ಆ್ಯಪ್ನಗರ

ದಲಿತನೂ ಅಲ್ಲ, ಬುಡಕಟ್ಟಿನವನೂ ಅಲ್ಲ, ಆರ್ಯ: ಹನುಮನ ಜಾತಿ ಸುತ್ತ ರಾಜಕಾರಣಿಗಳ ಚಿತ್ತ

ಹನುಮಾನ್ ಆರ್ಯ ಜಾತಿಯ ಮಹಾಪುರುಷ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದ್ದಾರೆ.

Navbharat Times 1 Dec 2018, 12:32 pm
ಬಾಗ್ಪತ್: ಹನುಮಂತನ ಜಾತಿ ಯಾವುದೆಂದು ಹೇಳಲು ರಾಜಕಾರಣಿಗಳಲ್ಲಿ ರೇಸ್ ಶುರುವಾಗಿದೆ. ಯೋಗಿ ಆದಿತ್ಯನಾಥ್ ದಲಿತ ಎಂದಿದ್ದಾಯ್ತು, NCST ಅಧ್ಯಕ್ಷ ನಂದ ಕುಮಾರ್ ಹನುಮಂತ ಬುಡಕಟ್ಟಿನವ ಎಂದಿದ್ದಾಯ್ತು ಮತ್ತೀಗ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಹನುಮಂತನ ಆರ್ಯ ಎಂದು ಹೇಳಿದ್ದಾರೆ.
Vijaya Karnataka Web Hanuman


ಹನುಮಂತನಿದ್ದ ಯುಗದಲ್ಲಿ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ. ದಲಿತ, ವಂಚಿತ, ಶೋಷಿತ ಎಂದು ಯಾರೂ ಇರಲಿಲ್ಲ. ವಾಲ್ಮೀಕಿ ರಾಮಾಯಣ ಅಥವಾ ರಾಮಚರಿತ ಮಾನಸ ಓದಿದರೆ ನಿಮಗಿದು ಸ್ಪಷ್ಟವಾಗುತ್ತದೆ. ಆ ಸಂದರ್ಭದಲ್ಲಿ ಆರ್ಯರಿದ್ದರು ಮತ್ತು ಹನುಮಾನ್ ಆರ್ಯ ಜಾತಿಯ ಮಹಾಪುರುಷ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದ್ದಾರೆ.

ಇದೆಲ್ಲ ಆರಂಭವಾಗಿದ್ದು ಕಳೆದ ವಾರ ಯುಪಿ ಸಿಎಂ ಅವರು ನೀಡಿದ ಹೇಳಿಕೆಯಿಂದ. ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಹನುಮಂತ ಒಬ್ಬ ಅರಣ್ಯವಾಸಿ. ಎಲ್ಲ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ' ಎಂದಿದ್ದರು.

ಇದರ ಬೆನ್ನಲ್ಲೇ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ (NCST) ಅಧ್ಯಕ್ಷ ನಂದಕುಮಾರ್ ಸಾಯಿ ಒಂದು ಹೆಜ್ಜೆ ಮೇಲೆ ಹೋಗಿ ಹನುಮಾನ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು, ಅದಕ್ಕೆ ಪೂರಕವಾದ ಸಾಕ್ಷಿಗಳಿವೆ ಎಂದಿದ್ದರು.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬುಡಕಟ್ಟು ಸಮಾಜದಲ್ಲಿ ಹನುಮಾನ ಎಂದು ಗೋತ್ರವಿದ್ದು, ಈ ಜಾತಿಯ ಜನರು ಶ್ರೀರಾಮ, ವಾನರ ಸೈನ್ಯ ಕಟ್ಟಿದ ದಂಡಕಾರಣ್ಯದಲ್ಲಿ ಕಂಡುಬರುತ್ತಾರೆ. ಇದೇ ಹನುಮಂತ ನಮ್ಮ ಸಮುದಾಯಕ್ಕೆ ಸೇರಿದವರು ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ