ಆ್ಯಪ್ನಗರ

ಲೋಕಪಾಲ ಸಂಸ್ಥೆಗೆ ಇನ್ನೂ ಸಿಗದ ಶಾಶ್ವತ ಕಚೇರಿ

ಭ್ರಷ್ಟಾಚಾರ ವಿರೋಧಿ ಹೋರಾಟದ ಫಲವಾಗಿ ಜನ್ಮ ತಳೆದ ಲೋಕಪಾಲ ಸಂಸ್ಥೆಯ ಶಾಶ್ವತ ಕಚೇರಿಗೆ ಸ್ಥಳಾವಕಾಶ ಸಿಗದ ಕಾರಣ 'ದಿ ಅಶೋಕ' ಹೋಟೆಲ್‌ನಲ್ಲಿ ಕಚೇರಿ ಒದಗಿಸಲಾಗಿದೆ.

Vijaya Karnataka 3 May 2019, 5:00 am
ಹೊಸದಿಲ್ಲಿ: ಪಂಚತಾರಾ ಹೋಟೆಲ್‌ನಲ್ಲಿ ಇರುವ ಲೋಕಪಾಲರ ಕಚೇರಿಯನ್ನು ಸದ್ಯವೇ ಸ್ಥಳಾಂತರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.
Vijaya Karnataka Web ashoka


ಭ್ರಷ್ಟಾಚಾರ ವಿರೋಧಿ ಹೋರಾಟದ ಫಲವಾಗಿ ಜನ್ಮ ತಳೆದ ಲೋಕಪಾಲ ಸಂಸ್ಥೆಯ ಶಾಶ್ವತ ಕಚೇರಿಗೆ ಸ್ಥಳಾವಕಾಶ ಸಿಗದ ಕಾರಣ 'ದಿ ಅಶೋಕ' ಹೋಟೆಲ್‌ನಲ್ಲಿ ಕಚೇರಿ ಒದಗಿಸಲಾಗಿದೆ. ದೇಶದ ಮೊದಲ ಲೋಕಪಾಲ ನಿವೃತ್ತ ನ್ಯಾ. ಪಿನಾಕಿ ಚಂದ್ರ ಘೋಷ್‌ ಅವರು ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ''ಸದ್ಯ ಹೋಟೆಲ್‌ನಲ್ಲಿಯೇ ಸಂಸ್ಥೆ ತನ್ನ ಕಾರ್ಯ ಆರಂಭಿಸಿದ್ದರೂ ಬಾಡಿಗೆ ಪಾವತಿಸಿಲ್ಲ. ಶಾಶ್ವತ ಕಚೇರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರವೇ ಸ್ಥಳಾಂತರಿಸಲಾಗುವುದು,'' ಎಂದು ಪತ್ರಕರ್ತರೊಬ್ಬರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಸರಕಾರ ಉತ್ತರಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಘೋಷ್‌ ಅವರು ಮಾರ್ಚ್‌ 23ರಂದು ಲೋಕಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಲೋಕಪಾಲ ಸಂಸ್ಥೆಗೆ ಕಳೆದ ಸೋಮವಾರ ಹಿರಿಯ ಐಎಎಸ್‌ ಅಧಿಕಾರಿ ದಿಲೀಪ್‌ ಕುಮಾರ್‌ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ