ಆ್ಯಪ್ನಗರ

ಮಾಲೆಗಾಂವ್‌ ಸ್ಪೋಟ: 9 ವರ್ಷದ ಬಳಿಕ ಜೈಲಿಂದ ಹೊರ ಬಂದ ಪುರೋಹಿತ್‌

ಬುಧವಾರದಂದು ಟಾಲೋಜಾ ಜೈಲಿನಿಂದ ಶ್ರೀಕಾಂತ್‌ ಬಿಡುಗಡೆಯಾಗಿರುವುದಾಗಿ ವರದಿಯಾಗಿದೆ.

Vijaya Karnataka 23 Aug 2017, 1:24 pm
ಮುಂಬಯಿ: 2008ರ ಮಾಲೆಗಾಂವ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೆಫ್ಟಿನಂಟ್‌ ಕರ್ನಲ್‌ ಶ್ರೀಕಾಂತ್‌ ಪ್ರಸಾದ್‌ ಪುರೋಹಿತ್‌ಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದ ಬಳಿಕ ಬುಧವಾರದಂದು ಟಾಲೋಜಾ ಜೈಲಿನಿಂದ ಶ್ರೀಕಾಂತ್‌ ಬಿಡುಗಡೆಯಾಗಿರುವುದಾಗಿ ವರದಿಯಾಗಿದೆ.
Vijaya Karnataka Web lt colonel purohit out on bail after 9 years
ಮಾಲೆಗಾಂವ್‌ ಸ್ಪೋಟ: 9 ವರ್ಷದ ಬಳಿಕ ಜೈಲಿಂದ ಹೊರ ಬಂದ ಪುರೋಹಿತ್‌


ಕಳೆದ ಸೋಮವಾರದಂದು ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಆರ್‌.ಕೆ. ಅಗರ್ವಾಲ್‌ ಹಾಗೂ ಎ.ಎಂ. ಸಪ್ರೆ ಅವರನ್ನೊಳಗೊಂಡ ದ್ವಿಸದಸ್ಯಪೀಠ ತಾನು ಬಾಂಬೆ ಹೈಕೋರ್ಟ್‌ನ ಜಾಮೀನು ನಿರಾಕರಣೆ ಆದೇಶವನ್ನು ಪರಿಗಣಿಸುವುದಿಲ್ಲ ಎಂದು ಪುರೋಹಿತ್‌ಗೆ ಜಾಮೀನು ಮಂಜೂರು ಮಾಡಿತ್ತು.
#MalegaonBlastCase: Army vehicles escort Lt Col Shrikant Prasad Purohit after his release from Taloja jail in Navi Mumbai pic.twitter.com/AIz5DWxVsI — ANI (@ANI) August 23, 2017 ಮಾಲೆಗಾಂವ್ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಜೈಲು ಸೇರಿದ್ದ ಲೆ.ಕರ್ನಲ್ ಪುರೋಹಿತ್ ಗೆ 9 ವರ್ಷಗಳ ನಂತರ ಸುಪ್ರೀಂಕೋರ್ಟ್ ಸೋಮವಾರ ಜಾಮೀನು ನೀಡಿತ್ತು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಟಾಲೋಜಾ ಜೈಲಿನಿಂದ ಪುರೋಹಿತ್ ಬಿಡುಗಡೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ