ಆ್ಯಪ್ನಗರ

ಶ್ರೀನಗರದಲ್ಲಿ ತಿರಂಗಾ ಹಾರಿಸ ಹೊರಟ ಜಾಹ್ನವಿಗೆ ತಡೆ

ಆಗಸ್ಟ್‌ 15ರಂದು ಶ್ರೀನಗರದ ಲಾಲ್‌ ಚೌಕದಲ್ಲಿ ರಾಷ್ಟ್ರ ಧ್ವಜ ಹಾರಿಸುವುದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದ ಜಾಹ್ನವಿಯನ್ನು ಪೊಲೀಸರು ತಡೆದಿದ್ದಾರೆ.

ಏಜೆನ್ಸೀಸ್ 15 Aug 2016, 10:47 am

ಶ್ರೀನಗರ: ಆಗಸ್ಟ್‌ 15ರಂದು ಶ್ರೀನಗರದ ಲಾಲ್‌ ಚೌಕದಲ್ಲಿ ರಾಷ್ಟ್ರ ಧ್ವಜ ಹಾರಿಸುವುದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದ ಲುಧಿಯಾನಾದ 15ರ ಹರೆಯದ ಬಾಲಕಿ ಜಾಹ್ನವಿ ಬೆಹಲ್‌ಳನ್ನು ಪೊಲೀಸರು ಮಾರ್ಗ ಮಧ್ಯೆಯೇ ತಡೆದಿದ್ದಾರೆ.

ಬೆಹಲ್‌ ಸುಮಾರು 35 ಮಂದಿಯ ಜತೆಗೆ ಭಾನುವಾರ ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿನ ಅಧಿಕಾರಿಗಳು ಆಕೆಯನ್ನು ತಡೆದಿದ್ದು, ಅದೇ ವಿಮಾನದಲ್ಲಿ ಮರಳಿ ಕಳುಹಿಸಿದ್ದಾರೆ. ಕಣಿವೆಯಲ್ಲಿನ ಭದ್ರತಾ ಸ್ಥಿತಿಗತಿಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Vijaya Karnataka Web ludhiana teen jhanvi sringar
ಶ್ರೀನಗರದಲ್ಲಿ ತಿರಂಗಾ ಹಾರಿಸ ಹೊರಟ ಜಾಹ್ನವಿಗೆ ತಡೆ


ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಬುರ್ಹಾನ್‌ ವಾನಿಯ ಹತ್ಯೆ ಬಳಿಕ ಕಾಶ್ಮೀರ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ್ದ ಬೆಹಲ್‌, ಆ. 15ರಂದು ಲಾಲ್‌ ಚೌಕದಲ್ಲಿ ತಿರಂಗಾ ಹಾರಿಸುವುದಾಗಿ ಘೋಷಣೆ ಮಾಡಿದ್ದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ