ಆ್ಯಪ್ನಗರ

ಪುರುಷ ತುಕಡಿಯ ಸಾರಥ್ಯ ವಹಿಸಿದ ಲೆ. ಭಾವನಾ ಕಸ್ತೂರಿ

ಮಹಿಳೆಯರಿಗೆ ಅಧಿಕಾರಿ ವರ್ಗದ ಹುದ್ದೆಗಳು ಕೂಡ ಭಾರತೀಯ ಸೇನೆಯಲ್ಲಿ ದೊರೆಯುತ್ತಿದೆ ಮತ್ತು ಸಮರ್ಥವಾಗಿ ಅವರು ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಲೆ. ಭಾವನಾ ಕಸ್ತೂರಿ ಅವರನ್ನು ಶ್ಲಾಘಿಸಿದ್ದಾರೆ.

Vijaya Karnataka Web 26 Jan 2019, 6:27 pm
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ನಡೆದ ಗಣರಾಜ್ತೋತ್ಸವದ ಆಕರ್ಷಕ ಪರೇಡ್‌ನಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸಿ ನಾರಿಶಕ್ತಿ ಪ್ರದರ್ಶಿಸಿದ್ದಾರೆ.
Vijaya Karnataka Web bhavana_kasturi_1548488092


ಲೆಫ್ಟಿನೆಂಟ್‌ ಭಾವನಾ ಕಸ್ತೂರಿ ಅವರು 144 ಪುರುಷ ಯೋಧರನ್ನು ಒಳಗೊಂಡಿದ್ದ ತುಕಡಿಯ ನೇತೃತ್ವ ವಹಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದಷ್ಟೇ ಅವರು ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಮೂಲತಃ ಹೈದರಾಬಾದ್‌ನವರಾದ ಸೇನಾಧಿಕಾರಿ ಭಾವನಾ ಕಸ್ತೂರಿ, ಬೆಂಗಳೂರಿನ ಸೇನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು.

ಜತೆಗೆ 70ನೇ ಗಣರಾಜ್ಯೋತ್ಸವ ಪರೇಡ್ ಮತ್ತೆರಡು ಸಾಹಸಗಳಿಗೂ ಸಾಕ್ಷಿಯಾಯಿತು. ಸಂಪೂರ್ಣ ಮಹಿಳೆಯರ ಅಸ್ಸಾಂ ರೈಫಲ್ಸ್ ತುಕಡಿಯನ್ನು ಮೇಜರ್ ಖುಶ್ಬೂ ಕನ್ವರ್ ಮುನ್ನಡೆಸಿದ್ದರೆ, ಕ್ಯಾಪ್ಟನ್‌ ಶಿಖಾ ಸುರಭಿ ಬೈಕ್‌ ಸ್ಟಂಟ್ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಈ ಮೂಲಕ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ ವಿಶೇಷ ಅರ್ಥ ಪಡೆದುಕೊಂಡಿತು.

ಮಹಿಳೆಯರಿಗೆ ಅಧಿಕಾರಿ ವರ್ಗದ ಹುದ್ದೆಗಳು ಕೂಡ ಭಾರತೀಯ ಸೇನೆಯಲ್ಲಿ ದೊರೆಯುತ್ತಿದೆ ಮತ್ತು ಸಮರ್ಥವಾಗಿ ಅವರು ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಲೆ. ಭಾವನಾ ಕಸ್ತೂರಿ ಅವರನ್ನು ಶ್ಲಾಘಿಸಿದ್ದಾರೆ.

ಜತೆಗೆ ಪರೇಡ್‌ನಲ್ಲಿ ತುಕಡಿಯೊಂದನ್ನು ಮುನ್ನಡೆಸುವ ಅವಕಾಶ ಪಡೆಯುವ ಮೂಲಕ ಅವರು ಮತ್ತಷ್ಟು ಮಹಿಳೆಯರಿಗೆ ಸ್ಫೂರ್ತಿ ತುಂಬಿದ್ದಾರೆ ಎಂದು ಸೇನೆ ವ್ಯಾಖ್ಯಾನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ