ಆ್ಯಪ್ನಗರ

ನೀರು ಕಳ್ಳತನ: ಇಲ್ಲಿ ಡ್ರಮ್‌ಗಳಿಗೂ ಬೀಗ ಹಾಕಿಡುತ್ತಾರೆ ನೋಡಿ

ಹಣ, ಚಿನ್ನ, ಬೆಲೆಬಾಳುವ ವಸ್ತುಗಳ ದರೋಡೆ ಮಾಡುವುದು ಸಾಮಾನ್ಯ. ನೀರಿನ ದರೋಡೆ ಕೂಡ ಆರಂಭವಾಗಿದೆ ಎಂದರೆ ನಂಬುತ್ತೀರಾ? ಹೌದು ಇದು ಸತ್ಯ. ಸದಾ ನೀರಿನ ಬವಣೆಯಿಂದ ಬಳಲುವ ಮರಳುಭೂಮಿ ನಾಡು ರಾಜಸ್ಥಾನದಲ್ಲಿ ನೀರಿನ ದರೋಡೆ ನಡೆಯುತ್ತಿದೆ. ಇದನ್ನು ತಪ್ಪಿಸಲು ಜನರು ನೀರು ತುಂಬಿರುವ ಡ್ರಮ್‌ಗಳಿಗೆ ಬೀಗ ಹಾಕಿಡುತ್ತಿದ್ದಾರೆ.

TIMESOFINDIA.COM 1 Jun 2018, 12:14 pm
ಭಿಲ್ವಾರಾ: ಹಣ, ಚಿನ್ನ, ಬೆಲೆಬಾಳುವ ವಸ್ತುಗಳ ದರೋಡೆ ಮಾಡುವುದು ಸಾಮಾನ್ಯ. ನೀರಿನ ದರೋಡೆ ಕೂಡ ಆರಂಭವಾಗಿದೆ ಎಂದರೆ ನಂಬುತ್ತೀರಾ? ಹೌದು ಇದು ಸತ್ಯ. ಸದಾ ನೀರಿನ ಬವಣೆಯಿಂದ ಬಳಲುವ ಮರಳುಭೂಮಿ ನಾಡು ರಾಜಸ್ಥಾನದಲ್ಲಿ ನೀರಿನ ದರೋಡೆ ನಡೆಯುತ್ತಿದೆ. ಇದನ್ನು ತಪ್ಪಿಸಲು ಜನರು ನೀರು ತುಂಬಿರುವ ಡ್ರಮ್‌ಗಳಿಗೆ ಬೀಗ ಹಾಕಿಡುತ್ತಿದ್ದಾರೆ.
Vijaya Karnataka Web Water Drum


ರಾಜ್ಯದ ಬಹುತೇಕ ಭಾಗಗಳಲ್ಲಿ ಉಷ್ಣತೆ 45 ಡಿಗ್ರಿಗೆ ಏರುತ್ತಿದ್ದು, ನೀರಿನ ಸೀಮಿತ ಲಭ್ಯತೆಯಿಂದ ಕಂಗೆಟ್ಟಿರುವ ಸ್ಥಳೀಯರಿಗೆ ತಾವು ಶೇಖರಿಸಿಟ್ಟಿರುವ ನೀರನ್ನು ಕಾದುಕೊಳ್ಳುವುದೇ ದೊಡ್ಡ ತಲೆನೋವಾಗಿ ಹೋಗಿದೆ.

ಪರಸ್ರಾಂಪುರ ಎಂಬ ಗ್ರಾಮದ ಜನರಿಗೆ ಕುಡಿಯುವ ನೀರು ದೊರೆಯುವುದು ವಾರಕ್ಕೊಮ್ಮೆ ಮಾತ್ರ. ಹೀಗಾಗಿ ಅಲ್ಲಿ ನೀರು ಕದಿಯುವುದು ಸಾಮಾನ್ಯವಾಗಿ ಹೋಗಿದೆ. ಆ ಊರಲ್ಲಿ ನೀರಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ ಬಂದಂತಾಗಿದ್ದು, ಹೀಗಾಗಿ ಜನರು ತಮ್ಮ ಮನೆ ಮುಂದೆ ಇಟ್ಟಿರುವ ನೀರಿನ ಡ್ರಮ್‌ಗಳಿಗೆ ಬೀಗ ಹಾಕಿಡುವ ಪರಿಸ್ಥಿತಿ ತಲೆದೋರಿದೆ. ಸ್ವತಃ ಪಂಚಾಯತ್ ಅಧಿಕಾರಿಗಳು ಸಹ ನೀರಿಗೆ ಬೀಗ ಹಾಕಿಡುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

"ನೀರಿನ ತೀವ್ರ ಕೊರತೆಯಿಂದಾಗಿ, ರಾತ್ರಿ ಸಮಯದಲ್ಲಿ ನೀರನ್ನು ಕದಿಯಲಾಗುತ್ತದೆ. ಆದ್ದರಿಂದ, ನೀರನ್ನು ಉಳಿಸಿಕೊಳ್ಳಲು ಡ್ರಮ್‌ಗಳಿಗೆ ಬೀಗ ಹಾಕಲು ನಾವು ನಿರ್ಧರಿಸಿದ್ದೇವೆ ", ಎಂದು ಹೇಳುತ್ತಾರೆ ಸ್ಥಳೀಯರು.

ನೀರು ದರೋಡೆಯಾಗುವ ಕಾಲ ಬರುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ಈ ಸನ್ನಿವೇಶವನ್ನು ನೋಡಿದರೆ ನೀರು ಚಿನ್ನ, ಬೆಳ್ಳಿಗಿಂತ ಹೆಚ್ಚಿನ ಬೆಲೆಯನ್ನು ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ
- ಸ್ಥಳೀಯ ನಿವಾಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ