಲ ಮನ್ನಾಕ್ಕೆ ಸರಕಾರ ಬದ್ಧವಾಗಿರುವುದರಿಂದ ಎಂಥ ಪರಿಸ್ಥಿತಿ ಎದುರಿಸಲೂ ಸರಕಾರ ಸಿದ್ಧ,' ಎಂದು ವಿತ್ತ ಸಚಿವ ಸುಧೀರ್‌ ಮುಂಗಂತಿವಾರ್‌ ಹೇಳಿದ್ದಾರೆ.

7ನೇ ವೇತನ ಆಯೋಗದ ಪ್ರಕಾರ 19 ಲಕ್ಷ ಉದ್ಯೋಗಿಗಳಿಗೆ ವೇತನ ಪಾವತಿಸಲು ಸರಕಾರ ಒಪ್ಪಿದರೆ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿರುವ ಹಣ ಮತ್ತಷ್ಟು ಕಡಿತಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಹೆಚ್ಚುವರಿ 18,000 ಕೋಟಿ ರೂ. ವ್ಯಯಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ