ಆ್ಯಪ್ನಗರ

ಪಂಚತಾರಾ ಹೋಟೆಲ್‌ನಲ್ಲಿ ಲೋಕಪಾಲರ ಕಾರಾರ‍ಯಲಯ!

ದಿಲ್ಲಿಯ ಚಾಣಕ್ಯಪುರಿಯಲ್ಲಿರುವ ವೈಭವೋಪೇತ ಪಂಚ ತಾರಾ ಹೋಟೆಲ್‌ 'ಅಶೋಕ'ದಲ್ಲಿ ಲೋಕಪಾಲರ ಕಚೇರಿಯನ್ನು ಸಜ್ಜುಗೊಳಿಸಲಾಗಿದೆ.

Vijaya Karnataka 23 Apr 2019, 5:00 am
ಹೊಸದಿಲ್ಲಿ: ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಅಸ್ತ್ರವಾಗಿ ರೂಪುಗೊಂಡಿರುವ ದೇಶದ ಮೊದಲ ಲೋಕಪಾಲ ಸಂಸ್ಥೆಯ ಅಧಿಕೃತ ಕಾರ್ಯಾಚರಣೆ ಆರಂಭಕ್ಕೆ ಮುಹೂರ್ತ ಹತ್ತಿರವಾಗುತ್ತಿದೆ.
Vijaya Karnataka Web lokpal to work from delhis 5 star luxury hotel
ಪಂಚತಾರಾ ಹೋಟೆಲ್‌ನಲ್ಲಿ ಲೋಕಪಾಲರ ಕಾರಾರ‍ಯಲಯ!


ದಿಲ್ಲಿಯ ಚಾಣಕ್ಯಪುರಿಯಲ್ಲಿರುವ ವೈಭವೋಪೇತ ಪಂಚ ತಾರಾ ಹೋಟೆಲ್‌ 'ಅಶೋಕ'ದಲ್ಲಿ ಲೋಕಪಾಲರ ಕಚೇರಿಯನ್ನು ಸಜ್ಜುಗೊಳಿಸಲಾಗಿದೆ. ಲೋಕಪಾಲ ವ್ಯವಸ್ಥೆಯ ಅಧ್ಯಕ್ಷ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌ ಮತ್ತು ಸಮಿತಿಯ ಎಂಟು ಸದಸ್ಯರು ಹಾಗೂ ಇತರ ಸಿಬ್ಬಂದಿಗಳಿಗೆ ಸ್ಥಳ ಕಾದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ತಾತ್ಕಾಲಿಕ ಕಚೇರಿಯಾಗಿದ್ದು, ಮುಂದೆ ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.



ಸದಸ್ಯರು ಯಾರಾರ‍ಯರು?


- ದೇಶದ ನಾನಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ದಿಲೀಪ್‌ ಬಿ. ಭೋಸಲೆ, ಪ್ರದೀಪ್‌ ಕುಮಾರ್‌ ಮೊಹಾಂತಿ, ಅಭಿಲಾಷಾ ಕುಮಾರಿ, ಅಜಯ್‌ ಕುಮಾರ್‌ ತ್ರಿಪಾಠಿ.

- ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ನಿವೃತ್ತ ಮುಖ್ಯ ಕಾರ‍್ಯದರ್ಶಿ ದಿನೇಶ್‌ ಕುಮಾರ್‌ ಜೈನ್‌, ನಿವೃತ್ತ ಐಆರ್‌ಎಸ್‌ ಅಧಿಕಾರಿ ಮಹೇಂದ್ರ ಸಿಂಗ್‌, ಗುಜರಾತ್‌ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿ ಇಂದ್ರಜಿತ್‌ ಪ್ರಸಾದ್‌ ಗೌತಮ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ