ಆ್ಯಪ್ನಗರ

ಭಕ್ತರ ಜಗಳಕ್ಕೆ ಪೊಲೀಸ್ ಕಸ್ಟಡಿ ಸೇರಿದ ಹನುಮಂತ

ದೇವರನ್ನು ಬಂಧಿಸಿಡಲು ಸಾಧ್ಯವೇ? ಆದರೆ ಬಿಹಾರದಲ್ಲಿ ಇದು ನಿಜವಾಗಿದೆ. ಬಲಶಾಲಿ ದೇವರೆಂದು ಕರೆಸಿಕೊಳ್ಳುವ ಹನುಮಂತ ಇಲ್ಲಿ ಪೊಲೀಸರ ವಶವಾಗಿದ್ದಾನೆ.

TIMESOFINDIA.COM 12 Oct 2019, 1:54 pm
ಪಟನಾ: ಹನುಮಂತ ದೇವರು ಪೊಲೀಸ್ ಕಸ್ಟಡಿಯಲ್ಲಿ! ಇದೇನಿದು? ದೇವರನ್ನು ಬಂಧಿಸಲು ಸಾಧ್ಯವೇ ಎಂದು ಕೇಳುತ್ತೀರ? ಭಕ್ತರ ಜಗಳದಿಂದಾಗಿ ದೇವರು ಪೊಲೀಸರ ವಶವಾಗುವಂತಾಗಿದೆ.
Vijaya Karnataka Web Hanuman


ಈ ಘಟನೆ ನಡೆದಿರುವುದು ಬಿಹಾರದಲ ವೈಶಾಲಿ ಜಿಲ್ಲೆಯಲ್ಲಿ.

ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಣಾಪುರ ಗೌರಹಿ ಗ್ರಾಮದಲ್ಲಿರುವ ರಾಮ್ ಜಂಕಿ ಮಠಕ್ಕೆ ಸೇರಿದ "ವಿವಾದಿತ ಭೂಮಿಯಲ್ಲಿ" ಪರಿಶಿಷ್ಟ ಜಾತಿಗೆ ಸೇರಿದ ಭಕ್ತರ ಗುಂಪೊಂದು ಹನುಮಂತ ವಿಗ್ರಹವನ್ನು ಪ್ರತಿಷ್ಠಾಪಿಸಿತ್ತು. ಆದರೆ ಗುರುವಾರ, "ವಿವಾದಿತ ಸ್ಥಳದಲ್ಲಿ" ವಿಗ್ರಹವನ್ನು ಸ್ಥಾಪಿಸಿದ್ದಕ್ಕೆ ಮೇಲ್ಜಾತಿಯ ಭಕ್ತರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿತು. ಹೀಗಾಗಿ ವಿಗ್ರಹವನ್ನು ತೆಗೆದು ಸದರ್ ಪೊಲೀಸರು ವಶಕ್ಕೆ ತೆಗೆದುಕೊಂಡರು.

"ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸಾರ್ವಜನಿಕ ಭೂಮಿಯಲ್ಲಿ ಯಾವುದೇ ಪ್ರತಿಮೆ ಸ್ಥಾಪನೆ ಅಥವಾ ದೇವಾಲಯ ನಿರ್ಮಾಣಕ್ಕೆ ನಿಷೇಧವಿದೆ. ಹೀಗಾಗಿ ವಿಗ್ರಹವನ್ನು ವಶಕ್ಕೆ ಪಡೆಯಲಾಗಿದೆ. ಈ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ವಿಗ್ರಹ ಸದರ್ ಪೊಲೀಸ್ ಠಾಣೆಯ ವಶದಲ್ಲಿರುತ್ತದೆ , "ಎಂದು ಹಾಜಿಪುರ ಎಸ್‌ಡಿಪಿಒ ರಾಘವ್ ದಯಾಳ್ ಹೇಳಿದ್ದಾರೆ.

ಬಲಶಾಲಿ ಎಂದು ಕರೆಸಿಕೊಳ್ಳುವ ಹನುಮಂತ, ಭಕ್ತರ ಜಗಳದಿಂದ ಪೊಲೀಸ್ ವಶವಾಗಿರುವುದು ವಿಪರ್ಯಾಸವೇ ಸರಿ ಎನ್ನುತ್ತಿದ್ದಾರೆ ಸ್ಥಳೀಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ