ಆ್ಯಪ್ನಗರ

ಚಂದ ಕಾಣಬಾರದೆಂದು ಪ್ರೇಯಸಿಯ 2 ಹಲ್ಲು ಕೀಳಿಸಿದ, ಮತ್ತೇನೇನು ಮಾಡಿದ ಗೊತ್ತೇ?

ಯತಮೆ ಬೇರೆಯವರ ಕಣ್ಣಿಗೆ ಸುಂದರವಾಗಿ ಕಾಣಬಾರದೆಂದು ಪ್ರೇಮಿಯೊಬ್ಬ ಆಕೆಯ ಹಲ್ಲು ಕೀಳಿಸಿದ ವಿಲಕ್ಷಣ ಘಟನೆ ಗುಜರಾತಿನಲ್ಲಿ ಬೆಳಕಿಗೆ ಬಂದಿದೆ. ಅನುಮಾನದ ಭೂತವನ್ನು ಹೊಕ್ಕಿಸಿಕೊಂಡು ಆತ ವರ್ತಿಸಿದ ರೀತಿ ನಮಗೆ ಹಾಸ್ಯಮಯ ಎನಿಸಬಹುದು. ಆದರೆ ಮಹಿಳೆಯ ಬದುಕನ್ನು ಅಕ್ಷರಶಃ ನರಕವಾಗಿಸಿತ್ತು. ಸದ್ಯ ಸುಖಾಂತ್ಯ ಕಂಡಿರುವ ಈ ಕಥೆ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸದಿರದು.

TIMESOFINDIA.COM 4 Aug 2018, 1:57 pm
ಅಹಮದಾಬಾದ್: ಪ್ರಿಯತಮೆ ಬೇರೆಯವರ ಕಣ್ಣಿಗೆ ಸುಂದರವಾಗಿ ಕಾಣಬಾರದೆಂದು ಪ್ರೇಮಿಯೊಬ್ಬ ಆಕೆಯ ಹಲ್ಲು ಕೀಳಿಸಿದ ವಿಲಕ್ಷಣ ಘಟನೆ ಗುಜರಾತಿನಲ್ಲಿ ಬೆಳಕಿಗೆ ಬಂದಿದೆ. ಅನುಮಾನದ ಭೂತವನ್ನು ಹೊಕ್ಕಿಸಿಕೊಂಡು ಆತ ವರ್ತಿಸಿದ ರೀತಿ ನಮಗೆ ಹಾಸ್ಯಮಯ ಎನಿಸಬಹುದು. ಆದರೆ ಮಹಿಳೆಯ ಬದುಕನ್ನು ಅಕ್ಷರಶಃ ನರಕವಾಗಿಸಿತ್ತು. ಸದ್ಯ ಸುಖಾಂತ್ಯ ಕಂಡಿರುವ ಈ ಕಥೆ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸದಿರದು.
Vijaya Karnataka Web Auto


ಅಹಮದಾಬಾದ್ ನಿವಾಸಿಯಾಗಿರುವ ಮಹಿಳೆಯೊಬ್ಬಳು ಪ್ರಿಯಕರ ನೀಡಿದ ಚಿತ್ರಹಿಂಸೆಯನ್ನು ಆಪ್ತ ಸಮಾಲೋಚಕರ ಮುಂದೆ ತೆರೆದಿಟ್ಟಿದ್ದಾಳೆ.

ಗೀತಾಬೆನ್ (55) ಕಳೆದ 15 ವರ್ಷದ ಹಿಂದೆ ಆಟೋ ಚಾಲಕನೊಬ್ಬನ ಪ್ರೀತಿಯಲ್ಲಿ ಬಿದ್ದು ಪತಿ ಮಕ್ಕಳನ್ನು ತೊರೆದು ಆತನ ಹಿಂದೆ ಓಡಿ ಬಂದಿದ್ದಳು. ಆಕೆಯ ಪ್ರಿಯಕರ (57) ಸಹ ಪತ್ನಿ ಮತ್ತು ಮಕ್ಕಳನ್ನು ತೊರೆದು ಬಂದಿದ್ದ. 14 ವರ್ಷ ಎಲ್ಲವೂ ಚೆನ್ನಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಆಕೆಯ ಮೇಲೆ ವಿಪರೀತ ಅನುಮಾನ, ಪೊಸೆಸಿವ್‌ನೆಸ್ ಬೆಳೆಸಿಕೊಂಡ ಆತ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾನೆ. ಆಕೆ ಇನ್ಯಾವ ಪುರುಷನನ್ನು ಆಕರ್ಷಿಸುವಂತಹ ಸೌಂದರ್ಯವತಿಯಾಗಿರಬಾರದೆಂದು ಮುಂದಿನೆರಡು ಹಲ್ಲು ಕೀಳಿಸಿ ಕುರೂಪಿಯಾಗಿಸಿದ್ದಾನೆ. ಮನೆಗೆಲಸಕ್ಕೆ ಹೋಗುತ್ತಿದ್ದ ಆಕೆಯನ್ನು ಕೆಲಸಕ್ಕೆ ಹೋಗದಂತೆ ತಡೆದಿದ್ದಾನೆ. ಆತನ ಹಿಂಸೆ ಎಲ್ಲೆ ಮೀರಿ ಹೋದಾಗ ಮಹಿಳೆ ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾಳೆ.

ಬುಧವಾರ ದಿನ ಎಂದಿನಂತೆ ಆತನ ಜತೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ದುಧೇಶ್ವರ್ ಪ್ರದೇಶದಲ್ಲಿ ಕೆಳಕ್ಕೆ ಜಿಗಿದಿದ್ದಾಳೆ. ಅಲ್ಲೇ ಹತ್ತಿರದಲ್ಲಿ ಹೋಗುತ್ತಿದ್ದ ದಾರಿಹೋಕರೊಬ್ಬರು ಸಹಾಯವಾಣಿ 181 (ಅಭಯಂ) ಗೆ ಕರೆ ಮಾಡಿದ್ದಾರೆ. ಅಲ್ಲಿನ ಆಪ್ತ ಸಮಾಲೋಚಕರ ಬಳಿ ಗೀತಾಬೆನ್ ತನ್ನ ಸಂಗಾತಿಯ ಹಿಂಸೆಯಿಂದ ತಾನೆಷ್ಟು ನರಳಾಡುತ್ತಿದ್ದೇನೆ, ಸೆರೆವಾಸವನ್ನು ಅನುಭವಿಸುತ್ತಿದ್ದೇನೆ ಎಂದು ಬಾಯ್ಬಿಟ್ಟಿದ್ದಾಳೆ.

''ಮೊದಲು ನನ್ನನ್ನು ಕೆಲಸಕ್ಕೆ ಹೋಗದಂತೆ ತಡೆದ, ಬಳಿಕ ಚಂದ ಕಾಣದಿರಲೆಂದು ಹಲ್ಲನ್ನು ಕೀಳಿಸಿದ. ಅಷ್ಟೇ ಅಲ್ಲ ಮನೆಯೊಳಗಿದ್ದರೂ ನನ್ನನ್ನು ಯಾರೂ ನೋಡದಿರಲೆಂದು ಕಿಟಕಿ, ಬಾಗಿಲಿಗೆ ಪ್ಲಾಸ್ಟಿಕ್ ಶೀಟ್ ಅಂಟಿಸಿದ. ಕೊನೆಗೆ ಮನೆಯಲ್ಲಿರಲೂ ಸಹ ಬಿಡಲಿಲ್ಲ. ಆಟೋದಲ್ಲಿ ನನ್ನನ್ನು ಅವನ ಪಕ್ಕ ಕುಳ್ಳಿರಿಸಿಕೊಂಡು ಇಡೀ ದಿನ ಆಟೋ ಓಡಿಸುತ್ತಿದ್ದ. ಒಟ್ಟಿನಲ್ಲಿ ನಾನು ಖೈದಿಯಂತೆ ಬದುಕುತ್ತಿದ್ದೆ'', ಎಂದಾಕೆ ಅಳಲು ತೋಡಿಕೊಂಡಿದ್ದಾಳೆ.

ಮಹಿಳೆಯ ದಾರುಣ ಕಥೆ ಕೇಳಿದ ಆಪ್ತ ಸಮಾಲೋಚಕರು ಆಟೋ ಚಾಲಕನನ್ನು ಕರೆದು ಆಪ್ತ ಸಮಾಲೋಚನೆ ಮಾಡಿದ್ದಾರೆ. ಅನುಮಾನಕ್ಕೆ ಔಷಧಿಯೇ ಇಲ್ಲ ಎಂಬುದನ್ನು ಅರ್ಥ ಮಾಡಿಸಿದ್ದಾರೆ. ಇನ್ನು ಮುಂದೆ ಆಕೆಯ ಮೇಲೆ ಅನುಮಾನ ಪಡುವುದಿಲ್ಲ ಎಂದಾತ ಲಿಖಿತವಾಗಿ ಭರವಸೆ ಕೊಟ್ಟಿದ್ದಾನೆ ಎಂದು ಅಭಯಂ ಸಂಚಾಲಕರು ತಿಳಿಸಿದ್ದಾರೆ

ಇಷ್ಟೆಲ್ಲ ಅನುಭವಿಸಿದರೂ ನಾನವನನ್ನು ಪ್ರೀತಿಸುತ್ತೇನೆ, ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಿಲ್ಲ ಎಂದು ಮಹಿಳೆ ಹೇಳಿದ್ದಾಳೆ, ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ