ಕರುಣಾನಿಧಿ ಆರೋಗ್ಯ: 'ತಾತ್ಕಾಲಿಕ ಹಿನ್ನಡೆ' ಬಳಿಕ ಅಲ್ಪ ಚೇತರಿಕೆ
ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ 'ಅಸ್ಥಿರ ಹಿನ್ನಡೆ'ಯ ಬಳಿಕ ಮತ್ತೆ ಸುಧಾರಿಸುತ್ತಿದೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಭಾನುವಾರ ರಾತ್ರಿ ತಿಳಿಸಿದೆ.
Vijaya Karnataka Web 30 Jul 2018, 9:37 am
ಚೆನ್ನೈ: ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ 'ಅಸ್ಥಿರ ಹಿನ್ನಡೆ'ಯ ಬಳಿಕ ಮತ್ತೆ ಸುಧಾರಿಸುತ್ತಿದೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಭಾನುವಾರ ರಾತ್ರಿ ತಿಳಿಸಿದೆ.
ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಬಿಡುಗಡೆ ಮಾಡಿರುವ ಮೂರು ವಾಕ್ಯಗಳ ಬುಲೆಟಿನ್ನಲ್ಲಿ, 'ಡಿಎಂಕೆ ವರಿಷ್ಠರ ಪ್ರಮುಖ ಅಂಗಾಂಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಆದರೆ ಅವರ ಆರೋಗ್ಯ ಸ್ಥಿತಿಯನ್ನು ತಜ್ಞ ವೈದ್ಯರ ತಂಡ ತೀವ್ರ ನಿಗಾದೊಂದಿಗೆ ಅವಲೋಕಿಸುತ್ತಿದೆ' ಎಂದು ತಿಳಿಸಿದ್ದಾರೆ.
ಕರುಣಾನಿಧಿ ಮೂತ್ರನಾಳದ ಸೋಂಕಿನಿಂದ ಹಾಗೂ ಇತರ ವಯೋಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರನ್ನು ಶನಿವಾರ ರಾತ್ರಿ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ಹೊರಗೆ ಜಮಾಯಿಸಿರುವ ಸಾವಿರಾರು ಅಭಿಮಾನಿಗಳು, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಕರುಣಾನಿಧಿ ಅವರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಶಾಂತಿ ಕಾಯ್ದುಕೊಳ್ಳಬೇಕು ಎಂದು ಪಕ್ಷದ ನಾಯಕ ಹಾಗೂ ಲೋಕಸಭಾ ಸದಸ್ಯ ಎ. ರಾಜಾ ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಹೊರಗೆ ಜಮಾಯಿಸಿ ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ನಂತರ ಡಿಎಂಕೆ ಕಾರ್ಯಾಧ್ಯಕ್ಷ ಹಾಗೂ ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್ ಕೂಡ ಕಾರ್ಯಕರ್ತರಿಗೆ ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಈ ನಡುವೆ, ಗೋಪಾಲಪುರಂನ ಅವರ ನಿವಾಸದ ಹೊರಗೆ ಜಮಾಯಿಸಿದ ಪಕ್ಷದ ಸದಸ್ಯರು, 'ಕರುಣಾನಿಧಿ ಅವರಿಗೆ 25 ವರ್ಷವಷ್ಟೆ, 94 ವರ್ಷವಲ್ಲ, ಅವರು ಮತ್ತೆ ಗುಣಮುಖರಾಗಿ ಮನೆಗೆ ಬರುತ್ತಾರೆ' ಎಂದು ಘೋಷಣೆ ಕೂಗಿದರು.
ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಬಿಡುಗಡೆ ಮಾಡಿರುವ ಮೂರು ವಾಕ್ಯಗಳ ಬುಲೆಟಿನ್ನಲ್ಲಿ, 'ಡಿಎಂಕೆ ವರಿಷ್ಠರ ಪ್ರಮುಖ ಅಂಗಾಂಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಆದರೆ ಅವರ ಆರೋಗ್ಯ ಸ್ಥಿತಿಯನ್ನು ತಜ್ಞ ವೈದ್ಯರ ತಂಡ ತೀವ್ರ ನಿಗಾದೊಂದಿಗೆ ಅವಲೋಕಿಸುತ್ತಿದೆ' ಎಂದು ತಿಳಿಸಿದ್ದಾರೆ.
ಕರುಣಾನಿಧಿ ಮೂತ್ರನಾಳದ ಸೋಂಕಿನಿಂದ ಹಾಗೂ ಇತರ ವಯೋಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರನ್ನು ಶನಿವಾರ ರಾತ್ರಿ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ಹೊರಗೆ ಜಮಾಯಿಸಿರುವ ಸಾವಿರಾರು ಅಭಿಮಾನಿಗಳು, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಕರುಣಾನಿಧಿ ಅವರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಶಾಂತಿ ಕಾಯ್ದುಕೊಳ್ಳಬೇಕು ಎಂದು ಪಕ್ಷದ ನಾಯಕ ಹಾಗೂ ಲೋಕಸಭಾ ಸದಸ್ಯ ಎ. ರಾಜಾ ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಹೊರಗೆ ಜಮಾಯಿಸಿ ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ನಂತರ ಡಿಎಂಕೆ ಕಾರ್ಯಾಧ್ಯಕ್ಷ ಹಾಗೂ ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್ ಕೂಡ ಕಾರ್ಯಕರ್ತರಿಗೆ ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಈ ನಡುವೆ, ಗೋಪಾಲಪುರಂನ ಅವರ ನಿವಾಸದ ಹೊರಗೆ ಜಮಾಯಿಸಿದ ಪಕ್ಷದ ಸದಸ್ಯರು, 'ಕರುಣಾನಿಧಿ ಅವರಿಗೆ 25 ವರ್ಷವಷ್ಟೆ, 94 ವರ್ಷವಲ್ಲ, ಅವರು ಮತ್ತೆ ಗುಣಮುಖರಾಗಿ ಮನೆಗೆ ಬರುತ್ತಾರೆ' ಎಂದು ಘೋಷಣೆ ಕೂಗಿದರು.