ಆ್ಯಪ್ನಗರ

ಜಲಿಯನ್‌ ವಾಲಾಬಾಗ್‌ ಸ್ಮಾರಕ ಟ್ರಸ್ಟ್‌ನಿಂದ ಕಾಂಗ್ರೆಸ್‌ ಔಟ್‌!

1919ರ ಏಪ್ರಿಲ್‌ 13ರಂದು ಅಮೃತಸರದ ಜಲಿಯನ್‌ ವಾಲಾಬಾಗ್‌ನಲ್ಲಿ ನಡೆದ ಈ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಅಧ್ಯಾಯವಾಗಿದೆ.

PTI 3 Aug 2019, 5:00 am
ಹೊಸದಿಲ್ಲಿ: ಅಮೃತಸರದ ಜಲಿಯನ್‌ ವಾಲಾಬಾಗ್‌ ಸ್ಮಾರಕ ಟ್ರಸ್ಟ್‌ಗೆ ಕಾಂಗ್ರೆಸ್‌ ಅಧ್ಯಕ್ಷರು ಕಾಯಂ ಸದಸ್ಯರಾಗಿರುವ ನಿಯಮ ರದ್ದುಪಡಿಸುವ ನಿಟ್ಟಿನಲ್ಲಿ ಮಂಡನೆಯಾದ 'ಜಲಿಯನ್‌ ವಾಲಾಬಾಗ್‌ ಸ್ಮಾರಕ ತಿದ್ದುಪಡಿ ವಿಧೇಯಕ-2019'ಅನ್ನು ಲೋಕಸಭೆ ಅಂಗೀಕರಿಸಿದೆ. ಕಾಂಗ್ರೆಸ್‌ ಸಭಾತ್ಯಾಗದ ಮಧ್ಯೆ ವಿಧೇಯಕವನ್ನು ಸದನವು ವಿಧೇಯಕವನ್ನು ಅಂಗೀಕರಿಸಿತು. ಮೊದಲು ಸದನವು ಧ್ವನಿಮತದ ಅಂಗೀಕಾರ ನೀಡಿತು. ಪ್ರತಿಪಕ್ಷಗಳು ಮತ ವಿಭಜನೆಗೆ ಒತ್ತಾಯಿಸಿದಾಗ, ವಿಧೇಯಕದ ಪರವಾಗಿ 214 ಹಾಗೂ ವಿರುದ್ಧವಾಗಿ 30 ಮತಗಳು ಬಂದವು. 1919ರ ಏಪ್ರಿಲ್‌ 13ರಂದು ಅಮೃತಸರದ ಜಲಿಯನ್‌ ವಾಲಾಬಾಗ್‌ನಲ್ಲಿ ನಡೆದ ಈ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಅಧ್ಯಾಯವಾಗಿದೆ. ದೇಶಕ್ಕಾಗಿ ಮಡಿದವರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣಗೊಂಡಿದ್ದು, ಅದರ ನಿರ್ವಹಣೆಗೆ ಟ್ರಸ್ಟ್‌ ರಚನೆಯಾಗಿದೆ.
Vijaya Karnataka Web jaliyan

58 ಹಳೆ ಕಾನೂನುಗಳು ರದ್ದು: ಸುಗಮ ಹಾಗೂ ದಕ್ಷ ಆಡಳಿತದ ಉದ್ದೇಶದಿಂದ ಗತಕಾಲದ 58 ಕಾನೂನುಗಳನ್ನು ರದ್ದುಗೊಳಿಸುವ 'ದಿ ರೀಪಿಲಿಂಗ್‌ ಅಂಡ್‌ ಅಮೆಂಡಿಂಗ್‌ ಬಿಲ್‌' ಅನ್ನು ರಾಜ್ಯಸಭೆ ಅನುಮೋದಿಸಿದೆ. ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಮಂಡಿಸಿದ ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರಗೊಂಡಿತು. ಜುಲೈ 29ರಂದು ಲೋಕಸಭೆಯಲ್ಲಿ ಇದು ಪಾಸಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ