ಆ್ಯಪ್ನಗರ

ವಿಮಾನಯಾನಕ್ಕೂ ಮಿಡತೆ ಕಾಟ: ಲ್ಯಾಂಡಿಂಗ್‌, ಟೇಕಾಫ್‌ ವೇಳೆ ಅಪಾಯ!

ಉತ್ತರ ಭಾರತದಲ್ಲಿ ಹೆಚ್ಚಿದ ಮಿಡತೆ ಹಾವಳಿಯಿಂದ ವಿಮಾನಗಳ ಹಾರಾಟಕ್ಕೂ ಕಂಟಕ ಎದುರಾಗಿದ್ದು, ಈ ನಿಟ್ಟಿನಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.

Vijaya Karnataka Web 29 May 2020, 9:04 pm
ಹೊಸದಿಲ್ಲಿ: ಉತ್ತರ ಭಾರತದಲ್ಲಿ ಹೆಚ್ಚಿದ ಮಿಡತೆ ಹಾವಳಿಯಿಂದ ವಿಮಾನಗಳ ಹಾರಾಟಕ್ಕೂ ಕಂಟಕ ಎದುರಾಗಿದ್ದು, ಈ ನಿಟ್ಟಿನಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.
Vijaya Karnataka Web Locusts


ಸಾಮಾನ್ಯವಾಗಿ ಮಿಡತೆಗಳು ಕೆಳಮಟ್ಟದಲ್ಲಿ ಕಂಡುಬರುತ್ತವೆ. ಹೀಗಾಗಿ ವಿಮಾನಗಳ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ವೇಳೆ ವಿಮಾನಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸುವಂತೆ ಡಿಜಿಸಿಎ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.

''ಮಿಡತೆಗಳ ಸೈನ್ಯ ಕೆಳಮಟ್ಟದಲ್ಲಿ ಹಾರುತ್ತಿದ್ದರೆ ವಿಮಾನ ಟೇಕಾಫ್‌ ಇಲ್ಲವೇ ಲ್ಯಾಂಡಿಂಗ್‌ ವೇಳೆ ಅದರ ಎಂಜಿನ್‌ ಇನ್ಲೆಟ್‌, ಎಸಿ ಪ್ಯಾಕ್‌ ಇನ್ಲೆಟ್‌, ಸೆನ್ಸಾರ್‌ ಉಪಕರಣಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದ ಗಾಳಿಯ ವೇಗ ಹಾಗೂ ಅಲ್ಟಿಮೀಟರ್‌ ಇಂಡಿಕೇಷನ್‌ಗಳನ್ನು ಅರಿಯಲು ಪೈಲಟ್‌ಗೆ ಕಷ್ಟವಾಗುತ್ತದೆ.

ಎರಡನೇ ಬಾರಿ ದ್ವಿಶತಕ ದಾಟಿದ ಕೊರೊನಾ: ಸೋಂಕು ಶತಕ ದಾಟಿದ ಜಿಲ್ಲೆಗಳಿವು!

ಇದರ ಜತೆ ವಿಂಡ್‌ಶೀಲ್ಡ್‌ ಮೇಲೆ ದಂಡಿಯಾಗಿ ಮಿಡತೆಗಳು ಕಾಣಿಸಿಕೊಂಡರೆ ಪೈಲಟ್‌ನ ದೃಷ್ಟಿಗೋಚರತೆಗೂ ಅಡ್ಡಿಯಾಗುತ್ತದೆ. ಒಂದೊಮ್ಮೆ ವಿಂಡ್‌ಶೀಲ್ಡ್‌ ಮೇಲೆ ಕುಳಿತುಕೊಳ್ಳುವ ಮಿಡತೆಗಳನ್ನು ಹೊಡೆದೊಡಿಸಲು ವೈಪರ್‌ಗಳನ್ನು ಬಳಸಿದರೂ ಮಿಡತೆಗಳು ಅಲ್ಲೆ ಗಿರಕಿ ಹೊಡೆಯುವ ಮೂಲಕ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ವೇಳೆ ಸಮಸ್ಯೆ ತೊಂದೊಡ್ಡುತ್ತವೆ.

ಮಿಡತೆ ತಡೆಗೆ ಕೃಷಿ ವಿಜ್ಞಾನಿಗಳ ಜಂಟಿ ತಂಡ ರಚನೆ..!

ಮಿಡತೆಗಳು ರಾತ್ರಿ ಹೊತ್ತು ಹಾರಾಟ ನಡೆಸದ ಕಾರಣ ಲ್ಯಾಂಡಿಂಗ್‌ ಮತ್ತು ಟೇಕಾಫ್‌ಗೆ ರಾತ್ರಿ ಸಮಯ ಆಯ್ದುಕೊಳ್ಳುವುದು ಸೂಕ್ತ,'' ಎಂದು ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ