ಹೊಸದಿಲ್ಲಿ: ಕರ್ನಾಟಕದ ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸುಗಮ ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಬಂದಿರುವ ಎಐಎಡಿಎಂಕೆ 24 ಸಂಸದರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಗುರುವಾರ ಲೋಕಸಭೆಯಲ್ಲಿ ಪುಂಡಾಟ ನಡೆಸಿದ ಮತ್ತೆ 21 ಸಂಸದರನ್ನು ನಾಲ್ಕು ದಿನಗಳ ಕಲಾಪಕ್ಕೆ ಅಮಾನತುಗೊಳಿಸಲಾಗಿದೆ. ಮೇಕೆದಾಟು ಹಾಗೂ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಪುನರಾವರ್ತಿಸಿ ಎಐಎಡಿಎಂಕೆ ಹಾಗೂ ಟಿಡಿಪಿ ಸದಸ್ಯರು ಪುನಃ ಗದ್ದಲ ನಡೆಸಿದ ಪರಿಣಾಮ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆಯಾಗಿದೆ. ಇತ್ತ ರಾಜ್ಯಸಭೆಯಲ್ಲಿ ಎಐಎಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿ ಪ್ರತಿಭಟಿಸಿದರು. ಸುಗಮ ಕಲಾಪಕ್ಕೆ ಅಡ್ಡಿಪಡಿಸಿ ಪುಂಡಾಟ ನಡೆಸುತ್ತಲೇ ಬಂದಿದ್ದ ಎಐಎಡಿಎಂಕೆಯ 24 ಸದಸ್ಯರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಬುಧವಾರವಷ್ಟೇ ಐದು ದಿನಗಳ ಮಟ್ಟಿಗೆ ಲೋಕಸಭೆಯಿಂದ ಅಮಾನತುಗೊಳಿಸಿದ್ದರು. ಆದರೆ ಈ ಶಿಸ್ತು ಕ್ರಮದಿಂದ ಎಚ್ಚೆತ್ತುಕೊಳ್ಳದೇ ಮತ್ತದೇ ದಾಂಧಲೆ ಮುಂದುವರಿಸಿದ 21 ಸದಸ್ಯರಿಗೆ 4 ದಿನಗಳ ಮಟ್ಟಿಗೆ ಸದನದ ನಿಯಮ 374(ಎ) ಅಡಿಯಲ್ಲಿ ಅಮಾನತು ಶಿಕ್ಷೆ ವಿಧಿಸಿದರು. ಹೀಗೆ ಅಮಾನತುಗೊಂಡವರಲ್ಲಿ ಎಐಎಡಿಎಂಕೆಯ ಏಳು ಹಾಗೂ ಟಿಡಿಪಿಯ 13 ಹಾಗೂ ವೈಎಸ್ಸಾರ್ ಕಾಂಗ್ರೆಸ್ನ ಒಬ್ಬ ಸದಸ್ಯರು ಸೇರಿದ್ದಾರೆ.
ಮತ್ತೆ 21 ಸಂಸದರ ಅಮಾನತು
ಮೇಕೆದಾಟು ಹಾಗೂ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಪುನರಾವರ್ತಿಸಿ ಎಐಎಡಿಎಂಕೆ ಹಾಗೂ ಟಿಡಿಪಿ ಸದಸ್ಯರು ಪುನಃ ಗದ್ದಲ ನಡೆಸಿದ ಪರಿಣಾಮ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆಯಾಗಿದೆ.
Vijaya Karnataka 4 Jan 2019, 5:00 am