ಆ್ಯಪ್ನಗರ

ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಿಗೆ ಆಸ್ಪತ್ರೆಯಲ್ಲಿ ವಿವಾಹ

ಧರೂರ್‌ನಲ್ಲಿ ಈ ಪ್ರಸಂಗ ನಡೆದಿದ್ದು, ಪರಷ್ಪರ ಪ್ರೀತಿಸುತ್ದಿದ್ದ 20 ರ ಹರೆಯದ ರೇಷ್ಮಾ ಬೇಗಂ ಮತ್ತು ನವಾಜ್ ಈ ಬಗ್ಗೆ ತಮ್ಮ ಪೋಷಕರಲ್ಲಿ ಕೂಡ ತಿಳಿಸಿದ್ದರು, ಆದರೆ ಇಬ್ಬರ ಕುಟುಂಬದವರು ಕೂಡ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದರು.

TIMESOFINDIA.COM 12 Jan 2019, 11:20 am
ಹೈದರಾಬಾದ್: ಮದುವೆಗೆ ಪೋಷಕರು ಅಡ್ಡಿ ಪಡಿಸುತ್ತಿದ್ದಾರೆಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಪ್ರೇಮಿಗಳಿಬ್ಬರು ಚಿಕಿತ್ಸೆಗಾಗಿ ದಾಖಲಾದ ಆಸ್ಪತ್ರೆಯಲ್ಲಿ ಹೊಸ ಬಾಳು ಆರಂಭಿಸಿದ ಅಪರೂಪದ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ.
Vijaya Karnataka Web Nikha



ಧರೂರ್‌ನಲ್ಲಿ ಈ ಪ್ರಸಂಗ ನಡೆದಿದ್ದು, ಪರಷ್ಪರ ಪ್ರೀತಿಸುತ್ದಿದ್ದ 20 ರ ಹರೆಯದ ರೇಷ್ಮಾ ಬೇಗಂ ಮತ್ತು ನವಾಜ್ ಈ ಬಗ್ಗೆ ತಮ್ಮ ಪೋಷಕರಲ್ಲಿ ಕೂಡ ತಿಳಿಸಿದ್ದರು, ಆದರೆ ಇಬ್ಬರ ಕುಟುಂಬದವರು ಕೂಡ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದ ನೊಂದ ರೇಷ್ಮಾ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ವಿಕರಾಬಾದ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪ್ರಿಯತಮೆ ಸಾವಿಗೆ ಶರಣಾಗಲು ಯತ್ನಿಸಿದ್ದನ್ನು ಕೇಳಿ ಆಘಾತಗೊಂಡ ನವಾಜ್ ಆಸ್ಪತ್ರೆಗೆ ಧಾವಿಸಿ ತಾನು ಕೂಡ ಕೀಟನಾಶಕ ಸೇವಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ. ಆತನಿಗೂ ಕೂಡ ಅದೇ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ತಮ್ಮ ಮಕ್ಕಳ ಈ ನಿರ್ಧಾರದಿಂದ ಆಘಾತಕ್ಕೊಳಗಾದ ಪೋಷಕರು ಆಸ್ಪತ್ರೆಯಲ್ಲಿಯೇ ಅವರಿಗೆ ಮದುವೆ ಮಾಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ